<p>ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಎಂಬ ಅತ್ಯಾಧುನಿಕ ಯಂತ್ರ ಅಳವಡಿಸಲಾಗಿದೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯ ವಿ. ಶಿವಕುಮಾರ್ ಹೇಳಿದರು.</p>.<p>ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಅಪರೂಪದ ಯಂತ್ರವಾಗಿದೆ. ಇತರೆ ಸಾಮಾನ್ಯ ಎಂಡೋಸ್ಕೋಪಿಯಲ್ಲಿ ಪತ್ತೆಯಾಗದ ಅನೇಕ ಕಾಯಿಲೆಗಳನ್ನು ಈ ಯಂತ್ರದಲ್ಲಿ ಪರೀಕ್ಷೆಯಿಂದ ಪತ್ತೆ ಹಚ್ಚಬಹುದಾಗಿದೆ. ಅನ್ನನಾಳ, ಜಠರ, ಲಿವರ್, ಲಂಗ್ಸ್, ಸೇರಿದಂತೆ ದೇಹದ ಅನೇಕ ಭಾಗಗಳನ್ನು ಈ ಯಂತ್ರದಿಂದ ಪರೀಕ್ಷಿಸಿ ಕಾಯಿಲೆ ಪತ್ತೆ ಹಚ್ಚಬಹುದು. ಅನ್ನನಾಳದ ಗೆಡ್ಡೆಗಳು ಸೇರಿದಂತೆ ಕ್ಷಯ ರೋಗದ ಕಾಯಿಲೆ ಗುರುತಿಸಬಹುದಾಗಿದೆ ಎಂದರು.</p>.<p>ಈಗಾಗಲೇ ಈ ಯಂತ್ರ ಬಳಸಿ ಒಬ್ಬ ರೋಗಿಗೆ ಕ್ಯಾನ್ಸರ್ ಕಾಯಿಲೆಯನ್ನು ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಗುಣಪಡಿಸಲಾಗಿದೆ. ಸಿಟಿ ಸ್ಕ್ಯಾನ್ ನಿಂದಲೂ ಪತ್ತೆಯಾಗದ ಕಾಯಿಲೆಗಳ ಲಕ್ಷಣಗಳು ಇದರಿಂದ ಗೊತ್ತಾಗುತ್ತವೆ ಎಂದರು.</p>.<p>ಡಾ. ಸುಮೇಶ್ ನಾಯರ್, ಡಾ. ಚಕ್ರವರ್ತಿ ಸಂಡೂರ್, ರಾಜಾಸಿಂಗ್ ಎಸ್.ವಿ. ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶಿವಮೊಗ್ಗ: ಇಲ್ಲಿನ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಎಂಡೋಸ್ಕೋಪಿಕ್ ಅಲ್ಟ್ರಾಸೌಂಡ್ ಎಂಬ ಅತ್ಯಾಧುನಿಕ ಯಂತ್ರ ಅಳವಡಿಸಲಾಗಿದೆ. ಇದರಿಂದ ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳನ್ನು ನಿಖರವಾಗಿ ಪತ್ತೆ ಹಚ್ಚಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯ ವಿ. ಶಿವಕುಮಾರ್ ಹೇಳಿದರು.</p>.<p>ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇದೊಂದು ಅಪರೂಪದ ಯಂತ್ರವಾಗಿದೆ. ಇತರೆ ಸಾಮಾನ್ಯ ಎಂಡೋಸ್ಕೋಪಿಯಲ್ಲಿ ಪತ್ತೆಯಾಗದ ಅನೇಕ ಕಾಯಿಲೆಗಳನ್ನು ಈ ಯಂತ್ರದಲ್ಲಿ ಪರೀಕ್ಷೆಯಿಂದ ಪತ್ತೆ ಹಚ್ಚಬಹುದಾಗಿದೆ. ಅನ್ನನಾಳ, ಜಠರ, ಲಿವರ್, ಲಂಗ್ಸ್, ಸೇರಿದಂತೆ ದೇಹದ ಅನೇಕ ಭಾಗಗಳನ್ನು ಈ ಯಂತ್ರದಿಂದ ಪರೀಕ್ಷಿಸಿ ಕಾಯಿಲೆ ಪತ್ತೆ ಹಚ್ಚಬಹುದು. ಅನ್ನನಾಳದ ಗೆಡ್ಡೆಗಳು ಸೇರಿದಂತೆ ಕ್ಷಯ ರೋಗದ ಕಾಯಿಲೆ ಗುರುತಿಸಬಹುದಾಗಿದೆ ಎಂದರು.</p>.<p>ಈಗಾಗಲೇ ಈ ಯಂತ್ರ ಬಳಸಿ ಒಬ್ಬ ರೋಗಿಗೆ ಕ್ಯಾನ್ಸರ್ ಕಾಯಿಲೆಯನ್ನು ಪತ್ತೆ ಹಚ್ಚಿ ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಗುಣಪಡಿಸಲಾಗಿದೆ. ಸಿಟಿ ಸ್ಕ್ಯಾನ್ ನಿಂದಲೂ ಪತ್ತೆಯಾಗದ ಕಾಯಿಲೆಗಳ ಲಕ್ಷಣಗಳು ಇದರಿಂದ ಗೊತ್ತಾಗುತ್ತವೆ ಎಂದರು.</p>.<p>ಡಾ. ಸುಮೇಶ್ ನಾಯರ್, ಡಾ. ಚಕ್ರವರ್ತಿ ಸಂಡೂರ್, ರಾಜಾಸಿಂಗ್ ಎಸ್.ವಿ. ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>