ಆಗುಂಬೆ ರಸ್ತೆ ಮಾರ್ಗದ ಕಾಮತ್ ಬೇಕರಿಯಲ್ಲಿ ಅನಾಹುತ ಸಂಭವಿಸಿದ್ದು, ಅಪಾರ ಹಾನಿಯಾಗಿದೆ. ವಿದ್ಯುತ್ ಪೂರೈಕೆಯಲ್ಲಿ ಉಂಟಾಗಿರುವ ದೋಷ ಘಟನೆಗೆ ಕಾರಣವಾಗಿರಬಹುದು ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಬೇಕರಿಯಲ್ಲಿನ ಪೀಠೋಪಕರಣ, ತಿಂಡಿ, ದಿನಸಿ ಸಾಮಗ್ರಿ, ಅಡುಗೆ ಅನಿಲ, ಸಿಲಿಂಡರ್ ಸುಟ್ಟುಹೋಗಿವೆ. ಸ್ಫೋಟದ ತೀವ್ರತೆಗೆ ಗೋಡೆ ಬಿರುಕು ಬಿಟ್ಟಿದೆ.