ಶಿವಮೊಗ್ಗ: ಕೊರೊನಾ ಪರಿಣಾಮ ಇಲ್ಲಿನ ಕೇಂದ್ರ ಕಾರಾಗೃಹದ 18 ವಿಚಾರಣಾಧೀನ ಕೈದಿಗಳನ್ನು ಗುರುವಾರ ಬಿಡುಗಡೆ ಮಾಡಲಾಯಿತು.
ನ್ಯಾಯಾಲಯದ ನಿರ್ದೇಶನದಂತೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಒಪ್ಪಿಗೆ ಪಡೆದು 7 ವರ್ಷಕ್ಕಿಂತ ಕಡಿಮೆ ಶಿಕ್ಷಗೆ ಒಳಗಾಗ ಬಹುದಾದ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದವರನ್ನು ಬಿಡುಗಡೆ ಮಾಡಲಾಯಿತು.
ಕೊರೊನಾ ಸಾಕ್ರಾಮಿಕ ರೋಗ. ಜೈಲುಗಳಂತಹ ಸ್ಥಳಗಳಲ್ಲಿ ವೈರಸ್ ಬೇಗ ಹರಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ನ್ಯಾಯಾಲಯದ ಆದೇಶದಂತೆ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ.ರಂಗನಾಥ್ ಮಾಹಿತಿ ನೀಡಿದರು.