<p><strong>ಶಿವಮೊಗ್ಗ:</strong> ‘ಕವಿತೆಯ ಒಳ್ಳೆಯ ಮಾತು ಹೃದಯ ಸ್ವಚ್ಛಗೊಳಿಸುವುದಾದರೆ ಅದು ರಕ್ತದಾನ ಮಾಡಿದ್ದಕ್ಕಿಂತ ದೊಡ್ಡದು. ಅಳುವವರ ಅಳು ನಿಲ್ಲಿಸುವ ಶಕ್ತಿ ಕವನಕ್ಕಿದೆ’ ಎಂದು ಕವಿ ಅಸಾದುಲ್ಲಾ ಬೇಗ್ ಹೇಳಿದರು. </p>.<p>ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಿಲ್ಲಾ ವೇದಿಕೆಯಿಂದ ಆದಿಚುಂಚನಗಿರಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.</p>.<p>ಕವಿತೆಯ ಮೂಲಕ ಏನೇ ಹೇಳಿದರೂ ನಂಬುವಂತಿರಬೇಕು. ಕವನದ ಓದು ಬಾಡಿದ ಮೊಗವನ್ನು ಅರಳಿಸಬೇಕು. ಕವಿತೆಯಲ್ಲಿ ಪ್ರಾಸವಿರಬೇಕು ಎಂಬ ಕಟ್ಟುಪಾಡು ಬೇಕಿಲ್ಲ ಎನ್ನುತ್ತ ‘ದೇವರು ಮಲಗಿದ್ದಾನೆ’ ಶೀರ್ಷಿಕೆಯ ಕವನ ವಾಚಿಸಿದರು.</p>.<p>‘ದಸರಾ ಕವಿಗೋಷ್ಠಿ ಪ್ರತಿ ವರ್ಷ ಮಾಡುತ್ತಿದ್ದೇವೆ. ಈ ಬಾರಿ ರಾಜ್ಯದ ಬೇರೆ– ಬೇರೆ ಜಿಲ್ಲೆಗಳಿಂದ ಎಂಬತ್ತು ಕವಿಗಳು ತಮ್ಮ ಕವನ ಕಳುಹಿಸಿದ್ದರು. ಅವುಗಳಲ್ಲಿ ಆಯ್ದ ಐವತ್ತೈದು ಕವನಗಳನ್ನು ಆಯ್ಕೆಮಾಡಿ ಎರಡು ಕವಿಗೋಷ್ಠಿ ಏರ್ಪಡಿಸಿದ್ದೇವೆ’ ಎಂದು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು. </p>.<p>ಸಾಹಿತಿ ದೇವನೂರು ಅಚ್ಚುತರಾವ್ ಅವರ ‘ಚಿಂತನ-ಮಂಥನ ಪೋಷಕರು’, ‘ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೊಂದು ದಿನದರ್ಶಿಕೆ ಏನಂತೀರಾ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮೂವತ್ತು ಕವಿಗಳು ಗೋಷ್ಠಿಯಲ್ಲಿ ಕವನ ವಾಚಿಸಿದರು. </p>.<p>ಆದಿಚುಂಚನಗಿರಿ ಪೀಠದ ನಾದಮಯಾನಂದನಾಥ ಸ್ವಾಮೀಜಿ, ಕವಯಿತ್ರಿ ಬಿ. ಟಿ. ಅಂಬಿಕಾ, ಸಿದ್ಧಾರ್ಥ, ಪ್ರತೀಕ, ಎಂ.ಎಂ.ಸ್ವಾಮಿ, ಕೆ.ಎಸ್.ಮಂಜಪ್ಪ, ಶಿವಪ್ಪಗೌಡ ಇದ್ದರು.</p>.<div><blockquote>ಕವಿಗಳು ವರ್ತಮಾನದ ಬೇಗುದಿಗಳಿಗೆ ಧ್ವನಿಯಾಗಬೇಕು. ಬರೆಯುವವರಿಗೆ ಜವಾಬ್ದಾರಿ ಹೆಚ್ಚಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.</blockquote><span class="attribution">ಡಿ. ಮಂಜುನಾಥ, ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ:</strong> ‘ಕವಿತೆಯ ಒಳ್ಳೆಯ ಮಾತು ಹೃದಯ ಸ್ವಚ್ಛಗೊಳಿಸುವುದಾದರೆ ಅದು ರಕ್ತದಾನ ಮಾಡಿದ್ದಕ್ಕಿಂತ ದೊಡ್ಡದು. ಅಳುವವರ ಅಳು ನಿಲ್ಲಿಸುವ ಶಕ್ತಿ ಕವನಕ್ಕಿದೆ’ ಎಂದು ಕವಿ ಅಸಾದುಲ್ಲಾ ಬೇಗ್ ಹೇಳಿದರು. </p>.<p>ಕನ್ನಡ ಸಾಹಿತ್ಯ ಸಾಂಸ್ಕೃತಿಕ ಜಿಲ್ಲಾ ವೇದಿಕೆಯಿಂದ ಆದಿಚುಂಚನಗಿರಿ ಮಠದಲ್ಲಿ ಭಾನುವಾರ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.</p>.<p>ಕವಿತೆಯ ಮೂಲಕ ಏನೇ ಹೇಳಿದರೂ ನಂಬುವಂತಿರಬೇಕು. ಕವನದ ಓದು ಬಾಡಿದ ಮೊಗವನ್ನು ಅರಳಿಸಬೇಕು. ಕವಿತೆಯಲ್ಲಿ ಪ್ರಾಸವಿರಬೇಕು ಎಂಬ ಕಟ್ಟುಪಾಡು ಬೇಕಿಲ್ಲ ಎನ್ನುತ್ತ ‘ದೇವರು ಮಲಗಿದ್ದಾನೆ’ ಶೀರ್ಷಿಕೆಯ ಕವನ ವಾಚಿಸಿದರು.</p>.<p>‘ದಸರಾ ಕವಿಗೋಷ್ಠಿ ಪ್ರತಿ ವರ್ಷ ಮಾಡುತ್ತಿದ್ದೇವೆ. ಈ ಬಾರಿ ರಾಜ್ಯದ ಬೇರೆ– ಬೇರೆ ಜಿಲ್ಲೆಗಳಿಂದ ಎಂಬತ್ತು ಕವಿಗಳು ತಮ್ಮ ಕವನ ಕಳುಹಿಸಿದ್ದರು. ಅವುಗಳಲ್ಲಿ ಆಯ್ದ ಐವತ್ತೈದು ಕವನಗಳನ್ನು ಆಯ್ಕೆಮಾಡಿ ಎರಡು ಕವಿಗೋಷ್ಠಿ ಏರ್ಪಡಿಸಿದ್ದೇವೆ’ ಎಂದು ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ ಡಿ. ಮಂಜುನಾಥ ಹೇಳಿದರು. </p>.<p>ಸಾಹಿತಿ ದೇವನೂರು ಅಚ್ಚುತರಾವ್ ಅವರ ‘ಚಿಂತನ-ಮಂಥನ ಪೋಷಕರು’, ‘ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೊಂದು ದಿನದರ್ಶಿಕೆ ಏನಂತೀರಾ’ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಲಾಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮೂವತ್ತು ಕವಿಗಳು ಗೋಷ್ಠಿಯಲ್ಲಿ ಕವನ ವಾಚಿಸಿದರು. </p>.<p>ಆದಿಚುಂಚನಗಿರಿ ಪೀಠದ ನಾದಮಯಾನಂದನಾಥ ಸ್ವಾಮೀಜಿ, ಕವಯಿತ್ರಿ ಬಿ. ಟಿ. ಅಂಬಿಕಾ, ಸಿದ್ಧಾರ್ಥ, ಪ್ರತೀಕ, ಎಂ.ಎಂ.ಸ್ವಾಮಿ, ಕೆ.ಎಸ್.ಮಂಜಪ್ಪ, ಶಿವಪ್ಪಗೌಡ ಇದ್ದರು.</p>.<div><blockquote>ಕವಿಗಳು ವರ್ತಮಾನದ ಬೇಗುದಿಗಳಿಗೆ ಧ್ವನಿಯಾಗಬೇಕು. ಬರೆಯುವವರಿಗೆ ಜವಾಬ್ದಾರಿ ಹೆಚ್ಚಿದೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.</blockquote><span class="attribution">ಡಿ. ಮಂಜುನಾಥ, ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಅಧ್ಯಕ್ಷ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>