<p><strong>ಶಿರಾ: </strong>ಯಲಹಂಕ ತಹಶೀಲ್ದಾರ್ ರಘುಮೂರ್ತಿ ಅವರು ಹುದ್ದೆ ಪಡೆಯಲು ಬಿಜೆಪಿಗೆ ₹1.5 ಕೋಟಿ ಲಂಚ ನೀಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.</p>.<p>‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ತಹಶೀಲ್ದಾರ್ ರಘುಮೂರ್ತಿ ಅಮಾನತಿನ ಸುದ್ದಿ ಪ್ರಸ್ತಾಪಿಸಿ, ‘ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ರಘುಮೂರ್ತಿ ಅವರನ್ನು ನನ್ನ ಬಳಿ ಕರೆತಂದು ಯಲಹಂಕ ತಹಶೀಲ್ದಾರರಾಗಿ ನೇಮಿಸಿದರೆ ₹ 1 ಕೋಟಿ ನೀಡುತ್ತಾರೆ ಎಂದು ಹೇಳಿದ್ದರು.</p>.<p>‘ಇವರು ಭ್ರಷ್ಟಾಚಾರದಿಂದ ಹಣ ಗಳಿಸುತ್ತಾರೆ. ಇಂತಹದನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸುವುದು ಬೇಡ. ಇನ್ನು ಮುಂದೆ ಇಂತಹವರನ್ನು ಕರೆತರಬೇಡ ಎಂದು ಕಾರ್ಯಕರ್ತನಿಗೆ ಬುದ್ಧಿ ಹೇಳಿ ಕಳುಹಿಸಿದ್ದೆ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ₹1.5 ಕೋಟಿ ನೀಡಿ ಹುದ್ದೆ ಪಡೆದಿದ್ದ ರಘುಮೂರ್ತಿ ಈಗ ₹ 150 ಕೋಟಿ ಅವ್ಯವಹಾರ ನಡೆಸಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶಿರಾ: </strong>ಯಲಹಂಕ ತಹಶೀಲ್ದಾರ್ ರಘುಮೂರ್ತಿ ಅವರು ಹುದ್ದೆ ಪಡೆಯಲು ಬಿಜೆಪಿಗೆ ₹1.5 ಕೋಟಿ ಲಂಚ ನೀಡಿದ್ದಾರೆ ಎಂದು ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.</p>.<p>‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿರುವ ತಹಶೀಲ್ದಾರ್ ರಘುಮೂರ್ತಿ ಅಮಾನತಿನ ಸುದ್ದಿ ಪ್ರಸ್ತಾಪಿಸಿ, ‘ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಪಕ್ಷದ ಕಾರ್ಯಕರ್ತರೊಬ್ಬರು ರಘುಮೂರ್ತಿ ಅವರನ್ನು ನನ್ನ ಬಳಿ ಕರೆತಂದು ಯಲಹಂಕ ತಹಶೀಲ್ದಾರರಾಗಿ ನೇಮಿಸಿದರೆ ₹ 1 ಕೋಟಿ ನೀಡುತ್ತಾರೆ ಎಂದು ಹೇಳಿದ್ದರು.</p>.<p>‘ಇವರು ಭ್ರಷ್ಟಾಚಾರದಿಂದ ಹಣ ಗಳಿಸುತ್ತಾರೆ. ಇಂತಹದನ್ನು ಯಾವುದೇ ಕಾರಣಕ್ಕೂ ಪ್ರೋತ್ಸಾಹಿಸುವುದು ಬೇಡ. ಇನ್ನು ಮುಂದೆ ಇಂತಹವರನ್ನು ಕರೆತರಬೇಡ ಎಂದು ಕಾರ್ಯಕರ್ತನಿಗೆ ಬುದ್ಧಿ ಹೇಳಿ ಕಳುಹಿಸಿದ್ದೆ. ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದಾಗ ₹1.5 ಕೋಟಿ ನೀಡಿ ಹುದ್ದೆ ಪಡೆದಿದ್ದ ರಘುಮೂರ್ತಿ ಈಗ ₹ 150 ಕೋಟಿ ಅವ್ಯವಹಾರ ನಡೆಸಿದ್ದಾರೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>