<p><strong>ಪಾವಗಡ: </strong>ಶಂಕರಾಚಾರ್ಯರು ಕೇವಲ ದಾರ್ಶನಿಕರಷ್ಟೇ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಸಮಾಜ ಸುಧಾರಕರಲ್ಲಿ ಒಬ್ಬರು ಎಂದು ಉಪನ್ಯಾಸಕ ಡಾ.ಪಿ.ಆರ್.ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು.<br /> <br /> ಪಟ್ಟಣದಲ್ಲಿ ಭಾನುವಾರ ಶಂಕರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಪ್ರವಚನದಲ್ಲಿ ಆದಿ ಗುರು ಶಂಕರಾಚಾರ್ಯರು ದಾರ್ಶನಿಕನಾಗಿ, ತತ್ವಜ್ಞಾನಿಯಾಗಿ ವಿಶ್ವಕ್ಕೆ ಬೆಳಕು ನೀಡಿದ ಮಹಾನ್ ಚೇತನ ಎಂದರು.</p>.<p><br /> ಹಿಂದೂ ಸಂಸ್ಕೃತಿ ಅವನತಿಯ ಅಂಚಿನಲ್ಲಿದ್ದಾಗ ಧರ್ಮವನ್ನು ಕಾಪಾಡುವ ಸಲುವಾಗಿ ರಾಷ್ಟ್ರಾದ್ಯಂತ ನಾಲ್ಕು ಪೀಠಗಳನ್ನು ಸ್ಥಾಪಿಸಿ ಆ ಮೂಲಕ ಭರತ ಸಂಸ್ಕೃತಿಗೆ ಪುನಶ್ಚೇತನ ನೀಡಿದರು. ಜತೆಗೆ ಸನಾತನ ಭಾರತ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಿದರು ಎಂದು ತಿಳಿಸಿದರು.<br /> <br /> ಅದ್ವೈತ ಸಿದ್ಧಾಂತದ ಮೂಲಕ ಮನುಕುಲವೆಲ್ಲ ಒಂದೇ. ಇಲ್ಲಿ ಎಲ್ಲರೂ ಸಮಾನರು ಎನ್ನುವ ತತ್ವ ಸಾರಿದರು. ಏಳನೇ ಶತಮಾನದಲ್ಲಿ ದೇವರು, ಜಾತಿಗಳ ಹೆಸರಿನಲ್ಲಾಗುತ್ತಿದ್ದ ಘರ್ಷಣೆ ತಡೆಯುವ ಮೂಲಕ ಸಮಾಜ ಸುಧಾರಕ ಎಂದೆನಿಸಿಕೊಂಡರು.<br /> <br /> ಶಂಕರ ಜಯಂತಿ ಪ್ರಯುಕ್ತ ಪಟ್ಟಣದ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಸಾಮೂಹಿಕ ಉಪನಯನ, ವಿವಿಧ ಪೂಜೆ ನಡೆದವು. ತಾಲ್ಲೂಕಿನ ಸಂಕಾಪುರದಲ್ಲಿಯೂ ಶಂಕರಾಚಾರ್ಯರ ಆರಾಧನೆ ಏರ್ಪಡಿಸಲಾಗಿತ್ತು.<br /> <br /> ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ಬದ್ರಿನಾಥ್, ನಗರ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಚೆಲುವರಾಜನ್, ಕಾರ್ಯಾಧ್ಯಕ್ಷ ಎಂ.ಎನ್.ರಘುನಾಥಶರ್ಮ, ಖಜಾಂಚಿ ಪಿ.ಎಸ್.ಅನಿಲ್ ಕುಮಾರ್, ಪದಾಧಿಕಾರಿ ಎಂ.ಎಸ್.ವಿಶ್ವನಾಥ್, ವಕೀಲ ಯಜ್ಞನಾರಾಯಣ ಶರ್ಮ, ಕಾಮಾಕ್ಷಿ ಯಜ್ಞನಾರಾಯಣ್, ಚಂದ್ರಿಕಾ ಶ್ರೀನಾಥ್, ಶ್ರೀದೇವಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.<br /> <br /> <strong>ಶಂಕರ ಜಯಂತಿ ಆಚರಣೆ</strong><br /> <strong>ಹುಳಿಯಾರು:</strong> ಪಟ್ಟಣದ ಅನಂತಶಯನ ರಂಗನಾಥಸ್ವಾಮಿ ದೇವಾಲಯದಲ್ಲಿ ಶಂಕರ, ಗಾಯತ್ರಿ, ರಾಮಾನುಜ ಜಯಂತಿಯನ್ನು ವಿಪ್ರ ಸಮಾಜದಿಂದ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು<br /> <br /> ಶಂಕರ, ರಾಮಾನುಜ, ಗಾಯತ್ರಿ ದೇವಿಯ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಎಚ್.ಎಲ್.ಲಕ್ಷ್ಮಿನರಸಿಂಹಯ್ಯ ಶಂಕರ ಭಗವತ್ಪಾದರು ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ ಮಹಾ ದಾರ್ಶನಿಕರು ಎಂದರು.<br /> <br /> ವಿಪ್ರ ಮಹಿಳೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ, ಆನಂದಸಿಂಧು, ರಾಮ ಭುಜಂಘಾಪ್ರಯಾತ, ಹರಿಸ್ತುತಿ, ಶಿವಾನಂದಲಹರಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು.</p>.<p><br /> ಶಂಕರ ಭಜನೆ, ಮಹಾ ಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಸೀತಾರಾಮ ಪ್ರತಿಷ್ಠಾನದ ಅಧ್ಯಕ್ಷ ನರೇಂದ್ರಬಾಬು, ಉಪಾಧ್ಯಕ್ಷ ಎಂ.ಎ.ಲೋಕೇಶಣ್ಣ, ಕಾರ್ಯದರ್ಶಿ ವಿಶ್ವನಾಥ್, ರಂಗನಾಥ್ ಪ್ರಸಾದ್, ಸತ್ಯನಾರಾಯಣ, ಅಶ್ವತ್ ನಾರಾಯಣ ಇತರರು ಪಾಲ್ಗೊಂಡಿದ್ದರು.<br /> <br /> ವೈಷ್ಣವ ಸಮಾಜದಿಂದ ರಂಗನಾಥಸ್ವಾಮಿ ದೇವಾಲಯದಲ್ಲಿ ರಾಮಾನುಜ ಜಯಂತಿ ಆಚರಿಸಲಾಯಿತು. ಅರ್ಚಕ ಪದ್ಮರಾಜು, ಶೇಷಣ್ಣ ವಿಶೇಷ ಪೂಜೆ ಸಲ್ಲಿಸಿದರು. ರಾಮಾನುಜ ಭಜನಾ ಮಂಡಳಿ ಸದಸ್ಯರು ಭಜನೆ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಾವಗಡ: </strong>ಶಂಕರಾಚಾರ್ಯರು ಕೇವಲ ದಾರ್ಶನಿಕರಷ್ಟೇ ಅಲ್ಲ. ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿದ ಸಮಾಜ ಸುಧಾರಕರಲ್ಲಿ ಒಬ್ಬರು ಎಂದು ಉಪನ್ಯಾಸಕ ಡಾ.ಪಿ.ಆರ್.ರೇಣುಕಾಪ್ರಸಾದ್ ಅಭಿಪ್ರಾಯಪಟ್ಟರು.<br /> <br /> ಪಟ್ಟಣದಲ್ಲಿ ಭಾನುವಾರ ಶಂಕರ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಪ್ರವಚನದಲ್ಲಿ ಆದಿ ಗುರು ಶಂಕರಾಚಾರ್ಯರು ದಾರ್ಶನಿಕನಾಗಿ, ತತ್ವಜ್ಞಾನಿಯಾಗಿ ವಿಶ್ವಕ್ಕೆ ಬೆಳಕು ನೀಡಿದ ಮಹಾನ್ ಚೇತನ ಎಂದರು.</p>.<p><br /> ಹಿಂದೂ ಸಂಸ್ಕೃತಿ ಅವನತಿಯ ಅಂಚಿನಲ್ಲಿದ್ದಾಗ ಧರ್ಮವನ್ನು ಕಾಪಾಡುವ ಸಲುವಾಗಿ ರಾಷ್ಟ್ರಾದ್ಯಂತ ನಾಲ್ಕು ಪೀಠಗಳನ್ನು ಸ್ಥಾಪಿಸಿ ಆ ಮೂಲಕ ಭರತ ಸಂಸ್ಕೃತಿಗೆ ಪುನಶ್ಚೇತನ ನೀಡಿದರು. ಜತೆಗೆ ಸನಾತನ ಭಾರತ ಸಂಸ್ಕೃತಿಯನ್ನು ವಿಶ್ವದಾದ್ಯಂತ ಪಸರಿಸಿದರು ಎಂದು ತಿಳಿಸಿದರು.<br /> <br /> ಅದ್ವೈತ ಸಿದ್ಧಾಂತದ ಮೂಲಕ ಮನುಕುಲವೆಲ್ಲ ಒಂದೇ. ಇಲ್ಲಿ ಎಲ್ಲರೂ ಸಮಾನರು ಎನ್ನುವ ತತ್ವ ಸಾರಿದರು. ಏಳನೇ ಶತಮಾನದಲ್ಲಿ ದೇವರು, ಜಾತಿಗಳ ಹೆಸರಿನಲ್ಲಾಗುತ್ತಿದ್ದ ಘರ್ಷಣೆ ತಡೆಯುವ ಮೂಲಕ ಸಮಾಜ ಸುಧಾರಕ ಎಂದೆನಿಸಿಕೊಂಡರು.<br /> <br /> ಶಂಕರ ಜಯಂತಿ ಪ್ರಯುಕ್ತ ಪಟ್ಟಣದ ವೇಣುಗೋಪಾಲಸ್ವಾಮಿ ದೇಗುಲದಲ್ಲಿ ಸಾಮೂಹಿಕ ಉಪನಯನ, ವಿವಿಧ ಪೂಜೆ ನಡೆದವು. ತಾಲ್ಲೂಕಿನ ಸಂಕಾಪುರದಲ್ಲಿಯೂ ಶಂಕರಾಚಾರ್ಯರ ಆರಾಧನೆ ಏರ್ಪಡಿಸಲಾಗಿತ್ತು.<br /> <br /> ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲದ ಪ್ರಧಾನ ಅರ್ಚಕ ಬದ್ರಿನಾಥ್, ನಗರ ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ಚೆಲುವರಾಜನ್, ಕಾರ್ಯಾಧ್ಯಕ್ಷ ಎಂ.ಎನ್.ರಘುನಾಥಶರ್ಮ, ಖಜಾಂಚಿ ಪಿ.ಎಸ್.ಅನಿಲ್ ಕುಮಾರ್, ಪದಾಧಿಕಾರಿ ಎಂ.ಎಸ್.ವಿಶ್ವನಾಥ್, ವಕೀಲ ಯಜ್ಞನಾರಾಯಣ ಶರ್ಮ, ಕಾಮಾಕ್ಷಿ ಯಜ್ಞನಾರಾಯಣ್, ಚಂದ್ರಿಕಾ ಶ್ರೀನಾಥ್, ಶ್ರೀದೇವಿ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.<br /> <br /> <strong>ಶಂಕರ ಜಯಂತಿ ಆಚರಣೆ</strong><br /> <strong>ಹುಳಿಯಾರು:</strong> ಪಟ್ಟಣದ ಅನಂತಶಯನ ರಂಗನಾಥಸ್ವಾಮಿ ದೇವಾಲಯದಲ್ಲಿ ಶಂಕರ, ಗಾಯತ್ರಿ, ರಾಮಾನುಜ ಜಯಂತಿಯನ್ನು ವಿಪ್ರ ಸಮಾಜದಿಂದ ಭಾನುವಾರ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು<br /> <br /> ಶಂಕರ, ರಾಮಾನುಜ, ಗಾಯತ್ರಿ ದೇವಿಯ ಭಾವಚಿತ್ರಗಳಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಎಚ್.ಎಲ್.ಲಕ್ಷ್ಮಿನರಸಿಂಹಯ್ಯ ಶಂಕರ ಭಗವತ್ಪಾದರು ಅದ್ವೈತ ತತ್ವವನ್ನು ಪ್ರತಿಪಾದಿಸಿ ಸನಾತನ ಹಿಂದೂ ಧರ್ಮವನ್ನು ಜಗತ್ತಿಗೆ ಸಾರಿ ಹೇಳಿದ ಮಹಾ ದಾರ್ಶನಿಕರು ಎಂದರು.<br /> <br /> ವಿಪ್ರ ಮಹಿಳೆಯರಿಂದ ಶಂಕರಾಚಾರ್ಯ ವಿರಚಿತ ಸೌಂದರ್ಯಲಹರಿ, ಆನಂದಸಿಂಧು, ರಾಮ ಭುಜಂಘಾಪ್ರಯಾತ, ಹರಿಸ್ತುತಿ, ಶಿವಾನಂದಲಹರಿಯನ್ನು ಸಾಮೂಹಿಕವಾಗಿ ಪಠಿಸಲಾಯಿತು.</p>.<p><br /> ಶಂಕರ ಭಜನೆ, ಮಹಾ ಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ಮಾಡಲಾಯಿತು. ಸೀತಾರಾಮ ಪ್ರತಿಷ್ಠಾನದ ಅಧ್ಯಕ್ಷ ನರೇಂದ್ರಬಾಬು, ಉಪಾಧ್ಯಕ್ಷ ಎಂ.ಎ.ಲೋಕೇಶಣ್ಣ, ಕಾರ್ಯದರ್ಶಿ ವಿಶ್ವನಾಥ್, ರಂಗನಾಥ್ ಪ್ರಸಾದ್, ಸತ್ಯನಾರಾಯಣ, ಅಶ್ವತ್ ನಾರಾಯಣ ಇತರರು ಪಾಲ್ಗೊಂಡಿದ್ದರು.<br /> <br /> ವೈಷ್ಣವ ಸಮಾಜದಿಂದ ರಂಗನಾಥಸ್ವಾಮಿ ದೇವಾಲಯದಲ್ಲಿ ರಾಮಾನುಜ ಜಯಂತಿ ಆಚರಿಸಲಾಯಿತು. ಅರ್ಚಕ ಪದ್ಮರಾಜು, ಶೇಷಣ್ಣ ವಿಶೇಷ ಪೂಜೆ ಸಲ್ಲಿಸಿದರು. ರಾಮಾನುಜ ಭಜನಾ ಮಂಡಳಿ ಸದಸ್ಯರು ಭಜನೆ ನಡೆಸಿಕೊಟ್ಟರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>