<p><strong>ತೀರ್ಥಹಳ್ಳಿ:</strong> ಇಲ್ಲಿನ ರಾಮಚಂದ್ರಪುರ ಮಠದ ಹಿಂಭಾಗದ ತುಂಗಾ ನದಿಯ ದಡದಲ್ಲಿ ಪುರಾತನ ಬಂಡೆ ಶಾಸನವೊಂದು ಪತ್ತೆಯಾಗಿದೆ.</p>.<p>60 ಅಡಿಯ ಉದ್ದ, 25 ಅಡಿ ಎತ್ತರದ ಬಂಡೆಯ ಮೇಲೆ ಶಾಸನವನ್ನು ಕೆತ್ತಲಾಗಿದೆ. ಇಲ್ಲಿ ಬ್ರಹ್ಮ, ಚೌಡಿ, ನಾಗರಕಲ್ಲು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಶಾಸನ ಕೊರೆದ ಜಾಗದಿಂದ 10 ಅಡಿ ದೂರದಲ್ಲಿ 3 ಇಂಚು ಆಳ, 2 ಅಡಿ ಅಗಲ ಹಾಗೂ 4 ಅಡಿ ಉದ್ದವಾಗಿ ಬಂಡೆಯನ್ನು ಆಯತಾಕಾರದ ಕಿಟಕಿಯಂತೆ ಕೊರೆಯಲಾಗಿದೆ.</p>.<p>ಇದರ ಮೇಲ್ಭಾಗದಲ್ಲಿ ದ್ಯಾನಸ್ಥನಾಗಿ ಕುಳಿತ ಸ್ಥಿತಿಯಲ್ಲಿರುವ ಮುಕ್ಕೊಡೆ ಸಹಿತ ತೀರ್ಥಂಕರನ ರೇಖಾಚಿತ್ರ ಬಿಡಿಸಲಾಗಿದೆ. 400 ಮೀಟರ್ ದೂರದಲ್ಲಿ ತುಂಗಾನದಿಯ ಕೊರೆತದಿಂದ ಉಂಟಾದ ಚಿಕ್ಕ ಕುಳಿಗಳಲ್ಲಿ ಜೈನ ತೀರ್ಥಂಕರರ ರೇಖಾಚಿತ್ರಗಳು ಇವೆ. ಇದು ಹಿಂದೆ ಜೈನ ತೀರ್ಥಕ್ಷೇತ್ರವಾಗಿತ್ತು. </p>.<p>ಹುಟ್ಟುಬಂಡೆಯ ಮೇಲಿರುವ ಶಾಸನ 16ನೇ ಶತಮಾನದ ಕನ್ನಡ ಲಿಪಿಯಲ್ಲಿದೆ. ಹಸು, ಕರು, ಸೂರ್ಯ, ಚಂದ್ರ ಮತ್ತು ಕತ್ತಿಯನ್ನು ಉಬ್ಬುಶಿಲ್ಪದಲ್ಲಿ ಕೆತ್ತಲಾಗಿದೆ. 27 ಸಾಲುಗಳಲ್ಲಿ ಶಾಸನ ಕೆತ್ತಲಾಗಿದೆ. ಮೊದಲ ಸಾಲಿನಲ್ಲಿ ಪ್ರಾರ್ಥನಾ ಶ್ಲೋಕ, ನಂತರದ 5 ಸಾಲುಗಳು ಸಂಪೂರ್ಣವಾಗಿ ಸವೆದಿವೆ. ಶಾಸನವು ಪ್ರಮುಖವಾಗಿ ವಿಶ್ವೇಶ್ವರ ದೇವರ ಪೂಜಾ ಕೈಂಕರ್ಯಗಳಿಗೆ ದಾನ ನೀಡಿದ್ದಾಗಿದೆ. ದಾನವನ್ನು ಮಲೆಯಾಳ ಪರಂಪರೆಯ ದೇವೇಂದ್ರಪುರಿ ಯತಿಗಳ ಮುಖಾಂತರ ನೀಡಿದ್ದಾಗಿದೆ.</p>.<p>ಇಲ್ಲಿ ಆಡಳಿತ ನಡೆಸುತ್ತಿದ್ದ ವಿಟಂಣ ವೊಡೆಯರ ಅಂಣ ವೀರಗಂಗರಸಂಣ ವೊಡೆಯರು ದಾನ ನೀಡಿರುವುದು ತಿಳಿಯುತ್ತದೆ. ಆ ಪ್ರದೇಶದ ಅಧಿಕಾರಿಯಾದ ಚಉಡಪ್ಪ ಎಂಬುವನು ದಾನ ನೀಡಿದ್ದು ತಿಳಿಯುತ್ತದೆ. ದಾನವು ವಿಶ್ವೇಶ್ವರ ದೇವರ ಅಮೃತಪಡಿಗೆ, ಪಾರಣೆಗೆ ಮತ್ತು ಉಪಹಾರಗಳ ಸದ್ವಿನಿಯೋಗಕ್ಕಾಗಿ ನೀಡಿರುವುದು ತಿಳಿಯುತ್ತದೆ. ಇದು ಕ್ರಿ.ಶ. 1578ನೇ ಸಾಲಿನದ್ದು ಎಂದು ಸುಳುಗೋಡು ಗ್ರಾಮದ ಶಾಸನ ತಜ್ಞ ಪ್ರೊ.ಜಿ.ಕೆ.ದೇವರಾಜಸ್ವಾಮಿ ಅಧ್ಯಯನ ಮಾಡಿ ಗುರುತಿಸಿದ್ದಾರೆ.</p>.<p>ಶಾಸನ ಅಧ್ಯಯನಕ್ಕೆ ಪತ್ರಕರ್ತ ಜಿ.ಆರ್. ಸತ್ಯನಾರಾಯಣ, ಶಿಕ್ಷಕ ಎಲ್.ಎಸ್.ರಾಘವೇಂದ್ರ, ಜಿ.ಎನ್. ಸಾತ್ವಿಕ್ ಸಹಕರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತೀರ್ಥಹಳ್ಳಿ:</strong> ಇಲ್ಲಿನ ರಾಮಚಂದ್ರಪುರ ಮಠದ ಹಿಂಭಾಗದ ತುಂಗಾ ನದಿಯ ದಡದಲ್ಲಿ ಪುರಾತನ ಬಂಡೆ ಶಾಸನವೊಂದು ಪತ್ತೆಯಾಗಿದೆ.</p>.<p>60 ಅಡಿಯ ಉದ್ದ, 25 ಅಡಿ ಎತ್ತರದ ಬಂಡೆಯ ಮೇಲೆ ಶಾಸನವನ್ನು ಕೆತ್ತಲಾಗಿದೆ. ಇಲ್ಲಿ ಬ್ರಹ್ಮ, ಚೌಡಿ, ನಾಗರಕಲ್ಲು ಪ್ರತಿಷ್ಠಾಪಿಸಿ ಆರಾಧಿಸಲಾಗುತ್ತಿದೆ. ಶಾಸನ ಕೊರೆದ ಜಾಗದಿಂದ 10 ಅಡಿ ದೂರದಲ್ಲಿ 3 ಇಂಚು ಆಳ, 2 ಅಡಿ ಅಗಲ ಹಾಗೂ 4 ಅಡಿ ಉದ್ದವಾಗಿ ಬಂಡೆಯನ್ನು ಆಯತಾಕಾರದ ಕಿಟಕಿಯಂತೆ ಕೊರೆಯಲಾಗಿದೆ.</p>.<p>ಇದರ ಮೇಲ್ಭಾಗದಲ್ಲಿ ದ್ಯಾನಸ್ಥನಾಗಿ ಕುಳಿತ ಸ್ಥಿತಿಯಲ್ಲಿರುವ ಮುಕ್ಕೊಡೆ ಸಹಿತ ತೀರ್ಥಂಕರನ ರೇಖಾಚಿತ್ರ ಬಿಡಿಸಲಾಗಿದೆ. 400 ಮೀಟರ್ ದೂರದಲ್ಲಿ ತುಂಗಾನದಿಯ ಕೊರೆತದಿಂದ ಉಂಟಾದ ಚಿಕ್ಕ ಕುಳಿಗಳಲ್ಲಿ ಜೈನ ತೀರ್ಥಂಕರರ ರೇಖಾಚಿತ್ರಗಳು ಇವೆ. ಇದು ಹಿಂದೆ ಜೈನ ತೀರ್ಥಕ್ಷೇತ್ರವಾಗಿತ್ತು. </p>.<p>ಹುಟ್ಟುಬಂಡೆಯ ಮೇಲಿರುವ ಶಾಸನ 16ನೇ ಶತಮಾನದ ಕನ್ನಡ ಲಿಪಿಯಲ್ಲಿದೆ. ಹಸು, ಕರು, ಸೂರ್ಯ, ಚಂದ್ರ ಮತ್ತು ಕತ್ತಿಯನ್ನು ಉಬ್ಬುಶಿಲ್ಪದಲ್ಲಿ ಕೆತ್ತಲಾಗಿದೆ. 27 ಸಾಲುಗಳಲ್ಲಿ ಶಾಸನ ಕೆತ್ತಲಾಗಿದೆ. ಮೊದಲ ಸಾಲಿನಲ್ಲಿ ಪ್ರಾರ್ಥನಾ ಶ್ಲೋಕ, ನಂತರದ 5 ಸಾಲುಗಳು ಸಂಪೂರ್ಣವಾಗಿ ಸವೆದಿವೆ. ಶಾಸನವು ಪ್ರಮುಖವಾಗಿ ವಿಶ್ವೇಶ್ವರ ದೇವರ ಪೂಜಾ ಕೈಂಕರ್ಯಗಳಿಗೆ ದಾನ ನೀಡಿದ್ದಾಗಿದೆ. ದಾನವನ್ನು ಮಲೆಯಾಳ ಪರಂಪರೆಯ ದೇವೇಂದ್ರಪುರಿ ಯತಿಗಳ ಮುಖಾಂತರ ನೀಡಿದ್ದಾಗಿದೆ.</p>.<p>ಇಲ್ಲಿ ಆಡಳಿತ ನಡೆಸುತ್ತಿದ್ದ ವಿಟಂಣ ವೊಡೆಯರ ಅಂಣ ವೀರಗಂಗರಸಂಣ ವೊಡೆಯರು ದಾನ ನೀಡಿರುವುದು ತಿಳಿಯುತ್ತದೆ. ಆ ಪ್ರದೇಶದ ಅಧಿಕಾರಿಯಾದ ಚಉಡಪ್ಪ ಎಂಬುವನು ದಾನ ನೀಡಿದ್ದು ತಿಳಿಯುತ್ತದೆ. ದಾನವು ವಿಶ್ವೇಶ್ವರ ದೇವರ ಅಮೃತಪಡಿಗೆ, ಪಾರಣೆಗೆ ಮತ್ತು ಉಪಹಾರಗಳ ಸದ್ವಿನಿಯೋಗಕ್ಕಾಗಿ ನೀಡಿರುವುದು ತಿಳಿಯುತ್ತದೆ. ಇದು ಕ್ರಿ.ಶ. 1578ನೇ ಸಾಲಿನದ್ದು ಎಂದು ಸುಳುಗೋಡು ಗ್ರಾಮದ ಶಾಸನ ತಜ್ಞ ಪ್ರೊ.ಜಿ.ಕೆ.ದೇವರಾಜಸ್ವಾಮಿ ಅಧ್ಯಯನ ಮಾಡಿ ಗುರುತಿಸಿದ್ದಾರೆ.</p>.<p>ಶಾಸನ ಅಧ್ಯಯನಕ್ಕೆ ಪತ್ರಕರ್ತ ಜಿ.ಆರ್. ಸತ್ಯನಾರಾಯಣ, ಶಿಕ್ಷಕ ಎಲ್.ಎಸ್.ರಾಘವೇಂದ್ರ, ಜಿ.ಎನ್. ಸಾತ್ವಿಕ್ ಸಹಕರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>