<p><strong>ಹುಲಿಯೂರುದುರ್ಗ</strong>: ಅನಿಶ್ಚಿತ ಮಳೆ, ಕೂಲಿ ಕಾರ್ಮಿಕರ ಅಲಭ್ಯತೆಯಿಂದಾಗಿ ಯುವ ಸಮುದಾಯ ಕೃಷಿ ಕ್ಷೇತ್ರ ಕಡೆಗಣಿಸಿರುವುದು ಸಹಜ. ಆದರೆ ಬೇಸಾಯ ನಿರ್ವಹಣೆ ಕ್ರಮಗಳಲ್ಲಿ ಆಗಿರುವ ಬದಲಾವಣೆಗಳಿಂದ ಕೃಷಿ ಕೆಲಸ ಈಗ ಸರಳವಾಗಿದೆ.</p>.<p>ವಿವಿಧ ಬಗೆಯ ಕೃಷಿ ಯಂತ್ರೋಪಕರಣ ರೈತರ ಜತೆಯಾಗಿವೆ. ಉಳುಮೆ, ಬಿತ್ತನೆ, ಕೊಯ್ಲು, ಕಾಳು ವಿಂಗಡಣೆಯಂತಹ ಪ್ರತಿ ಚಟು<br />ವಟಿಕೆಗಳಲ್ಲಿ ಇವುಗಳ ಬಳಕೆ ಹೆಚ್ಚಾಗಿದೆ. ಕೊರೊನಾ ಸೃಷ್ಟಿಸಿರುವ ಸ್ಥಿತ್ಯಂತರ, ಆತಂಕದಿಂದ ತಮ್ಮ ನೆಲ ಮೂಲ ಮಣ್ಣಿನ ವಾಸನೆ ಹಿಡಿದು ಹಳ್ಳಿಗಳತ್ತ ಮರಳುವವರನ್ನು ಉತ್ತೇಜಿಸಿದೆ.</p>.<p>ಪ್ರತಿ ಮನೆಗಳಲ್ಲಿ ಇರುತ್ತಿದ್ದ ರಾಸುಗಳು, ಕೊಟ್ಟಿಗೆ, ಗೊಂತು ಈಗ ಮಾಯವಾಗಿವೆ. ಮರದ ನೇಗಿಲು, ನೊಗ, ಕೂರಿಗೆಗಳನ್ನು ಗೆದ್ದಲು ತಿನ್ನುತ್ತಿವೆ. ಕಬ್ಬಿಣದ ಅಲುಬೆ, ಹೆಗ್ಗುಂಟೆಯಂತಹ ಸಾಂಪ್ರದಾಯಿಕ ಕೃಷಿ ಸಾಧನಗಳು ತುಕ್ಕು ಹಿಡಿದಿವೆ.</p>.<p>ಮರು ರೂಪ ಪಡೆದ ಇವು ಟ್ರಾಕ್ಟರ್ ಎಂಜಿನ್ನಿನ ಭಾಗಗಳಾಗಿ ಒಕ್ಕಲುತನದ ಮುಂದುವರಿಕೆಯ ಸಾಧನಗಳಾಗಿ ಬಳಕೆಯಾಗುತ್ತಿವೆ.</p>.<p>ಬಹುತೇಕ ಹಳ್ಳಿಗಳಲ್ಲಿ ಟ್ರಾಕ್ಟರ್ ಹೊಂದಿರುವ ಯುವಕರು ರೈತರ ಕೃಷಿ ಚಟುವಟಿಕೆಗಳನ್ನು ಯಾಂತ್ರೀಕರಣ ಗೊಳಿಸಿದ್ದಾರೆ. ಆ ಮೂಲಕ ತಮ್ಮ ದುಡಿಮೆಯ ಮಾರ್ಗವನ್ನೂ ಕಂಡುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಿಯೂರುದುರ್ಗ</strong>: ಅನಿಶ್ಚಿತ ಮಳೆ, ಕೂಲಿ ಕಾರ್ಮಿಕರ ಅಲಭ್ಯತೆಯಿಂದಾಗಿ ಯುವ ಸಮುದಾಯ ಕೃಷಿ ಕ್ಷೇತ್ರ ಕಡೆಗಣಿಸಿರುವುದು ಸಹಜ. ಆದರೆ ಬೇಸಾಯ ನಿರ್ವಹಣೆ ಕ್ರಮಗಳಲ್ಲಿ ಆಗಿರುವ ಬದಲಾವಣೆಗಳಿಂದ ಕೃಷಿ ಕೆಲಸ ಈಗ ಸರಳವಾಗಿದೆ.</p>.<p>ವಿವಿಧ ಬಗೆಯ ಕೃಷಿ ಯಂತ್ರೋಪಕರಣ ರೈತರ ಜತೆಯಾಗಿವೆ. ಉಳುಮೆ, ಬಿತ್ತನೆ, ಕೊಯ್ಲು, ಕಾಳು ವಿಂಗಡಣೆಯಂತಹ ಪ್ರತಿ ಚಟು<br />ವಟಿಕೆಗಳಲ್ಲಿ ಇವುಗಳ ಬಳಕೆ ಹೆಚ್ಚಾಗಿದೆ. ಕೊರೊನಾ ಸೃಷ್ಟಿಸಿರುವ ಸ್ಥಿತ್ಯಂತರ, ಆತಂಕದಿಂದ ತಮ್ಮ ನೆಲ ಮೂಲ ಮಣ್ಣಿನ ವಾಸನೆ ಹಿಡಿದು ಹಳ್ಳಿಗಳತ್ತ ಮರಳುವವರನ್ನು ಉತ್ತೇಜಿಸಿದೆ.</p>.<p>ಪ್ರತಿ ಮನೆಗಳಲ್ಲಿ ಇರುತ್ತಿದ್ದ ರಾಸುಗಳು, ಕೊಟ್ಟಿಗೆ, ಗೊಂತು ಈಗ ಮಾಯವಾಗಿವೆ. ಮರದ ನೇಗಿಲು, ನೊಗ, ಕೂರಿಗೆಗಳನ್ನು ಗೆದ್ದಲು ತಿನ್ನುತ್ತಿವೆ. ಕಬ್ಬಿಣದ ಅಲುಬೆ, ಹೆಗ್ಗುಂಟೆಯಂತಹ ಸಾಂಪ್ರದಾಯಿಕ ಕೃಷಿ ಸಾಧನಗಳು ತುಕ್ಕು ಹಿಡಿದಿವೆ.</p>.<p>ಮರು ರೂಪ ಪಡೆದ ಇವು ಟ್ರಾಕ್ಟರ್ ಎಂಜಿನ್ನಿನ ಭಾಗಗಳಾಗಿ ಒಕ್ಕಲುತನದ ಮುಂದುವರಿಕೆಯ ಸಾಧನಗಳಾಗಿ ಬಳಕೆಯಾಗುತ್ತಿವೆ.</p>.<p>ಬಹುತೇಕ ಹಳ್ಳಿಗಳಲ್ಲಿ ಟ್ರಾಕ್ಟರ್ ಹೊಂದಿರುವ ಯುವಕರು ರೈತರ ಕೃಷಿ ಚಟುವಟಿಕೆಗಳನ್ನು ಯಾಂತ್ರೀಕರಣ ಗೊಳಿಸಿದ್ದಾರೆ. ಆ ಮೂಲಕ ತಮ್ಮ ದುಡಿಮೆಯ ಮಾರ್ಗವನ್ನೂ ಕಂಡುಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>