ಸಾಗರ: ಇಲ್ಲಿನ ಪ್ರಧಾನ ಅಂಚೆ ಕಚೇರಿಯಲ್ಲಿ ಅಂಚೆ ಮನೋರಂಜನಾ ಬಳಗದ ವತಿಯಿಂದ ಅಂಚೆ ಪೆಟ್ಟಿಗೆಯಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿದ್ದು, ಭಕ್ತರ ಗಮನ ಸೆಳೆಯುತ್ತಿದೆ.
ಅಂಚೆ ಪೆಟ್ಟಿಗೆಯ ಹಿನ್ನೆಲೆಯಾಗಿ ಪೇಪರ್ ಕಪ್ಗಳನ್ನು ಬಳಸಿ ಪ್ರಭಾವಳಿಯನ್ನು ನಿರ್ಮಿಸಲಾಗಿದೆ. ಈ ಮೂಲಕ ಪರಿಸರಸ್ನೇಹಿ ಗಣಪನಿಗೆ ಪರಿಸರಸ್ನೇಹಿ ವಾತಾವರಣವನ್ನು ಕಲ್ಪಿಸಲಾಗಿದೆ. ಪೋಸ್ಟ್ ಮ್ಯಾನ್ ಅವಿನಾಶ್ ಅವರು ತಮ್ಮ ಸಹದ್ಯೋಗಿ ಮಿತ್ರರೊಂದಿಗೆ ಈ ವಿನ್ಯಾಸವನ್ನು ರೂಪಿಸಿರುವುದು ವಿಶೇಷ.