ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕುನಾಯಿ ಕೊಲೆ: ಎರಡು ಕುಟುಂಬಗಳ ನಡುವೆ ಹೊಡೆದಾಟ

Last Updated 5 ಏಪ್ರಿಲ್ 2022, 4:46 IST
ಅಕ್ಷರ ಗಾತ್ರ

ಕುಂಸಿ: ಸಾಕುನಾಯಿ ಕೊಂದ ವಿಚಾರವಾಗಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ.

ಸಮೀಪದ ಮಂಡಘಟ್ಟದಲ್ಲಿ ವಿಜಯ್ ಮತ್ತು ವಾಸುದೇವ್ ಅವರು ಈಚೆಗೆ ಬೈಕ್‌ನಲ್ಲಿ ಹೋಗುತ್ತಿದ್ದಾಗ ಅದೇ ಗ್ರಾಮದ ಹೇಮಂತ್ ಅವರು ಸಾಕಿದ್ದ ನಾಯಿ ಅಟ್ಟಿಸಿಕೊಂಡು ಬಂದಿದೆ. ಇನ್ನೇನು ಕಚ್ಚೇ ಬಿಟ್ಟಿತು ಎನ್ನುವಷ್ಟರಲ್ಲಿ ನಾಯಿಯನ್ನು ದೊಣ್ಣೆಯಿಂದ ಹೊಡೆದು ಮಂಡಘಟ್ಟದ ಮೂರನೇ ತಿರುವಿನಲ್ಲಿ ಎಸೆಯಲಾಗಿದೆ.

ವಿಷಯ ತಿಳಿದ ಹೇಮಂತ್ ಅವರು ವಿಜಯ್ ಅವರ ಮನೆಗೆ ತೆರಳಿ, ‘ನಾಯಿಯನ್ನು ಏಕೆ ಸಾಯಿಸಿದ್ದೀಯಾ’ ಎಂದು ಪ್ರಶ್ನಿಸಿದ್ದಾರೆ. ಆಗ
ವಿಜಯ್, ವಾಸುದೇವ್, ರಾಮಚಂದ್ರ ಮತ್ತು ಸುಲೋಚನಾ ಎಂಬುವವರು ಹೇಮಂತ್ ಮೇಲೆ ಏಕಾಏಕಿ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ.

ಈ ವೇಳೆ ಹೇಮಂತ್ ಗಾಯಗೊಂಡಿದ್ದಾರೆ. ಗ್ರಾಮಸ್ಥರು ಜಗಳ ಬಿಡಿಸಿದ್ದಾರೆ. ಗಾಯಗೊಂಡ ಹೇಮಂತ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಕುಂಸಿ ಠಾಣೆಯಲ್ಲಿ ದೂರು– ಪ್ರತಿದೂರು ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT