<p><strong>ಚಿಕ್ಕಬಳ್ಳಾಪುರ</strong>: ಮಾರುಕಟ್ಟೆ, ರಸ್ತೆಗಳು ಸೇರಿದಂತೆ ಎಲ್ಲಿ ನೋಡಿದರೂ ಸ್ಪೆಟರ್, ರೈನ್ ಕೋಟ್ ಸೇರಿದಂತೆ ಬೆಚ್ಚನೆಯ ಉಡುಪುಗಳನ್ನು ತೊಟ್ಟ ಜನರು...ಅಬ್ಬಾ ಚಳಿ ಚಳಿ ಎನ್ನುತ್ತಿದ್ದ ಯುವ ಸಮುದಾಯ...ಹೌದು ಚಿಕ್ಕಬಳ್ಳಾಪುರ ನಗರ ಸೇರಿದಂತೆ ಇಡೀ ಜಿಲ್ಲೆಗೆ ಸೂರ್ಯನ ರಶ್ಮಿಗಳು ಪ್ರವೇಶವಾಗಲೇ ಇಲ್ಲ.</p>.<p>‘ದಿತ್ವಾ’ ಚಂಡಮಾರುತದ ಪರಿಣಾಮ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಚಳಿ ತೀವ್ರವಾಗಿದೆ. ಮನೆಯಿಂದ ಹೊರಗೆ ಬಾರದಷ್ಟು ಮತ್ತು ಮನೆಯೊಳಗಿದ್ದರೂ ಕಿಟಕಿ ಬಾಗಿಲುಗಳನ್ನು ಮುಚ್ಚುವಷ್ಟು ವಾತಾವರಣ ತಣ್ಣಗಿದೆ.</p>.<p>ಕಳೆದ ಎರಡು–ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಜಿಲ್ಲೆಯಲ್ಲಿದೆ. ಭಾನುವಾರ ಈ ವಾತಾವರಣ ಮತ್ತಷ್ಟು ತೀವ್ರವಾಗಿತ್ತು. ಜೊತೆಗೆ ತುಂತುರು ಮಳೆ ಸಹ ಸುರಿಯಿತು. ತಾಪಮಾನ 17 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಚಳಿಯ ತೀವ್ರತೆಗೆ ಜನ ತರಗುಟ್ಟಿದರು.</p>.<p>ಚಳಿಯಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ರಜೆಯ ದಿನವಾದ ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ರಸ್ತೆಗಳು, ಮಾರುಕಟ್ಟೆಯಲ್ಲಿ ಜನರ ಓಡಾಟ ವಿರಳವಾಗಿತ್ತು. </p>.<p>ನಗರದ ಹೊರವಲಯದ ಗೌರಿಬಿದನೂರಿನ ಕಣಿವೆ ಪ್ರದೇಶ, ನಂದಿಗಿರಿಧಾಮದ ಸುತ್ತಮುತ್ತ, ಸ್ಕಂದಗಿರಿಯ ಆಸುಪಾಸಿನ ಬೆಟ್ಟಗುಡ್ಡಗಳನ್ನು ಮಂಜು ಮುತ್ತಿಕ್ಕಿತ್ತು. ಇಡೀ ಬೆಟ್ಟಗುಡ್ಡಗಳ ಮೇಲೆಲ್ಲ ಮಂಜು ಇಣುಕಿತ್ತು. ಮಂಜು ಸುರಿಯುವುದು ಹೆಚ್ಚಾಗಿದ್ದು, ಶೀತ ಗಾಳಿ ಬೀಸಿತು.</p>.<p>ಜನರು ಬೆಚ್ಚನೆಯ ಉಡುಪುಗಳನ್ನು ತೊಟ್ಟು ಮನೆಯಿಂದ ಹೊರ ಬರುತ್ತಿದ್ದರು. ಸಾಮಾನ್ಯವಾಗಿ ವಾರಾಂತ್ಯರದ ದಿನಗಳಲ್ಲಿ ಸಂಜೆ ಚಾಟ್ಸ್ ಸೆಂಟರ್ಗಳಲ್ಲಿ ಹೆಚ್ಚು ಜನರು ಸೇರುತ್ತಿದ್ದರು. ಆದರೆ ಚಳಿ ಮತ್ತು ತುಂತುರು ಮಳೆಯ ಕಾರಣದಿಂದ ಹೆಚ್ಚು ಜನರು ಮನೆಯಿಂದಲೂ ಹೊರಗೆ ಬರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ</strong>: ಮಾರುಕಟ್ಟೆ, ರಸ್ತೆಗಳು ಸೇರಿದಂತೆ ಎಲ್ಲಿ ನೋಡಿದರೂ ಸ್ಪೆಟರ್, ರೈನ್ ಕೋಟ್ ಸೇರಿದಂತೆ ಬೆಚ್ಚನೆಯ ಉಡುಪುಗಳನ್ನು ತೊಟ್ಟ ಜನರು...ಅಬ್ಬಾ ಚಳಿ ಚಳಿ ಎನ್ನುತ್ತಿದ್ದ ಯುವ ಸಮುದಾಯ...ಹೌದು ಚಿಕ್ಕಬಳ್ಳಾಪುರ ನಗರ ಸೇರಿದಂತೆ ಇಡೀ ಜಿಲ್ಲೆಗೆ ಸೂರ್ಯನ ರಶ್ಮಿಗಳು ಪ್ರವೇಶವಾಗಲೇ ಇಲ್ಲ.</p>.<p>‘ದಿತ್ವಾ’ ಚಂಡಮಾರುತದ ಪರಿಣಾಮ ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಚಳಿ ತೀವ್ರವಾಗಿದೆ. ಮನೆಯಿಂದ ಹೊರಗೆ ಬಾರದಷ್ಟು ಮತ್ತು ಮನೆಯೊಳಗಿದ್ದರೂ ಕಿಟಕಿ ಬಾಗಿಲುಗಳನ್ನು ಮುಚ್ಚುವಷ್ಟು ವಾತಾವರಣ ತಣ್ಣಗಿದೆ.</p>.<p>ಕಳೆದ ಎರಡು–ಮೂರು ದಿನಗಳಿಂದ ಮೋಡ ಕವಿದ ವಾತಾವರಣ ಜಿಲ್ಲೆಯಲ್ಲಿದೆ. ಭಾನುವಾರ ಈ ವಾತಾವರಣ ಮತ್ತಷ್ಟು ತೀವ್ರವಾಗಿತ್ತು. ಜೊತೆಗೆ ತುಂತುರು ಮಳೆ ಸಹ ಸುರಿಯಿತು. ತಾಪಮಾನ 17 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದ್ದು, ಚಳಿಯ ತೀವ್ರತೆಗೆ ಜನ ತರಗುಟ್ಟಿದರು.</p>.<p>ಚಳಿಯಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು. ರಜೆಯ ದಿನವಾದ ಭಾನುವಾರ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಸದಾ ಜನಜಂಗುಳಿಯಿಂದ ತುಂಬಿರುತ್ತಿದ್ದ ರಸ್ತೆಗಳು, ಮಾರುಕಟ್ಟೆಯಲ್ಲಿ ಜನರ ಓಡಾಟ ವಿರಳವಾಗಿತ್ತು. </p>.<p>ನಗರದ ಹೊರವಲಯದ ಗೌರಿಬಿದನೂರಿನ ಕಣಿವೆ ಪ್ರದೇಶ, ನಂದಿಗಿರಿಧಾಮದ ಸುತ್ತಮುತ್ತ, ಸ್ಕಂದಗಿರಿಯ ಆಸುಪಾಸಿನ ಬೆಟ್ಟಗುಡ್ಡಗಳನ್ನು ಮಂಜು ಮುತ್ತಿಕ್ಕಿತ್ತು. ಇಡೀ ಬೆಟ್ಟಗುಡ್ಡಗಳ ಮೇಲೆಲ್ಲ ಮಂಜು ಇಣುಕಿತ್ತು. ಮಂಜು ಸುರಿಯುವುದು ಹೆಚ್ಚಾಗಿದ್ದು, ಶೀತ ಗಾಳಿ ಬೀಸಿತು.</p>.<p>ಜನರು ಬೆಚ್ಚನೆಯ ಉಡುಪುಗಳನ್ನು ತೊಟ್ಟು ಮನೆಯಿಂದ ಹೊರ ಬರುತ್ತಿದ್ದರು. ಸಾಮಾನ್ಯವಾಗಿ ವಾರಾಂತ್ಯರದ ದಿನಗಳಲ್ಲಿ ಸಂಜೆ ಚಾಟ್ಸ್ ಸೆಂಟರ್ಗಳಲ್ಲಿ ಹೆಚ್ಚು ಜನರು ಸೇರುತ್ತಿದ್ದರು. ಆದರೆ ಚಳಿ ಮತ್ತು ತುಂತುರು ಮಳೆಯ ಕಾರಣದಿಂದ ಹೆಚ್ಚು ಜನರು ಮನೆಯಿಂದಲೂ ಹೊರಗೆ ಬರಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>