₹1 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ: ಬಳಕೆಗೆ ಸಿಗದ ಸಿಗಂದೂರು ಯಾತ್ರಿ ನಿವಾಸ
ಉದ್ಘಾಟನೆಯಾಗದೇ ಹಾಳು ಬಿದ್ದಿರುವ ಕಟ್ಟಡ
ಸುಕುಮಾರ್ ಎಂ
Published : 6 ನವೆಂಬರ್ 2025, 7:08 IST
Last Updated : 6 ನವೆಂಬರ್ 2025, 7:08 IST
ಫಾಲೋ ಮಾಡಿ
Comments
ಸಿಗಂದೂರು ಯಾತ್ರಿ ನಿವಾಸ ಸಾರ್ವಜನಿಕ ಬಳಕೆಗೆ ಮುಕ್ತ ಗೊಳಿಸುವಂತೆ ಆಗ್ರಹಿಸಿ ರೈತ ಸಂಘದ ಸದಸ್ಯರು ಈಚೆಗೆ ಪ್ರತಿಭಟನೆ ನಡೆಸಿದರು.
ನಿರ್ಮಿತಿ ಕೇಂದ್ರ ನಿರ್ಮಿಸಿರುವ ಕಟ್ಟಡ ಇದುವರೆಗೂ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರವಾಗಿಲ್ಲ. ಅರಣ್ಯ ಇಲಾಖೆ ಅನುಮತಿ ನೀಡಿದರೆ ಮಾತ್ರ ಯಾತ್ರಿ ನಿವಾಸ ಯಾತ್ರಿಗಳ ಬಳಕೆಗೆ ಮುಕ್ತಗೊಳ್ಳಲಿದೆ. ಅನುಮತಿಯ ನಿರ್ಧಾರದ ಮೇಲೆ ಕಟ್ಟಡದ ಭವಿಷ್ಯ ನಿಂತಿದೆ
-ಧರ್ಮಪ್ಪ, ಸಹಾಯಕ ನಿರ್ದೇಶಕ ಪ್ರವಾಸೋದ್ಯಮ ಇಲಾಖೆ
ಯಾತ್ರಿಗಳ ಬಳಕೆ ಉದ್ದೇಶದ ಕಟ್ಟಡಕ್ಕೂ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ಕಟ್ಟಡವನ್ನು ಶೀಘ್ರವೇ ಸಾರ್ವಜನಿಕರಿಗೆ ಮುಕ್ತಗೊಳಿಸಬೇಕು. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಗಮನಹರಿಸಬೇಕು
-ದಿನೇಶ್ ಶಿರವಾಳ, ಸ್ಥಳೀಯರು
ವನ್ಯಜೀವಿ ವಲಯದಲ್ಲಿ ಅನುಮತಿ ಪಡೆಯದೇ ಯಾತ್ರಿ ನಿವಾಸ ಕಟ್ಟಿದ್ದರು. ಹೀಗಾಗಿ ಪ್ರಕರಣ ದಾಖಲಿಸಿದ್ದೆವು. ಪರ್ಯಾಯ ಭೂಮಿ ತೋರಿಸಿ ಯಾತ್ರಿ ನಿವಾಸಕ್ಕೆ ಫಾರೆಸ್ಟ್ ಕ್ಲಿಯರೆನ್ಸ್ ಪಡೆಯುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ
-ಪ್ರಸನ್ನಕೃಷ್ಣ ಪಟಗಾರ, ಡಿಸಿಎಫ್ ಶಿವಮೊಗ್ಗ ವನ್ಯಜೀವಿ ವಿಭಾಗ