ಶಿವಮೊಗ್ಗ: ‘ಸರ್ಕಾರ ನಮಗೆ ಕೊರೊನಾ ವಾರಿಯರ್ ಎಂಬ ಪಟ್ಟ ಕೊಟ್ಟಿದೆ. ಆದರೆ, ಕೊರೊನಾದಿಂದ ಏನಾದರೂ ಹೆಚ್ಚು ಕಡಿಮೆಯಾದರೆ ಏನು ಗತಿ, ನಮ್ಮ ಕುಟುಂಬವನ್ನು ಯಾರು ನೋಡಿಕೊಳ್ಳುತ್ತಾರೆ? ಎಂಬ ಭಯ. ದೇವರ ಮೇಲೆ ಭಾರ ಹಾಕಿ ಕಾರ್ಯನಿರ್ವಹಿಸುತ್ತಿದ್ದೇನೆ’ ಎಂಬುದು ಮೆಗ್ಗಾನ್ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಶುಶ್ರೂಷಕಿ ಬಿಂದು ಅವರ ಅಳಲು.