<p><strong>ಭದ್ರಾವತಿ:</strong> ಇಲ್ಲಿನ ಪ್ರಮುಖ ವೃತ್ತದ ಸಿಗ್ನಲ್ ದೀಪಗಳು ತಮ್ಮ ಕಾರ್ಯ ಸ್ಥಗಿತಗೊಂಡು ತಿಂಗಳುಗಳೇ ಉರುಳಿದರು, ಇದರ ಜವಾಬ್ದಾರಿ ಹೊತ್ತವರು ಮಾತ್ರ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.<br /> <br /> ಸರಿ ಸುಮಾರು ಐದಾರು ವರ್ಷದ ಹಿಂದೆ ರಂಗಪ್ಪ ವೃತ್ತದಲ್ಲಿ ಮೊದಲ ಸಿಗ್ನಲ್ ದೀಪವನ್ನು ಪೊಲೀಸ್ ಇಲಾಖೆ ಸೌರಶಕ್ತಿ ಬಳಕೆ ಮೂಲಕ ಆರಂಭಿಸಿದ್ದು, ನಂತರದ ವರ್ಷದಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಮಾಧವಚಾರ್ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಇದರ ವ್ಯವಸ್ಥೆ ಕಲ್ಪಿಸಿತು.<br /> <br /> ಅಲ್ಲಿಂದ ಎರಡು ವರ್ಷ ಯಾವುದೇ ಅಡೆತಡೆ ಇಲ್ಲದೇ ತನ್ನ ಶಕ್ತಿ ಪ್ರದರ್ಶಿಸಿದ ಈ ಸಿಗ್ನಲ್ ಕಂಬಗಳು ಕ್ರಮೇಣ, ವಿದ್ಯುತ್ ಸಮಸ್ಯೆ ಹಾಗೂ ಇನ್ನಿತರೆ ಕಾರಣಗಳಿಂದ ಸ್ಥಗಿತವಾಗಿತ್ತು.<br /> <br /> ನಂತರದ ದಿನದಲ್ಲಿ ಈ ಕುರಿತಾಗಿ ಒಂದಿಷ್ಟು ತಲೆ ಕೆಡಿಸಿಕೊಂಡ ಪೊಲೀಸ್ ಇಲಾಖೆ ಪುನಃ ನಗರಾಭಿವೃದ್ಧಿ ಪ್ರಾಧಿಕಾರದ ಮೊರೆ ಹೊಕ್ಕಿತ್ತು. ಇದಕ್ಕೆ ಬೆಂಬಲ ನೀಡುವ ರೀತಿಯಲ್ಲಿ ಪ್ರಾಧಿಕಾರ ್ಙ 2ಲಕ್ಷ ವೆಚ್ಚ ಮಾಡಿ ಅದರ ದುರಸ್ತಿ, ಇನ್ನಿತರೆ ಕೆಲಸ ಪೂರೈಸಿ ನಿರ್ವಹಣೆಗಾಗಿ ನಗರಸಭೆಗೆ ಒಪ್ಪಿಸಿತು.<br /> <br /> ಈಗ ಇದರ ಉಸ್ತುವರಿ ನಗರಸಭೆ ಅಧೀನಕ್ಕೆ ಒಪ್ಪಟ್ಟಿದ್ದು, ಇದರತ್ತ ದೃಷ್ಟಿಹರಿಸುವ ಕೆಲಸವನ್ನು ಮಾತ್ರ ಸ್ಥಳೀಯಾಡಳಿತ ಮಾಡಿಲ್ಲ. ಇದರ ಪರಿಣಾಮ ಮೆಸ್ಕಾಂ ಉಪ ವಿಭಾಗಕ್ಕೆ ಭರ್ತಿ ಮಾಡಿ ಪಡೆಯಬೇಕಾದ ವಿದ್ಯುತ್ ಸೌಕರ್ಯ ಕೊರತೆ ಕಾರಣ ಸಿಗ್ನಲ್ ದೀಪಗಳು ತಮ್ಮ ಆಸ್ತಿತ್ವ ಕಳೆದುಕೊಂಡಿವೆ. <br /> <br /> <strong>ಇಲಾಖೆ ಪತ್ರ ಬರೆದಿದೆ: </strong>ಈ ದೀಪಗಳ ಸಮರ್ಪಕ ಸೇವೆಯ ನಿರ್ವಹಣೆ ಮಾಡಬೇಕಾದ ಪೊಲೀಸ್ ಇಲಾಖೆ ಹಲವು ಪತ್ರಗಳನ್ನು ನಗರಸಭೆಗೆ ಬರೆದಿದ್ದರೂ ಸಹ ಯಾವುದೇ ಸಮರ್ಪಕ ಉತ್ತರ ದೊರೆತಿಲ್ಲ ಎನ್ನುತ್ತಾರೆ ಅಧಿಕಾರಿಗಳು.<br /> <br /> ಆರಂಭದಲ್ಲಿ ಇಲಾಖೆ ಸ್ಥಾಪಿಸಿದ ವ್ಯವಸ್ಥೆಗೆ ಜತೆಯಾಗಿ ನಿಂತ `ಸೂಡಾ~ ಹೆಚ್ಚಿನ ಸಹಕಾರ ನೀಡಿ ಅದರ ವಿಸ್ತರಣೆಗೂ ಸಹಕಾರ ನೀಡಿದೆ. ಜತೆಗೆ, ಇತ್ತೀಚೆಗೆ ಅದರ ರಿಪೇರಿ ಕಾರ್ಯಕ್ಕೂ ನೆರವು ನೀಡಿದೆ. ಅದನ್ನು ಮುಂದುವರಿಸುವ ಹೊಣೆಗಾರಿಕೆ ಹೊರಬೇಕಾದ ನಗರಸಭೆ ಇದರಿಂದ ದೂರ ಸರಿದಿದೆ ಎಂಬ ಅಭಿಪ್ರಾಯ ಇಲಾಖೆಯದು.<br /> <br /> <strong>ಪ್ರಯತ್ನ ನಡೆದಿದೆ: </strong>ಸಿಗ್ನಲ್ ದೀಪಗಳ ಉಸ್ತುವಾರಿ, ನಿರ್ವಹಣೆ ನಗರಸಭೆ ಅಧೀನಕ್ಕೆ ಬಂದಿದೆ. ಆದರೆ, ಅದಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವ ಸಂಬಂಧ ಕೆಲವು ತೊಡಕಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿ.<br /> ವಾರ್ಷಿಕ ನಿರ್ವಹಣಾ ವೆಚ್ಚವೇ ಹೆಚ್ಚು ಬರುತ್ತದೆ. ಇದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಣ ನಮಗೆ ಹೊರೆ ಎಂದು ಸಬೂಬು ಹೇಳುವ ಅಧಿಕಾರಿಗಳು, ಮುಂದಿನ ದಿನದಲ್ಲಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವ ಭರವಸೆ ಮಾತನ್ನಾಡುತ್ತಾರೆ.<br /> <br /> ಒಟ್ಟಿನಲ್ಲಿ ಹಲವು ಲಕ್ಷಗಳ ವೆಚ್ಚದಲ್ಲಿ ಮಾಡಲಾದ ಯೋಜನೆಯೊಂದು ಜನರ ಉಪಯೋಗಕ್ಕೆ ಬಾರದೆ ಮೂಲೆ ಸೇರಿದ್ದು, ಇದರ ಹೊಣೆ ಹೊತ್ತಿರುವ ಸ್ಥಳೀಯಾಡಳಿತ ಮಾತ್ರ ಜಾಣತನದ ಹೆಜ್ಜೆ ಇಟ್ಟಿದೆ. ಈಗ ಈ ವ್ಯವಸ್ಥೆಗೆ `ಗಂಟೆ ಕಟ್ಟುವರು ಯಾರು...~ ಎಂಬುದೇ ಚರ್ಚೆಯ ವಿಷಯ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ:</strong> ಇಲ್ಲಿನ ಪ್ರಮುಖ ವೃತ್ತದ ಸಿಗ್ನಲ್ ದೀಪಗಳು ತಮ್ಮ ಕಾರ್ಯ ಸ್ಥಗಿತಗೊಂಡು ತಿಂಗಳುಗಳೇ ಉರುಳಿದರು, ಇದರ ಜವಾಬ್ದಾರಿ ಹೊತ್ತವರು ಮಾತ್ರ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.<br /> <br /> ಸರಿ ಸುಮಾರು ಐದಾರು ವರ್ಷದ ಹಿಂದೆ ರಂಗಪ್ಪ ವೃತ್ತದಲ್ಲಿ ಮೊದಲ ಸಿಗ್ನಲ್ ದೀಪವನ್ನು ಪೊಲೀಸ್ ಇಲಾಖೆ ಸೌರಶಕ್ತಿ ಬಳಕೆ ಮೂಲಕ ಆರಂಭಿಸಿದ್ದು, ನಂತರದ ವರ್ಷದಲ್ಲಿ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಮಾಧವಚಾರ್ ಹಾಗೂ ಅಂಬೇಡ್ಕರ್ ವೃತ್ತದಲ್ಲಿ ಇದರ ವ್ಯವಸ್ಥೆ ಕಲ್ಪಿಸಿತು.<br /> <br /> ಅಲ್ಲಿಂದ ಎರಡು ವರ್ಷ ಯಾವುದೇ ಅಡೆತಡೆ ಇಲ್ಲದೇ ತನ್ನ ಶಕ್ತಿ ಪ್ರದರ್ಶಿಸಿದ ಈ ಸಿಗ್ನಲ್ ಕಂಬಗಳು ಕ್ರಮೇಣ, ವಿದ್ಯುತ್ ಸಮಸ್ಯೆ ಹಾಗೂ ಇನ್ನಿತರೆ ಕಾರಣಗಳಿಂದ ಸ್ಥಗಿತವಾಗಿತ್ತು.<br /> <br /> ನಂತರದ ದಿನದಲ್ಲಿ ಈ ಕುರಿತಾಗಿ ಒಂದಿಷ್ಟು ತಲೆ ಕೆಡಿಸಿಕೊಂಡ ಪೊಲೀಸ್ ಇಲಾಖೆ ಪುನಃ ನಗರಾಭಿವೃದ್ಧಿ ಪ್ರಾಧಿಕಾರದ ಮೊರೆ ಹೊಕ್ಕಿತ್ತು. ಇದಕ್ಕೆ ಬೆಂಬಲ ನೀಡುವ ರೀತಿಯಲ್ಲಿ ಪ್ರಾಧಿಕಾರ ್ಙ 2ಲಕ್ಷ ವೆಚ್ಚ ಮಾಡಿ ಅದರ ದುರಸ್ತಿ, ಇನ್ನಿತರೆ ಕೆಲಸ ಪೂರೈಸಿ ನಿರ್ವಹಣೆಗಾಗಿ ನಗರಸಭೆಗೆ ಒಪ್ಪಿಸಿತು.<br /> <br /> ಈಗ ಇದರ ಉಸ್ತುವರಿ ನಗರಸಭೆ ಅಧೀನಕ್ಕೆ ಒಪ್ಪಟ್ಟಿದ್ದು, ಇದರತ್ತ ದೃಷ್ಟಿಹರಿಸುವ ಕೆಲಸವನ್ನು ಮಾತ್ರ ಸ್ಥಳೀಯಾಡಳಿತ ಮಾಡಿಲ್ಲ. ಇದರ ಪರಿಣಾಮ ಮೆಸ್ಕಾಂ ಉಪ ವಿಭಾಗಕ್ಕೆ ಭರ್ತಿ ಮಾಡಿ ಪಡೆಯಬೇಕಾದ ವಿದ್ಯುತ್ ಸೌಕರ್ಯ ಕೊರತೆ ಕಾರಣ ಸಿಗ್ನಲ್ ದೀಪಗಳು ತಮ್ಮ ಆಸ್ತಿತ್ವ ಕಳೆದುಕೊಂಡಿವೆ. <br /> <br /> <strong>ಇಲಾಖೆ ಪತ್ರ ಬರೆದಿದೆ: </strong>ಈ ದೀಪಗಳ ಸಮರ್ಪಕ ಸೇವೆಯ ನಿರ್ವಹಣೆ ಮಾಡಬೇಕಾದ ಪೊಲೀಸ್ ಇಲಾಖೆ ಹಲವು ಪತ್ರಗಳನ್ನು ನಗರಸಭೆಗೆ ಬರೆದಿದ್ದರೂ ಸಹ ಯಾವುದೇ ಸಮರ್ಪಕ ಉತ್ತರ ದೊರೆತಿಲ್ಲ ಎನ್ನುತ್ತಾರೆ ಅಧಿಕಾರಿಗಳು.<br /> <br /> ಆರಂಭದಲ್ಲಿ ಇಲಾಖೆ ಸ್ಥಾಪಿಸಿದ ವ್ಯವಸ್ಥೆಗೆ ಜತೆಯಾಗಿ ನಿಂತ `ಸೂಡಾ~ ಹೆಚ್ಚಿನ ಸಹಕಾರ ನೀಡಿ ಅದರ ವಿಸ್ತರಣೆಗೂ ಸಹಕಾರ ನೀಡಿದೆ. ಜತೆಗೆ, ಇತ್ತೀಚೆಗೆ ಅದರ ರಿಪೇರಿ ಕಾರ್ಯಕ್ಕೂ ನೆರವು ನೀಡಿದೆ. ಅದನ್ನು ಮುಂದುವರಿಸುವ ಹೊಣೆಗಾರಿಕೆ ಹೊರಬೇಕಾದ ನಗರಸಭೆ ಇದರಿಂದ ದೂರ ಸರಿದಿದೆ ಎಂಬ ಅಭಿಪ್ರಾಯ ಇಲಾಖೆಯದು.<br /> <br /> <strong>ಪ್ರಯತ್ನ ನಡೆದಿದೆ: </strong>ಸಿಗ್ನಲ್ ದೀಪಗಳ ಉಸ್ತುವಾರಿ, ನಿರ್ವಹಣೆ ನಗರಸಭೆ ಅಧೀನಕ್ಕೆ ಬಂದಿದೆ. ಆದರೆ, ಅದಕ್ಕೆ ವಿದ್ಯುತ್ ಸಂಪರ್ಕ ಕೊಡಿಸುವ ಸಂಬಂಧ ಕೆಲವು ತೊಡಕಿದೆ ಎನ್ನುತ್ತಾರೆ ನಗರಸಭೆ ಅಧಿಕಾರಿ.<br /> ವಾರ್ಷಿಕ ನಿರ್ವಹಣಾ ವೆಚ್ಚವೇ ಹೆಚ್ಚು ಬರುತ್ತದೆ. ಇದಕ್ಕೆ ಬೇಕಾದ ಸಂಪನ್ಮೂಲ ಕ್ರೋಡೀಕರಣ ನಮಗೆ ಹೊರೆ ಎಂದು ಸಬೂಬು ಹೇಳುವ ಅಧಿಕಾರಿಗಳು, ಮುಂದಿನ ದಿನದಲ್ಲಿ ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವ ಭರವಸೆ ಮಾತನ್ನಾಡುತ್ತಾರೆ.<br /> <br /> ಒಟ್ಟಿನಲ್ಲಿ ಹಲವು ಲಕ್ಷಗಳ ವೆಚ್ಚದಲ್ಲಿ ಮಾಡಲಾದ ಯೋಜನೆಯೊಂದು ಜನರ ಉಪಯೋಗಕ್ಕೆ ಬಾರದೆ ಮೂಲೆ ಸೇರಿದ್ದು, ಇದರ ಹೊಣೆ ಹೊತ್ತಿರುವ ಸ್ಥಳೀಯಾಡಳಿತ ಮಾತ್ರ ಜಾಣತನದ ಹೆಜ್ಜೆ ಇಟ್ಟಿದೆ. ಈಗ ಈ ವ್ಯವಸ್ಥೆಗೆ `ಗಂಟೆ ಕಟ್ಟುವರು ಯಾರು...~ ಎಂಬುದೇ ಚರ್ಚೆಯ ವಿಷಯ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>