ನೆಂಟರ ಮನೆಗಳಲ್ಲೇ ಆಶ್ರಯ: ಮಳೆಗಾಲ ಮುಗಿಯುವವರೆಗೂ ಸಮೀಪದ ನೆಂಟರಮನೆಗಳಲ್ಲಿ ಆಶ್ರಯ ಕಲ್ಪಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಆಶ್ರಯ ಕೊಟ್ಟವರಿಗೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ ಪ್ರತಿ ತಿಂಗಳು ₹ 5 ಸಾವಿರ ಮನೆ ಬಾಡಿಗೆ ನೀಡುವ ಪ್ರಸ್ತಾವ ಮುಂದಿಟ್ಟಿದೆ. ಮಳೆಗಾಲ ಮುಗಿದ ನಂತರ ಸರ್ವೆ ಮಾಡಿ, ಖಾತೆ ಇರುವ ಜಮೀನು, ತೋಟಗಳಿಗೆ ಪರ್ಯಾಯ ಭೂಮಿ, ನಿವೇಶನ ಒದಗಿಸುವ ಭರವಸೆ ನೀಡಿದೆ.