<p><strong>ಶಿವಮೊಗ್ಗ</strong>: ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರ ದೇಶ ಪ್ರೇಮದ ಜ್ವಾಲೆ ಹೊತ್ತಿಸಿದ ಭಾವನಾತ್ಮಕ ಗೀತೆಯೆಂದರೆ ಅದು ವಂದೇ ಮಾತರಂ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.</p>.<p>ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಕಚೇರಿಯ ಮುಂದೆ ನಡೆದ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಯಾವುದೇ ಧಾರ್ಮಿಕ ಅರ್ಥವಿಲ್ಲದೆ ‘ತಾಯಿ’ಯಂತೆ ಮಾತೃಭೂಮಿ ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದರು.</p>.<p>‘ಒಬ್ಬ ತಾಯಿ ನಮ್ಮನ್ನು ಪೋಷಿಸುವಂತೆಯೇ, ನಮ್ಮ ಮಾತೃಭೂಮಿಯನ್ನು ಪೋಷಿಸಬೇಕು. ಆ ನಿಟ್ಟಿನಲ್ಲಿ ಈ ಹಾಡು ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದೆ ಎಂದು ತಿಳಿಸಿದರು.</p>.<p>ಈ ಗೀತೆ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿದೆ. ನರೇಂದ್ರ ಮೋದಿ ಪ್ರಧಾನಿ ಇರುವಾಗ 150 ವರ್ಷ ಪೂರೈಸುತ್ತಿರುವುದು, ಸಂತಸದೊಂದಿಗೆ, ಸಂಭ್ರಮ ಮನೆ ಮಾಡಿದೆ. ಈ ಸಂತೋಷವನ್ನು ವರ್ಷ ಪೂರ್ತಿ ಆಚರಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದರು.</p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್ ಮಾತನಾಡಿ, ಈ ಸಂಭ್ರಮಾಚರಣೆಯ ಅಮೂಲ್ಯ ಕ್ಷಣಗಳನ್ನು ಮೋದಿ ನಮಗೆ ಕೊಟ್ಟಿರುವುದೇ ಸಂತಸ ತಂದಿದೆ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪಕ್ಷದ ಮುಖಂಡ ಎಸ್.ಎನ್. ಜ್ಯೋತಿ ಪ್ರಕಾಶ್ ಹಾಗೂ ಪಕ್ಷದ ಮುಖಂಡರು ಇದ್ದರು.</p>.<div><blockquote>ಹಿಂದೂಸ್ಥಾನದಲ್ಲಿ ಜನಿಸಿದ ಪ್ರತಿಯೊಬ್ಬರು 'ವಂದೇ ಮಾತರಂ' ಗೀತೆಯನ್ನು ಹೇಳಬೇಕು ಇದು ರಾಷ್ಟ್ರಗೀತೆಯಾಗಬೇಕಿತ್ತು. ಕೆಲವರ ತಪ್ಪು ಕಲ್ಪನೆಯಿಂದ ದೇಶ ಪ್ರೇಮಿಗಳ ಗೀತೆಯಾಗಿದೆ. </blockquote><span class="attribution">ಚನ್ನಬಸಪ್ಪ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿವಮೊಗ್ಗ</strong>: ಸ್ವಾತಂತ್ರ್ಯ ಪೂರ್ವದಲ್ಲಿ ಮತ್ತು ನಂತರ ದೇಶ ಪ್ರೇಮದ ಜ್ವಾಲೆ ಹೊತ್ತಿಸಿದ ಭಾವನಾತ್ಮಕ ಗೀತೆಯೆಂದರೆ ಅದು ವಂದೇ ಮಾತರಂ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.</p>.<p>ವಂದೇ ಮಾತರಂನ 150ನೇ ವಾರ್ಷಿಕೋತ್ಸವದ ಅಂಗವಾಗಿ ಬಿಜೆಪಿ ಕಚೇರಿಯ ಮುಂದೆ ನಡೆದ ಸಾಮೂಹಿಕ ಗೀತೆ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಾ, ಯಾವುದೇ ಧಾರ್ಮಿಕ ಅರ್ಥವಿಲ್ಲದೆ ‘ತಾಯಿ’ಯಂತೆ ಮಾತೃಭೂಮಿ ಎಂಬುದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದರು.</p>.<p>‘ಒಬ್ಬ ತಾಯಿ ನಮ್ಮನ್ನು ಪೋಷಿಸುವಂತೆಯೇ, ನಮ್ಮ ಮಾತೃಭೂಮಿಯನ್ನು ಪೋಷಿಸಬೇಕು. ಆ ನಿಟ್ಟಿನಲ್ಲಿ ಈ ಹಾಡು ಪ್ರತಿಯೊಬ್ಬರಲ್ಲೂ ದೇಶಭಕ್ತಿಯ ಜ್ವಾಲೆಯನ್ನು ಹೊತ್ತಿಸಿದೆ ಎಂದು ತಿಳಿಸಿದರು.</p>.<p>ಈ ಗೀತೆ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿದೆ. ನರೇಂದ್ರ ಮೋದಿ ಪ್ರಧಾನಿ ಇರುವಾಗ 150 ವರ್ಷ ಪೂರೈಸುತ್ತಿರುವುದು, ಸಂತಸದೊಂದಿಗೆ, ಸಂಭ್ರಮ ಮನೆ ಮಾಡಿದೆ. ಈ ಸಂತೋಷವನ್ನು ವರ್ಷ ಪೂರ್ತಿ ಆಚರಿಸಬೇಕು ಎಂದು ಸೂಚನೆ ನೀಡಿದ್ದಾರೆ ಎಂದರು.</p>.<p>ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ.ಜಗದೀಶ್ ಮಾತನಾಡಿ, ಈ ಸಂಭ್ರಮಾಚರಣೆಯ ಅಮೂಲ್ಯ ಕ್ಷಣಗಳನ್ನು ಮೋದಿ ನಮಗೆ ಕೊಟ್ಟಿರುವುದೇ ಸಂತಸ ತಂದಿದೆ ಎಂದರು.</p>.<p>ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ, ಪಕ್ಷದ ಮುಖಂಡ ಎಸ್.ಎನ್. ಜ್ಯೋತಿ ಪ್ರಕಾಶ್ ಹಾಗೂ ಪಕ್ಷದ ಮುಖಂಡರು ಇದ್ದರು.</p>.<div><blockquote>ಹಿಂದೂಸ್ಥಾನದಲ್ಲಿ ಜನಿಸಿದ ಪ್ರತಿಯೊಬ್ಬರು 'ವಂದೇ ಮಾತರಂ' ಗೀತೆಯನ್ನು ಹೇಳಬೇಕು ಇದು ರಾಷ್ಟ್ರಗೀತೆಯಾಗಬೇಕಿತ್ತು. ಕೆಲವರ ತಪ್ಪು ಕಲ್ಪನೆಯಿಂದ ದೇಶ ಪ್ರೇಮಿಗಳ ಗೀತೆಯಾಗಿದೆ. </blockquote><span class="attribution">ಚನ್ನಬಸಪ್ಪ ಶಾಸಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>