<p><strong>ಶಿವಮೊಗ್ಗ:</strong>ಗುಂಡಪ್ಪ ಶೆಡ್ನಲ್ಲಿರುವಭಾರತೀಯ ಕುಟುಂಬ ಯೋಜನಾ ಸಂಘದ (ಎಫ್ಪಿಎಐ) ಆಸ್ಪತ್ರೆಯ ಕಟ್ಟಡದ ಕೆಲವು ಭಾಗಗಳನ್ನುದಿಢೀರ್ ಕೆಡವಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಎಸ್.ಬಿ.ಅಶೋಕ್ಕುಮಾರ್ ಒತ್ತಾಯಿಸಿದರು.</p>.<p>ಆಸ್ಪತ್ರೆಯ ಶೌಚಾಲಯ, ಸ್ನಾನಗೃಹ, ಕಾಂಪೌಂಡ್, ಕಾರ್ಶೆಡ್ಕೆಡವಿದ್ದಾರೆ. ಬಡವರಿಗಾಗಿಯೇ ಇರುವ ಸೇವಾಮನೋಭಾವದ ಆಸ್ಪತ್ರೆಯನ್ನುಸ್ಮಾರ್ಟ್ಸಿಟಿ ಅಧಿಕಾರಿಗಳು ನೋಟಿಸ್ನೀಡದೇ, ಸಂಘದ ಗಮನಕ್ಕೆ ತಾರದೇಧ್ವಂಸ ಮಾಡಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿದೂರದಿರು.</p>.<p>47 ವರ್ಷಗಳಿಂದ ತಾಯಿ-ಮಗುವಿನ ಆರೋಗ್ಯ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಯ ಸೇವೆ ನೀಡುತ್ತಾ ಬಂದಿದೆ.ಗರ್ಭಿಣಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿದೆ. 1974ರಲ್ಲಿ ಆರಂಭವಾದ ಆಸ್ಪತ್ರೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಗುಂಡಪ್ಪಶೆಡ್ ಬಡಾವಣೆಯಲ್ಲಿನಿವೇಶನಮಂಜೂರು ಮಾಡಿತ್ತು.2002ರಲ್ಲೇಸ್ವಂತ ಕಟ್ಟಡ ನಿರ್ಮಿಸಲಾಗಿತ್ತು ಎಂದು ವಿವರ ನೀಡಿದರು.</p>.<p>ಕಟ್ಡದ ಸುತ್ತ ಇರುವ ಹೆಚ್ಚುವರಿ ಜಾಗ ಆಸ್ಪತ್ರೆಗೇ ನೀಡುವಂತೆ ಮನವಿ ಮಾಡಿದ್ದೆವು. ಆಸ್ಪತ್ರೆಯ ಸೇವಾ ಮನೋಭಾವ ಗುರುತಿಸಿದ ಪಾಲಿಕೆಯ ಹಿಂದಿನ ಆಯುಕ್ತೆಚಾರುಲತಾ ಸೋಮಲ್ ಸಮ್ಮತಿಸಿದ್ದರು. ಅವರವರ್ಗಾವಣೆಯ ನಂತರ ಬಂದ ಆಯುಕ್ತರು ಆಸ್ಪತ್ರೆಯ ಕಟ್ಟಡಕೆಡವಲು ಸೂಚಿಸಿದ್ದಾರೆ. ಈ ಕೃತ್ಯದ ಹೊಣೆ ಅವರೇ ಹೋರಬೇಕು ಎಂದರು.</p>.<p>ಸಾರ್ವಜನಿಕ ಆಸ್ಪತ್ರೆ ಕಟ್ಟಡ ಕೆಡವಿರುವುದು ಅಮಾನವೀಯ. ಭಾರತೀಯ ಕುಟುಂಬ ಯೋಜನಾ ಸಂಘ ಒಂದು ಅಂತರರಾಷ್ಟ್ರೀಯ ಸಂಸ್ಥೆ. ಕಟ್ಟಡದ ಧ್ವಂಸದಿಂದ ₨ 20 ಲಕ್ಷ ನಷ್ಟವಾಗಿದೆ. ಈ ಕೃತ್ಯಜಿಲ್ಲಾಧಿಕಾರಿ ಗಮನಕ್ಕೂ ಬಂದಿಲ್ಲ. ಇದೊಂದು ನೀಚ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿಸಂಘದ ಅಧ್ಯಕ್ಷೆ ಪುಷ್ಪಾಶೆಟ್ಟಿ, ಪದಾಧಿಕಾರಿಗಳಾದ ಪ್ರೊ.ಚಂದ್ರಶೇಖರ್, ಭಾರತೀ ಚಂದ್ರಶೇಖರ್, ಕಿರಣ್ ದೇಸಾಯಿ, ಉಮೇಶ್ ಆರಾಧ್ಯ, ರಮೇಶ್ ಬಾಬು ಜಾಧವ್, ಎ.ಎಸ್.ಹನುಮಾನ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong>ಗುಂಡಪ್ಪ ಶೆಡ್ನಲ್ಲಿರುವಭಾರತೀಯ ಕುಟುಂಬ ಯೋಜನಾ ಸಂಘದ (ಎಫ್ಪಿಎಐ) ಆಸ್ಪತ್ರೆಯ ಕಟ್ಟಡದ ಕೆಲವು ಭಾಗಗಳನ್ನುದಿಢೀರ್ ಕೆಡವಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಘದ ಕಾರ್ಯದರ್ಶಿ ಎಸ್.ಬಿ.ಅಶೋಕ್ಕುಮಾರ್ ಒತ್ತಾಯಿಸಿದರು.</p>.<p>ಆಸ್ಪತ್ರೆಯ ಶೌಚಾಲಯ, ಸ್ನಾನಗೃಹ, ಕಾಂಪೌಂಡ್, ಕಾರ್ಶೆಡ್ಕೆಡವಿದ್ದಾರೆ. ಬಡವರಿಗಾಗಿಯೇ ಇರುವ ಸೇವಾಮನೋಭಾವದ ಆಸ್ಪತ್ರೆಯನ್ನುಸ್ಮಾರ್ಟ್ಸಿಟಿ ಅಧಿಕಾರಿಗಳು ನೋಟಿಸ್ನೀಡದೇ, ಸಂಘದ ಗಮನಕ್ಕೆ ತಾರದೇಧ್ವಂಸ ಮಾಡಿದ್ದಾರೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿದೂರದಿರು.</p>.<p>47 ವರ್ಷಗಳಿಂದ ತಾಯಿ-ಮಗುವಿನ ಆರೋಗ್ಯ, ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಯ ಸೇವೆ ನೀಡುತ್ತಾ ಬಂದಿದೆ.ಗರ್ಭಿಣಿ ಮಹಿಳೆಯರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿದೆ. 1974ರಲ್ಲಿ ಆರಂಭವಾದ ಆಸ್ಪತ್ರೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಗುಂಡಪ್ಪಶೆಡ್ ಬಡಾವಣೆಯಲ್ಲಿನಿವೇಶನಮಂಜೂರು ಮಾಡಿತ್ತು.2002ರಲ್ಲೇಸ್ವಂತ ಕಟ್ಟಡ ನಿರ್ಮಿಸಲಾಗಿತ್ತು ಎಂದು ವಿವರ ನೀಡಿದರು.</p>.<p>ಕಟ್ಡದ ಸುತ್ತ ಇರುವ ಹೆಚ್ಚುವರಿ ಜಾಗ ಆಸ್ಪತ್ರೆಗೇ ನೀಡುವಂತೆ ಮನವಿ ಮಾಡಿದ್ದೆವು. ಆಸ್ಪತ್ರೆಯ ಸೇವಾ ಮನೋಭಾವ ಗುರುತಿಸಿದ ಪಾಲಿಕೆಯ ಹಿಂದಿನ ಆಯುಕ್ತೆಚಾರುಲತಾ ಸೋಮಲ್ ಸಮ್ಮತಿಸಿದ್ದರು. ಅವರವರ್ಗಾವಣೆಯ ನಂತರ ಬಂದ ಆಯುಕ್ತರು ಆಸ್ಪತ್ರೆಯ ಕಟ್ಟಡಕೆಡವಲು ಸೂಚಿಸಿದ್ದಾರೆ. ಈ ಕೃತ್ಯದ ಹೊಣೆ ಅವರೇ ಹೋರಬೇಕು ಎಂದರು.</p>.<p>ಸಾರ್ವಜನಿಕ ಆಸ್ಪತ್ರೆ ಕಟ್ಟಡ ಕೆಡವಿರುವುದು ಅಮಾನವೀಯ. ಭಾರತೀಯ ಕುಟುಂಬ ಯೋಜನಾ ಸಂಘ ಒಂದು ಅಂತರರಾಷ್ಟ್ರೀಯ ಸಂಸ್ಥೆ. ಕಟ್ಟಡದ ಧ್ವಂಸದಿಂದ ₨ 20 ಲಕ್ಷ ನಷ್ಟವಾಗಿದೆ. ಈ ಕೃತ್ಯಜಿಲ್ಲಾಧಿಕಾರಿ ಗಮನಕ್ಕೂ ಬಂದಿಲ್ಲ. ಇದೊಂದು ನೀಚ ಕೃತ್ಯ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಪತ್ರಿಕಾಗೋಷ್ಠಿಯಲ್ಲಿಸಂಘದ ಅಧ್ಯಕ್ಷೆ ಪುಷ್ಪಾಶೆಟ್ಟಿ, ಪದಾಧಿಕಾರಿಗಳಾದ ಪ್ರೊ.ಚಂದ್ರಶೇಖರ್, ಭಾರತೀ ಚಂದ್ರಶೇಖರ್, ಕಿರಣ್ ದೇಸಾಯಿ, ಉಮೇಶ್ ಆರಾಧ್ಯ, ರಮೇಶ್ ಬಾಬು ಜಾಧವ್, ಎ.ಎಸ್.ಹನುಮಾನ್ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>