‘ಮುಂದೆ ಇಂಥ ಘಟನೆಗಳು ಮರುಕಳಿಸಬಾರದು. ಎಲ್ಲವನ್ನೂ ನಾಡಿಗಾಗಿ ತ್ಯಾಗ ಮಾಡಿದ ರೈತರು ಹಿನ್ನೀರಿನ ದಡದಲ್ಲಿ ಗೊಂಡಾರಣ್ಯದಲ್ಲಿ ಯಾತನೆ ಅನುಭವಿಸುತ್ತಿದ್ದಾರೆ. ಅವರ ಪಾಲಿಗೆ ದೊರಕುವ ಅಲ್ಪ ಸಹಾಯಗಳನ್ನೂ ಕಿತ್ತುಕೊಳ್ಳುವ ಜಾಯಮಾನ ಮುಂದುವರಿದಲ್ಲಿ ತೀವ್ರ ಹೋರಾಟ ಮಾಡಲಾಗುತ್ತದೆ’ ಎಂದು ಸಾಮಾಜಿಕ ಕಾರ್ಯಕರ್ತ ಮಂಜಯ್ಯ ಜೈನ್ ತಿಳಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ಪ್ರೇಮಾ ಸಂತೋಷ್, ದೇವರಾಜ ಜೈನ್ ಯಡ್ಡಳ್ಳಿ, ಪದ್ಮ ಪ್ರಸಾದ್, ಸೋಮರಾಜ್, ನಾಗರಾಜ್ ವಾಟೇಮಕ್ಕಿ, ದಿನೇಶ್ ಆರೋಡಿ ಇದ್ದರು.