‘ಒತ್ತಡದ ಬದುಕಿನಲ್ಲಿ ಮರೆವಿನ ಕಾಯಿಲೆ ಎಲ್ಲಡೆ ಆವರಿಸಿಕೊಂಡಿದೆ. ತಂದೆ ಮಗನನ್ನು ಮರೆಯುವುದು, ಅಣ್ಣ ತಮ್ಮನನ್ನು ಮರೆಯುವುದು, ನಮ್ಮ ಪೂರ್ವ ಇತಿಹಾಸಗಳನ್ನು ಮರೆಯುವುದು, ಸೊಗಡಿನ ಪರಂಪರೆ ಮರೆಯುವುದು, ಇದು ಮರೆಯುವ ಕಾಲವಾಗಿ ಬದಲಾಗಿದೆ. ಹಿಂದೆ ಒಂದು ಸಣ್ಣ ಸಹಾಯ ಮಾಡಿದರೂ ಸಾಯುವವರೆಗೆ ನೆನಪಿನಲ್ಲಿಟ್ಟುಕೊಳ್ಳುವ ಮನಸ್ಥಿತಿ ಇತ್ತು. ಈಗ ಸಂಬಂಧಿಗಳನ್ನೇ ಬಳಸಿ, ಬಿಸಾಕುವ ವಸ್ತುಗಳಂತೆ ಕಾಣುವ ಸಂಕಷ್ಟದ ಸಂಕೋಲೆಯಲ್ಲಿದ್ದೇವೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.