<p><strong>ಸಾಗರ:</strong> ಮೂರು ತಲೆಮಾರುಗಳಿಂದ ಅರಣ್ಯಭೂಮಿಯಲ್ಲಿಸಾಗುವಳಿ ಮಾಡುತ್ತಿದ್ದರೂ ಅರಣ್ಯಭೂಮಿ ಹಕ್ಕುಕಾಯ್ದೆಯಡಿ ಸಕ್ರಮೀಕರಣಕ್ಕಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಉಪವಿಭಾಗ ಮಟ್ಟದ ಅಧಿಕಾರಿ ಸಾರಾಸಗಟಾಗಿ ತಿರಸ್ಕರಿಸುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ದೂರಿದರು.</p>.<p>ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯಭೂಮಿ ಹಕ್ಕುಕಾಯ್ದೆಯಡಿ ಸಲ್ಲಿಸಿದ್ದ 480 ಅರ್ಜಿಗಳನ್ನು ಈಚೆಗೆ ಉಪವಿಭಾಗಾಧಿಕಾರಿ ವಜಾ ಮಾಡಿದ್ದಾರೆ. ಇಲ್ಲಿನ ಬಹುತೇಕ ಅರ್ಜಿದಾರರು ಮಡೇನೂರು ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಮುಳುಗಡೆಯಾಗಿ ಪುನರ್ ವಸತಿಗಾಗಿ ಈ ಭಾಗಕ್ಕೆ ಬಂದವರು. ಇಂತಹ ಸಂತ್ರಸ್ತರ ಅರ್ಜಿ ವಜಾ ಮಾಡಿರುವುದು ಅವರ ಸಾಗುವಳಿಯನ್ನೇ ತಿರಸ್ಕರಿಸಿದಂತಾಗಿದೆ’ಎಂದರು.</p>.<p>ಚೆನ್ನಶೆಟ್ಟಿಕೊಪ್ಪ, ಜಂಬೂರುಮನೆ, ಐಗಿನಬೈಲು, ಹೊಸೂರು, ಹಾರ್ನಳ್ಳಿ, ಹೊಸಗುಂದ, ಹಂದಿಗನೂರು, ಬೇಡರಕೊಪ್ಪ, ಚಿಪ್ಪಳಿ, ಬಳ್ಳಿಬೈಲು ಮೊದಲಾದ ಗ್ರಾಮಗಳ ಅರ್ಜಿದಾರರು 90 ವರ್ಷ ಹಿರಿಯರ ಹೇಳಿಕೆ ಪ್ರಮಾಣಪತ್ರವನ್ನು ಸಾಕ್ಷಿ ರೂಪದಲ್ಲಿ ಸಲ್ಲಿಸಿದ್ದರೂ ಅಧಿಕಾರಿಗಳು ಅದನ್ನು ಪರಿಗಣಿಸಿಲ್ಲ ಎಂದು ದೂರಿದರು.</p>.<p>ಅರ್ಜಿಗಳನ್ನು ಅವೈಜ್ಞಾನಿಕವಾಗಿ ತಿರಸ್ಕರಿಸುತ್ತಿರುವುದನ್ನು ವಿರೋಧಿಸಿ ಜ.27ರಂದು ಬೆಳಿಗ್ಗೆ 11ಕ್ಕೆ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾಗುವಳಿದಾರರ ಅರ್ಜಿ ತಿರಸ್ಕಾರ ಮಾಡುತ್ತಿರುವ ವಿಷಯವನ್ನು ಕ್ಷೇತ್ರದ ಶಾಸಕರು ಹಾಗೂ ಸಂಸದರು ಗಂಭೀರವಾಗಿ ಪರಿಗಣಿಸಿ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.</p>.<p>ಮಲೆನಾಡು ರೈತ ಸಂಘದ ಪ್ರಮುಖರಾದ ತೀ.ನ. ಶ್ರೀನಿವಾಸ್ ಮಾತನಾಡಿ, ‘ಅರಣ್ಯಭೂಮಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಇತ್ಯರ್ಥ ಮಾಡುವಾಗ ಉಪವಿಭಾಗ ಮಟ್ಟದ ಸಮಿತಿಯಲ್ಲಿ ನಾಲ್ಕು ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಮಟ್ಟದಲ್ಲಿ ನಾಲ್ಕು ಜಿಲ್ಲಾ ಪಂಚಾಯಿತಿ ಸದಸ್ಯರು ಇರಬೇಕು ಎಂಬ ನಿಬಂಧನೆ ಇದೆ. ಈ ಕಾರಣಕ್ಕೆ ಕಾರವಾರ ಜಿಲ್ಲೆಯಲ್ಲಿ ಯಾವುದೇ ಅರ್ಜಿಗಳನ್ನು ಇತ್ಯರ್ಥ ಮಾಡಿಲ್ಲ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಸಮಿತಿ ಮಾಡಿರುವ ಆದೇಶ ಕಾನೂನುಬಾಹಿರ’ ಎಂದರು.</p>.<p>ಅಧಿಕಾರಿಗಳು ರೈತರ ಅರ್ಜಿಗಳನ್ನು ವಜಾ ಮಾಡುವುದೇ ಪ್ರಗತಿ ಎಂದು ಭಾವಿಸಿದ್ದಾರೆ ಎಂದು ದೂರಿದರು.</p>.<p>ಸಮಿತಿಯ ನಾರಾಯಣಪ್ಪ ಹುರುಳಿ, ‘90 ವರ್ಷ ಬದುಕಿರುವ ವ್ಯಕ್ತಿಯನ್ನು ಹುಡುಕುವುದು ಕಷ್ಟ. ಹೀಗಾಗಿ ಮೂರು ತಲೆಮಾರಿನ ಸಾಕ್ಷ್ಯವನ್ನು ಪರಿಗಣಿಸುವಾಗ ಊರಿನ ಆಲದಮರ, ಹುಣಸೆಮರ, ಕೆರೆ ಕಟ್ಟೆಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<p>ಪ್ರಮುಖರಾದ ಎನ್.ಡಿ.ವಸಂತಕುಮಾರ್, ರಮೇಶ್ ಐಗಿನಬೈಲು, ರವಿ ಜಂಬೂರುಮನೆ, ಮಂಜಪ್ಪ ಹಿರೇನೆಲ್ಲೂರು, ರವಿ ಬಿಳಿಸಿರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಗರ:</strong> ಮೂರು ತಲೆಮಾರುಗಳಿಂದ ಅರಣ್ಯಭೂಮಿಯಲ್ಲಿಸಾಗುವಳಿ ಮಾಡುತ್ತಿದ್ದರೂ ಅರಣ್ಯಭೂಮಿ ಹಕ್ಕುಕಾಯ್ದೆಯಡಿ ಸಕ್ರಮೀಕರಣಕ್ಕಾಗಿ ಅರ್ಜಿ ಸಲ್ಲಿಸಿದವರ ಅರ್ಜಿಗಳನ್ನು ಉಪವಿಭಾಗ ಮಟ್ಟದ ಅಧಿಕಾರಿ ಸಾರಾಸಗಟಾಗಿ ತಿರಸ್ಕರಿಸುತ್ತಿರುವುದರಿಂದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ ದೂರಿದರು.</p>.<p>ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯಭೂಮಿ ಹಕ್ಕುಕಾಯ್ದೆಯಡಿ ಸಲ್ಲಿಸಿದ್ದ 480 ಅರ್ಜಿಗಳನ್ನು ಈಚೆಗೆ ಉಪವಿಭಾಗಾಧಿಕಾರಿ ವಜಾ ಮಾಡಿದ್ದಾರೆ. ಇಲ್ಲಿನ ಬಹುತೇಕ ಅರ್ಜಿದಾರರು ಮಡೇನೂರು ಡ್ಯಾಂ ನಿರ್ಮಾಣದ ಸಂದರ್ಭದಲ್ಲಿ ಮುಳುಗಡೆಯಾಗಿ ಪುನರ್ ವಸತಿಗಾಗಿ ಈ ಭಾಗಕ್ಕೆ ಬಂದವರು. ಇಂತಹ ಸಂತ್ರಸ್ತರ ಅರ್ಜಿ ವಜಾ ಮಾಡಿರುವುದು ಅವರ ಸಾಗುವಳಿಯನ್ನೇ ತಿರಸ್ಕರಿಸಿದಂತಾಗಿದೆ’ಎಂದರು.</p>.<p>ಚೆನ್ನಶೆಟ್ಟಿಕೊಪ್ಪ, ಜಂಬೂರುಮನೆ, ಐಗಿನಬೈಲು, ಹೊಸೂರು, ಹಾರ್ನಳ್ಳಿ, ಹೊಸಗುಂದ, ಹಂದಿಗನೂರು, ಬೇಡರಕೊಪ್ಪ, ಚಿಪ್ಪಳಿ, ಬಳ್ಳಿಬೈಲು ಮೊದಲಾದ ಗ್ರಾಮಗಳ ಅರ್ಜಿದಾರರು 90 ವರ್ಷ ಹಿರಿಯರ ಹೇಳಿಕೆ ಪ್ರಮಾಣಪತ್ರವನ್ನು ಸಾಕ್ಷಿ ರೂಪದಲ್ಲಿ ಸಲ್ಲಿಸಿದ್ದರೂ ಅಧಿಕಾರಿಗಳು ಅದನ್ನು ಪರಿಗಣಿಸಿಲ್ಲ ಎಂದು ದೂರಿದರು.</p>.<p>ಅರ್ಜಿಗಳನ್ನು ಅವೈಜ್ಞಾನಿಕವಾಗಿ ತಿರಸ್ಕರಿಸುತ್ತಿರುವುದನ್ನು ವಿರೋಧಿಸಿ ಜ.27ರಂದು ಬೆಳಿಗ್ಗೆ 11ಕ್ಕೆ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಸಾಗುವಳಿದಾರರ ಅರ್ಜಿ ತಿರಸ್ಕಾರ ಮಾಡುತ್ತಿರುವ ವಿಷಯವನ್ನು ಕ್ಷೇತ್ರದ ಶಾಸಕರು ಹಾಗೂ ಸಂಸದರು ಗಂಭೀರವಾಗಿ ಪರಿಗಣಿಸಿ ವಿಧಾನಸಭೆ ಹಾಗೂ ಸಂಸತ್ತಿನಲ್ಲಿ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.</p>.<p>ಮಲೆನಾಡು ರೈತ ಸಂಘದ ಪ್ರಮುಖರಾದ ತೀ.ನ. ಶ್ರೀನಿವಾಸ್ ಮಾತನಾಡಿ, ‘ಅರಣ್ಯಭೂಮಿ ಹಕ್ಕು ಕಾಯ್ದೆಯಡಿ ಅರ್ಜಿಗಳನ್ನು ಇತ್ಯರ್ಥ ಮಾಡುವಾಗ ಉಪವಿಭಾಗ ಮಟ್ಟದ ಸಮಿತಿಯಲ್ಲಿ ನಾಲ್ಕು ತಾಲ್ಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಮಟ್ಟದಲ್ಲಿ ನಾಲ್ಕು ಜಿಲ್ಲಾ ಪಂಚಾಯಿತಿ ಸದಸ್ಯರು ಇರಬೇಕು ಎಂಬ ನಿಬಂಧನೆ ಇದೆ. ಈ ಕಾರಣಕ್ಕೆ ಕಾರವಾರ ಜಿಲ್ಲೆಯಲ್ಲಿ ಯಾವುದೇ ಅರ್ಜಿಗಳನ್ನು ಇತ್ಯರ್ಥ ಮಾಡಿಲ್ಲ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ಸಮಿತಿ ಮಾಡಿರುವ ಆದೇಶ ಕಾನೂನುಬಾಹಿರ’ ಎಂದರು.</p>.<p>ಅಧಿಕಾರಿಗಳು ರೈತರ ಅರ್ಜಿಗಳನ್ನು ವಜಾ ಮಾಡುವುದೇ ಪ್ರಗತಿ ಎಂದು ಭಾವಿಸಿದ್ದಾರೆ ಎಂದು ದೂರಿದರು.</p>.<p>ಸಮಿತಿಯ ನಾರಾಯಣಪ್ಪ ಹುರುಳಿ, ‘90 ವರ್ಷ ಬದುಕಿರುವ ವ್ಯಕ್ತಿಯನ್ನು ಹುಡುಕುವುದು ಕಷ್ಟ. ಹೀಗಾಗಿ ಮೂರು ತಲೆಮಾರಿನ ಸಾಕ್ಷ್ಯವನ್ನು ಪರಿಗಣಿಸುವಾಗ ಊರಿನ ಆಲದಮರ, ಹುಣಸೆಮರ, ಕೆರೆ ಕಟ್ಟೆಗಳನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿದರು.</p>.<p>ಪ್ರಮುಖರಾದ ಎನ್.ಡಿ.ವಸಂತಕುಮಾರ್, ರಮೇಶ್ ಐಗಿನಬೈಲು, ರವಿ ಜಂಬೂರುಮನೆ, ಮಂಜಪ್ಪ ಹಿರೇನೆಲ್ಲೂರು, ರವಿ ಬಿಳಿಸಿರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>