ಶಿವಮೊಗ್ಗ: ವಯೋಸಹಜ ಆನಾರೋಗ್ಯದಿಂದ ಬಳಲುತ್ತಿದ್ದ ತ್ಯಾವರೆಕೊಪ್ಪದ ಸಫಾರಿಯ ಹಿರಿಯ ಹುಲಿ ‘ರಾಮ’ (17) ಮೃತಪಟ್ಟಿದೆ.
ಹಿರಿಯ ಹುಲಿ ‘ವಾಲಿ’ (18) ಅನಾರೋಗ್ಯದಿಂದ ಈ ಹಿಂದೆ ಸಾವನ್ನಪ್ಪಿತ್ತು. ಹಿರಿಯ ಹುಲಿಗಳು ಸಾವು ಕಂಡಿರುವುದು ಸಫಾರಿ ಸಿಬ್ಬಂದಿಯಲ್ಲಿ ಬೇಸರ ಮೂಡಿಸಿದೆ.
ಉಳಿದಿದ್ದು ಐದು ಮಾತ್ರ: ಸಫಾರಿಯಲ್ಲಿ 6 ಹುಲಿಗಳಿದ್ದವು. ಈಗ ಐದು ಮಾತ್ರ ಉಳಿದುಕೊಂಡಿವೆ. ಇದರಲ್ಲಿ ಸಫಾರಿಯ ಹಿರಿಯ ಹುಲಿ ಎನ್ನಿಸಿಕೊಂಡಿರುವ ‘ಹನುಮ’ (19), ‘ಸೀತಾ’ (16), ‘ವಿಜಯ’ ಮತ್ತು ‘ದಶಮಿ’ (15), ‘ಪೂರ್ಣಿಮ’ (10) ಎಂದು ಸಫಾರಿಯ ಕಾರ್ಯ ನಿರ್ವಾಹಕ ನಿರ್ದೇಶಕ ಮುಕುಂದ್ಚಂದ್ ತಿಳಿಸಿದ್ದಾರೆ.