ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಮೇಲೆ ದೇವರು ಬಂದಂತೆ ವರ್ತನೆ- ಹಾವು ಹಿಡಿಯಲು ಹೋದಾಗ ಘಟನೆ

ಸ್ನೇಕ್ ಕಿರಣ್ ಹಾವು ಹಿಡಿಯಲು ಹೋದಾಗ ಘಟನೆ: ವಿಡಿಯೊ ವೈರಲ್
Last Updated 1 ಅಕ್ಟೋಬರ್ 2022, 4:47 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಹೊನ್ನಾಳಿ ರಸ್ತೆ ಚೌಡೇಶ್ವರಿ ಕಾಲೊನಿಯ ಶಂಕರ ರೇಂಜ್ ನರ್ಸರಿಗೆ ಬಂದಿದ್ದ ಹಾವನ್ನು ಹಿಡಿಯಲು ಉರಗ ರಕ್ಷಕ ಸ್ನೇಕ್ ಕಿರಣ್ ಶುಕ್ರವಾರ ತೆರಳಿದ್ದ ವೇಳೆ ಅಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಮಹಿಳಾ ಕಾರ್ಮಿಕರು, ಮೈಮೇಲೆ ದೇವರು ಬಂದವರಂತೆ ವರ್ತಿಸಿದ್ದಾರೆ. ನೆಲದ ಮೇಲೆ ಹಾವಿನಂತೆ ಹೊರಳಾಡಿದ್ದಾರೆ. ಆ ವಿಡಿಯೊ ಈಗ ವೈರಲ್ಆಗಿದೆ.

ಸ್ನೇಕ್ ಕಿರಣ್ ನರ್ಸರಿಯಲ್ಲಿ ನಾಗರ ಹಾವು ಹಿಡಿದಿದ್ದು, ಅದನ್ನು ಪ್ಲಾಸ್ಟಿಕ್ ಬುಟ್ಟಿಯಲ್ಲಿ ಹಾಕಿ ತೋರಿಸುತ್ತಿದ್ದ ವೇಳೆ ಇಬ್ಬರು ಮಹಿಳೆಯರು ದೇವರು ಬಂದವರಂತೆ ವರ್ತಿಸಿದ್ದಾರೆ. ವಿಚಿತ್ರವಾಗಿ ಕೂಗಿದ್ದಾರೆ. ಅದರಲ್ಲಿ ಮಹಿಳೆಯೊಬ್ಬರು ‘ನಾನು ಬಂದಿರುವುದು ನಿಮ್ಮನ್ನು ಕಾವಲು ಕಾಯಲು ಅಲ್ವಾ? ನನ್ನನ್ನು ಹೊರಗೆ ಕಳುಹಿಸುತ್ತೀರಾ?’ ಎಂದುಕೇಳಿದ್ದಾರೆ.

ಈ ವೇಳೆ ಕೆಲವರು ‘ಹಾವನ್ನು ಬಿಟ್ಟುಬಿಡಿ’ ಎಂದು ಸ್ನೇಕ್‌ ಕಿರಣ್‌ಗೆ ಹೇಳಿದ್ದು, ‘ಆ ತರಹ ಏನೂ ಆಗೊಲ್ಲ’ ಎಂದು ಹೇಳಿ ಹಿಡಿದಿದ್ದ ಹಾವನ್ನು ಅಲ್ಲಿಂದ ದೂರ ಒಯ್ದಿದ್ದಾರೆ. ಕೆಲ ಹೊತ್ತಿನ ನಂತರ ಮಹಿಳೆಯರು ಸಹಜ ಸ್ಥಿತಿಗೆ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT