ಉತ್ತಮ ಮಳೆ ಆಗುತ್ತಿರುವುದರಿಂದ ರೈತರು ಕೃಷಿ ಚಟುವಟಿಕೆ ಆರಂಭಿಸಿದ್ದಾರೆ. ಕೆರೆ ಕಟ್ಟೆಗಳು ಪೂರ್ಣ ತುಂಬಿದರೆ ಮಳೆ ಕೈಕೊಟ್ಟಾಗ ಫಲಸಿಗೆ ಆ ನೀರನ್ನು ಬಳಸಿಕೊಳ್ಳಲು ಸಾಧ್ಯ. ಇನ್ನೂ ಶೇ 50ರಷ್ಟು ಮಳೆ ಆಗಬೇಕಿದೆ.
ಕೆ.ಜಿ.ಕುಮಾರ್, ಸಹಾಯಕ ಕೃಷಿ ಅಧಿಕಾರಿ
ತುಂತುರು ಮಳೆಯಿಂದ ಬಿತ್ತನೆಗೆ ಅಡ್ಡಿಯಾಗಿದೆ. ಭತ್ತದ ನಾಟಿ ನಂತರದಲ್ಲಿ ಮಳೆ ಕಡಿಮೆಯಾದಾಗ ಕಾಲುವೆ ಮೂಲಕ ನೀರು ಹಾಯಿಸಲು ಕೆರೆಗಳು ಭರ್ತಿಯಾಗಬೇಕಿದೆ. ಇನ್ನಷ್ಟು ಮಳೆ ಅಗತ್ಯ ಇದೆ.
ರಾಜಶೇಖರಗೌಡ ತ್ಯಾವಗೋಡು, ರೈತ
ಸೊರಬ ತಾಲ್ಲೂಕಿನ ಚಂದ್ರಗುತ್ತಿ ಗ್ರಾಮದಲ್ಲಿ ಭತ್ತ ನಾಟಿ ಮಾಡಿತ್ತಿರುವ ರೈತ ಮಹಿಳೆಯರು