ಪೂಜೆ ಮುಗಿದ ನಂತರ ದೇವಸ್ಥಾನದ ಪ್ರವೇಶ ನಿರ್ಬಂಧಿಸಿ, ಬಾಗಿಲು ಮುಚ್ಚಿದರು. ಇದರಿಂದ ಪ್ರಸಿದ್ಧ ಕೋಟೆ ಆಂಜನೇಯ ದೇವಸ್ಥಾನ ಸೇರಿದಂತೆ ದೇವಸ್ಥಾನಗಳು ಬಿಕೋ ಎನ್ನುತ್ತಿದ್ದವು. ಪ್ರತಿವರ್ಷ ನಗರದ ವಿವಿಧೆಡೆ ರಾಮನವಮಿ ಆಚರಣೆ ದಿನ ಕೋಸಂಬರಿ, ಪಾನಕ, ಮಜ್ಜಿಗೆ ವಿತರಿಸಲಾಗುತ್ತಿತ್ತು. ಆದರೆ, ಈ ವರ್ಷ ಕೊರೊನಾದಿಂದ ಲಾಕ್ಡೌನ್ ಆಗಿರುವುದರಿಂದ ಅನೇಕರು ಮನೆಗಳಲ್ಲಿಯೇ ರಾಮನವಮಿ ಆಚರಿಸಿದರು.