<p><strong>ಶಿವಮೊಗ್ಗ</strong>: ಉಚಿತ ಆಯುರ್ವೇದಕಿಟ್ ವಿತರಣೆಯ ಪುನರಾವರ್ತನೆ ತಡೆಯಲು ಆಧಾರ್ ಕಾರ್ಡ್ ಸಂಗ್ರಹಿಸಲಾಗುತ್ತಿದೆ. ಇತರೆ ಯಾವುದೇ ಉದ್ದೇಶವಿಲ್ಲ. ದುರುಪಯೋಗ ಆಗುವುದಿಲ್ಲಎಂದು ಕೋವಿಡ್ ಕಾರ್ಯ ಪಡೆಯ ಮುಖ್ಯಸ್ಥ ಡಿ.ಎಸ್.ಅರುಣ್ಹೇಳಿದರು.</p>.<p>ಆಧಾರ್ ಕಾರ್ಡ್ ಪಡೆಯುತ್ತಿರುವುದಕ್ಕೆಸಾಕಷ್ಟು ಅಪಸ್ವರ ಕೇಳಿಬರುತ್ತಿದೆ. ಕಿಟ್ ಎಲ್ಲರಿಗೂ ತಲುಪಿಸುವ ಮುಖ್ಯ ಆಶಯ ಹಾಗೂ ಕೊಟ್ಟವರಿಗೆ ಮತ್ತೆ ಕೊಡುವುದನ್ನು ತಪ್ಪಿಸಲು ಈ ಕ್ರಮ ಅನಿವಾರ್ಯ. ಇದರಿಂದ ನಾಗರಿಕರಿಗೆಯಾವುದೇ ಸಮಸ್ಯೆ ಇಲ್ಲ ಎಂದು ಸೋಮವಾರ ಪತ್ರಿಕಾಗೊಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.</p>.<p>ಶಿವಮೊಗ್ಗ ನಗರದಲ್ಲಿ ಹಂಚುತ್ತಿರುವ ಉಚಿತ ಆಯುರ್ವೆದಕಿಟ್ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಬೂತ್ಮಟ್ಟದಲ್ಲಿ ಈಗಾಗಲೇ 85 ಸಾವಿರ ಜನರಿಗೆ ನೀಡಲಾಗಿದೆ. 2ನೇ ಹಂತದಲ್ಲಿ 5 ವಾರ್ಡ್ಗಳಲ್ಲಿ ವಿತರಣೆ ಆರಂಭಿಸಲಾಗಿದೆಆ.14ರ ಒಳಗೆಕಿಟ್ ವಿತರಣೆ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.</p>.<p>ಸುರಕ್ಷಾ ಪಡೆ ವಿತರಿಸುತ್ತಿರುವ ಒಂದು ಕಿಟ್ಗೆ ₹100 ಖರ್ಚಾಗುತ್ತಿದೆ.4 ಲಕ್ಷ ಕಿಟ್ಗಳಿಗೆ₹4 ಕೋಟಿ ಆವಶ್ಯಕತೆ ಇದೆ. ಹಾಗಾಗಿ ಸಂಘ ಸಂಸ್ಥೆಗಳ ನೆರವು ಕೇಳಲಾಗಿತ್ತು. ಯಾವುದೇ ಮನೆಗಳಿಗೆ ಹೋಗಿ ರಶೀದಿ ಕೊಟ್ಟು ವಸೂಲಿ ಮಾಡುತ್ತಿಲ್ಲ.ಈಗಾಗಲೇ ಸುಮಾರು ₹ 10 ಲಕ್ಷ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ನೆರವು ನೀಡಿದ್ದಾರೆ ಎಂದು ವಿವರ ನೀಡಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಆರ್ಎಸ್ಎಸ್ ಪ್ರಮುಖ ವಿಜೇಂದ್ರ ಸೂಲಿಕೆರೆ, ಎನ್.ಜಿ.ನಾಗರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಉಚಿತ ಆಯುರ್ವೇದಕಿಟ್ ವಿತರಣೆಯ ಪುನರಾವರ್ತನೆ ತಡೆಯಲು ಆಧಾರ್ ಕಾರ್ಡ್ ಸಂಗ್ರಹಿಸಲಾಗುತ್ತಿದೆ. ಇತರೆ ಯಾವುದೇ ಉದ್ದೇಶವಿಲ್ಲ. ದುರುಪಯೋಗ ಆಗುವುದಿಲ್ಲಎಂದು ಕೋವಿಡ್ ಕಾರ್ಯ ಪಡೆಯ ಮುಖ್ಯಸ್ಥ ಡಿ.ಎಸ್.ಅರುಣ್ಹೇಳಿದರು.</p>.<p>ಆಧಾರ್ ಕಾರ್ಡ್ ಪಡೆಯುತ್ತಿರುವುದಕ್ಕೆಸಾಕಷ್ಟು ಅಪಸ್ವರ ಕೇಳಿಬರುತ್ತಿದೆ. ಕಿಟ್ ಎಲ್ಲರಿಗೂ ತಲುಪಿಸುವ ಮುಖ್ಯ ಆಶಯ ಹಾಗೂ ಕೊಟ್ಟವರಿಗೆ ಮತ್ತೆ ಕೊಡುವುದನ್ನು ತಪ್ಪಿಸಲು ಈ ಕ್ರಮ ಅನಿವಾರ್ಯ. ಇದರಿಂದ ನಾಗರಿಕರಿಗೆಯಾವುದೇ ಸಮಸ್ಯೆ ಇಲ್ಲ ಎಂದು ಸೋಮವಾರ ಪತ್ರಿಕಾಗೊಷ್ಠಿಯಲ್ಲಿ ಸ್ಪಷ್ಟನೆ ನೀಡಿದರು.</p>.<p>ಶಿವಮೊಗ್ಗ ನಗರದಲ್ಲಿ ಹಂಚುತ್ತಿರುವ ಉಚಿತ ಆಯುರ್ವೆದಕಿಟ್ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಬೂತ್ಮಟ್ಟದಲ್ಲಿ ಈಗಾಗಲೇ 85 ಸಾವಿರ ಜನರಿಗೆ ನೀಡಲಾಗಿದೆ. 2ನೇ ಹಂತದಲ್ಲಿ 5 ವಾರ್ಡ್ಗಳಲ್ಲಿ ವಿತರಣೆ ಆರಂಭಿಸಲಾಗಿದೆಆ.14ರ ಒಳಗೆಕಿಟ್ ವಿತರಣೆ ಕಾರ್ಯ ಪೂರ್ಣಗೊಳ್ಳಲಿದೆ ಎಂದರು.</p>.<p>ಸುರಕ್ಷಾ ಪಡೆ ವಿತರಿಸುತ್ತಿರುವ ಒಂದು ಕಿಟ್ಗೆ ₹100 ಖರ್ಚಾಗುತ್ತಿದೆ.4 ಲಕ್ಷ ಕಿಟ್ಗಳಿಗೆ₹4 ಕೋಟಿ ಆವಶ್ಯಕತೆ ಇದೆ. ಹಾಗಾಗಿ ಸಂಘ ಸಂಸ್ಥೆಗಳ ನೆರವು ಕೇಳಲಾಗಿತ್ತು. ಯಾವುದೇ ಮನೆಗಳಿಗೆ ಹೋಗಿ ರಶೀದಿ ಕೊಟ್ಟು ವಸೂಲಿ ಮಾಡುತ್ತಿಲ್ಲ.ಈಗಾಗಲೇ ಸುಮಾರು ₹ 10 ಲಕ್ಷ ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕರು ನೆರವು ನೀಡಿದ್ದಾರೆ ಎಂದು ವಿವರ ನೀಡಿದರು.</p>.<p>ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಎಸ್.ಜ್ಞಾನೇಶ್ವರ್, ಆರ್ಎಸ್ಎಸ್ ಪ್ರಮುಖ ವಿಜೇಂದ್ರ ಸೂಲಿಕೆರೆ, ಎನ್.ಜಿ.ನಾಗರಾಜ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>