‘ಅಲ್ಲದೆ ಮಲೆನಾಡಿನ ರೈತರ ಕಾಡಿನ ನಂಟು ನಿರಂತರವಾಗಿದ್ದು, ಕಾಡಿನ ರಕ್ಷಣೆಯೊಂದಿಗೆ ತಮ್ಮ ಕೃಷಿ ಚಟುವಟಿಕೆಗೆ ಸೊಪ್ಪು, ಸದೆ ಹಾಗೂ ದರಗು ತರುವುದು ಸಾಮಾನ್ಯ. ಆದರೆ, ರೈತನ ಜಮೀನಿನ ಪಕ್ಕದಲ್ಲಿರುವ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಘಟನೆ ಜರುಗಿದೆ ಎಂಬ ಕಾರಣ ನೀಡಿ ಪರಿಹಾರ ನೀಡಲು ಅಸಾಧ್ಯ ಎಂಬ ಅಭಿಪ್ರಾಯವನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ವ್ಯಕ್ತಪಡಿಸಿರುವುದು ಕಳವಳಕಾರಿ ಸಂಗತಿ’ ಎಂದರು.