ತೋವಿನಕೆರೆ ಉಮೇಶ್ 2000ರಲ್ಲಿ ಕೊಳವೆ ಬಾವಿ ಕೊರೆಸಿದ್ದರು. ಅಡಿಕೆ, ತರಕಾರಿ, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳದಿದ್ದರು. ನಾಲ್ಕು ವರ್ಷ ಅಡಿಕೆ ಬೆಳೆ ಸಿಕ್ಕಿತ್ತು. ಕೊಳವೆ ಬಾವಿಯಲ್ಲಿ ನೀರು ಇಲ್ಲದಂತಾಗಿ ನೀರಾವರಿ ಕೃಷಿ ಬಿಟ್ಟಿದ್ದರು. ಈಗ ಅದೇ ಕೊಳವೆ ಬಾವಿಗೆ ಮೋಟರ್ ಪಂಪ್ ಬಿಟ್ಟಿದ್ದು, 300 ಅಡಿಯಿಂದ ಸಮೃದ್ಧ ನೀರು ಬರುತ್ತಿದೆ.