ಪಕ್ಷದ ಎಸ್.ಎನ್.ಸ್ವಾಮಿ ಮಾತನಾಡಿ, ಕಲುಷಿತ ನೀರು ಹೇಮಾವತಿ ನಾಲೆಯ ಮೂಲಕ ಈಚನೂರು ಕೆರೆ ಸೇರುತ್ತದೆ. ಇದರಿಂದ ನಗರಕ್ಕೆ ಕಲುಷಿತ ನೀರು ಸರಬರಾಜು ಆಗುವ ಅಪಾಯವಿದೆ. ಯುಜಿಡಿ ಸಂಸ್ಕರಣೆಗೊಂಡ ನೀರು ಹೂವಿನ ಕಟ್ಟೆ ತುಂಬುತ್ತಿದ್ದು, ಕೃಷಿ ಕೆಲಸಗಳಿಗೆ ನೀರು ಉಪಯೋಗವಾಗುತ್ತಿದೆ. ಆದರೆ ಅಲ್ಲಿ ದುರ್ವಾಸನೆ ಬರುತ್ತಿದ್ದು ನೀರು ಸಂಪೂರ್ಣವಾಗಿ ಶುದ್ಧೀಕರಣವಾಗಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಅಂತರ್ಜಲಕ್ಕೇ ಕಲುಷಿತ ನೀರು ಸೇರಿಕೊಂಡು ರೋಗಗಳ ವಿತರಣಾ ಕೆಂದ್ರಗಳಾಗುತ್ತವೆ. ಆದ್ದರಿಂದ ಕೋಡಿ ವೃತ್ತದ ಬಳಿ ಮ್ಯಾನ್ಹೋಲ್ನಿಂದ ಹರಿಯುವ ಚರಂಡಿ ನೀರನ್ನು ನಿಲ್ಲಿಸಬೇಕು. ಯುಜಿಡಿ ನೀರನ್ನು ಸರಿಯಾಗಿ ಶುದ್ಧೀಕರಿಸಬೇಕು ಎಂದರು.