ಸಾಗರಕ್ಕೆ ಸಮೀಪದ ಓತಿಗೋಡು ಗ್ರಾಮದಲ್ಲಿ ಗ್ರಾಮಸ್ಥರಿಂದಲೇ ನಡೆಯುತ್ತಿರುವ ಚಿಲುಮೆಮಠದ ಬ್ರಹ್ಮನ ಕೆರೆ ಪುನಶ್ಚೇತನ ಕಾಮಗಾರಿ
ಕೆಲವೆಡೆ ಅಕ್ರಮವಾಗಿ ಕೆರೆಗಳ ಮಣ್ಣನ್ನು ಸಾಗಿಸುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ಈ ನಿಯಮ ರೂಪಿಸಲಾಗಿದೆ. ಅರ್ಜಿ ಸಲ್ಲಿಸಿದವರಿಗೆ ವಿಳಂಬವಿಲ್ಲದಂತೆ ಪರವಾನಗಿ ನೀಡಲಾಗುವುದು.
–ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ
ಬಯಲುಸೀಮೆಯಲ್ಲಿ ಕೆರೆಯ ಹೂಳು ತೆಗೆದಾಗ ದೊರೆಯುವ ಮಣ್ಣು ಫಲವತ್ತಾಗಿರುತ್ತದೆ. ಆದರೆ ಮಲೆನಾಡಿನ ಕೆರೆಗಳಲ್ಲಿ ದೊರಕುವ ಮಣ್ಣು ಕೆಸರಿನಿಂದ ಕೂಡಿರುತ್ತದೆ. ಈ ಮಣ್ಣನ್ನು ಲೇ ಔಟ್ಗಳಿಗೆ ಬಳಸಲು ಬರುವುದಿಲ್ಲ. ನಿಯಮ ರೂಪಿಸುವಾಗ ಜಿಲ್ಲಾಡಳಿತ ಇಂತಹ ಭೌಗೋಳಿಕ ವ್ಯತ್ಯಾಸಗಳನ್ನು ಪರಿಗಣಿಸಬೇಕಿತ್ತು.
–ಅಖಿಲೇಶ್ ಚಿಪ್ಪಳಿ ಪರಿಸರ ಕಾರ್ಯಕರ್ತ ಸ್ವಾನ್ ಅಂಡ್ ಮ್ಯಾನ್ ಸಂಸ್ಥೆ
ಕೆರೆಗಳ ಹೂಳೆತ್ತಲು ಮಣ್ಣು ಸಾಗಿಸಲು ಪರವಾನಗಿ ಅಗತ್ಯವಿಲ್ಲ ಎಂಬ ಕಾರಣಕ್ಕೆ ಸ್ವಯಂ ಸೇವಾ ಸಂಸ್ಥೆಗಳು ಕೆರೆ ಪುನಶ್ಚೇತನಕ್ಕೆ ಮುಂದಾಗಿವೆ. ಸ್ಥಳೀಯರ ಸಹಕಾರವೂ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಕಾರಣವಾಗುತ್ತಿದೆ. ಸರ್ಕಾರದ ನಿಯಮಗಳು ಜಟಿಲವಾದರೆ ಸಂಸ್ಥೆಗಳ ಉತ್ಸಾಹ ಕುಗ್ಗುತ್ತದೆ.