ಲೇಖಕ ಪೃಥ್ವಿದತ್ತ ಚಂದ್ರಶೋಭಿ ಮಾತನಾಡಿ, ‘ಸಂಶೋಧನೆ ಎನ್ನುವುದು ಜ್ಞಾನ ಪ್ರಸರಣದ ಸಾಮರ್ಥ್ಯ ಇಲ್ಲದವರ ಕ್ರಿಯೆ ಆದರೆ ಅದೊಂದು ಒಳನೋಟಗಳಿಲ್ಲದ, ಅರ್ಥರಹಿತ ತಾಂತ್ರಿಕ ಆಚರಣೆಯಾಗುತ್ತದೆ. ಅಧ್ಯಾಪಕರಾದವರು ಜಾತಿ, ಧರ್ಮ, ಪ್ರದೇಶಗಳೆಂಬ ವಾಂಛೆಗಳಿಂದ ಮುಕ್ತವಾಗಿಲ್ಲ. ಹೀಗಾಗಿ ಉನ್ನತಶಿಕ್ಷಣ ಹಲವು ರೀತಿಯ ಬಿಕ್ಕಟ್ಟುಗಳನ್ನು ಎದುರಿಸುತ್ತಿದೆ’ ಎಂದು ವ್ಯಾಖ್ಯಾನಿಸಿದರು.