ಸೊರಬ: ಸಹೋದರರಾದ ಶಾಸಕ ಕುಮಾರ್ ಬಂಗಾರಪ್ಪ, ಮಾಜಿ ಶಾಸಕ ಮಧು ಬಂಗಾರಪ್ಪ ಅವರ ಕಲಹದಿಂದಾಗಿ ತಾಲ್ಲೂಕಿನ ಅಭಿವೃದ್ಧಿ ಕುಂಠಿತಗೊಂಡಿದೆ. ಬಗರ್ಹುಕುಂ ಹೆಸರಿನಲ್ಲಿ ಮಧು ಬಂಗಾರಪ್ಪ ಕಮಿಷನ್ ಪಡೆದು ಸಾಗುವಳಿ ಚೀಟಿ ನೀಡಿದರೆ, ಈಗಿನ ಶಾಸಕ ಕುಮಾರ್ ಬಂಗಾರಪ್ಪ ಹಕ್ಕುಪತ್ರ ರದ್ದುಪಡಿಸುವ ಮೂಲಕ ಬಡ ಸಾಗುವಳಿದಾರರ ಬದುಕಿಗೆ ಕಂಟಕವಾಗಿದ್ದಾರೆ ಎಂದುಕಾಂಗ್ರೆಸ್ ಮುಖಂಡ ರಾಜು ತಲ್ಲೂರು ಆರೋಪಿಸಿದರು.