<p><strong>ತುಮಕೂರು: </strong>ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ರಾಜಕೀಯ ಜೀವನ ಆರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ. ಅವರು ನಿಷ್ಠಾವಂತ ಕಾಂಗ್ರೆಸ್ಸಿಗರು ಎಂದು ಜಿಲ್ಲಾ ಪಂಚಾಯಿತಿ ಹಾಗೂ ಕೆಪಿಸಿಸಿ ಸದಸ್ಯ ಕೆಂಚಮಾರಯ್ಯ ನುಡಿದಿದ್ದಾರೆ.</p>.<p>ಪರಮೇಶ್ವರ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಕೆಲವರು ನಗರದ ವಿವಿಧ ಕಡೆಗಳಲ್ಲಿ ಪರಮೇಶ್ವರ ಹಠಾವೋ ಕಾಂಗ್ರೆಸ್ ಬಚಾವೋ ಎಂದು ಬಿತ್ತಿಪತ್ರಗಳನ್ನು ಅಂಟಿಸಿದ್ದಾರೆ ಎಂದು ತಿಳಿಸಿದ್ದಾರೆ.</p>.<p>‘ಪರಮೇಶ್ವರ ಅವರ ಬಗ್ಗೆ ಜೀರೊ ಟ್ರಾಫಿಕ್ ಮಂತ್ರಿ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿರುವುದು ಅಸ್ಪೃಶ್ಯ ಸಮಾಜಕ್ಕೆ ಮಾಡಿರುವ ಅಕ್ಷಮ್ಯವಾದ ಅವಮಾನ. ಇದನ್ನು ಸಮಾಜದ ಮುಖಂಡನಾಗಿ ನಾನು ಖಂಡಿಸುತ್ತೇನೆ’ ಎಂದಿದ್ದಾರೆ.</p>.<p>ರಾಜಕಾರಣದ 70 ವರ್ಷದಲ್ಲಿಯೇ ಜಿಲ್ಲೆಯ ದಲಿತ ಸಮಾಜಕ್ಕೆ ಉನ್ನತ ಹುದ್ದೆ ದೊರೆತಿದೆ. ಈ ಹಿಂದಿನ ಹಲವು ಉಪಮುಖ್ಯಮಂತ್ರಿಗಳು ಶಿಷ್ಟಾಚಾರದ ಪ್ರಕಾರವಾಗಿಯೇ ನಡೆದುಕೊಂಡಿದ್ದಾರೆ. ಆದರೆ ಪರಮೇಶ್ವರ ಅವರನ್ನು ಮಾತ್ರ ಈ ವಿಚಾರದಲ್ಲಿ ಗುರಿ ಮಾಡಲಾಗಿದೆ. ಈ ಸಮಾಜಕ್ಕೆ ದೊರೆತಿರುವ ಉನ್ನತ ಹುದ್ದೆಯ ಬಗ್ಗೆ ಎಷ್ಟು ಅಸಹನೆ ಇದೆ ಎನ್ನುವುದನ್ನು ಇದು ಎತ್ತಿ ತೋರುತ್ತದೆ ಎಂದು ತೀಕ್ಷ್ಮವಾಗಿ ನುಡಿದಿದ್ದಾರೆ.</p>.<p>ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇ ಬಿಜೆಪಿ ಬೆಂಬಲಿಸಿದವರನ್ನು ಮತ್ತು ದೇವೇಗೌಡರ ಸ್ಪರ್ಧೆಯ ಆರಂಭದಲ್ಲಿಯೇ ವ್ಯಂಗ್ಯವಾಡಿದವರನ್ನು ಮೊದಲು ಪಕ್ಷದಿಂದ ಹೊರಹಾಕಬೇಕು. ಜಿಲ್ಲೆಯಲ್ಲಿ ಅಂತಹವರನ್ನು ಪಕ್ಷದಿಂದ ಹಠಾವೋ ಮಾಡಿದರೆ ಮಾತ್ರ ಕಾಂಗ್ರೆಸ್ ಬಚಾವ್ ಆಗಲಿದೆ ಎಂದು ಹೇಳಿದ್ದಾರೆ.</p>.<p><strong>ಇವನ್ನೂ ಓದಿ...</strong></p>.<p><strong>*<a href="https://www.prajavani.net/639722.html" target="_blank">ಸುಮಲತಾ ಕೆಆರ್ಎಸ್ ನೀರು ಬಿಡಿಸಿಕೊಡಲಿ: ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯ</a></strong></p>.<p><strong>*<a href="https://www.prajavani.net/stories/stateregional/congress-leaders-ramesh-639706.html" target="_blank">ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಲು ಅವಕಾಶವಿದೆ: ಸುಮಲತಾ</a></strong></p>.<p><strong>*<a href="https://www.prajavani.net/stories/stateregional/tumkur-lok-sabha-639720.html" target="_blank">ಮೈತ್ರಿ ಇಲ್ಲದಿದ್ದರೆ ದೇವೇಗೌಡರಿಗೆ 2 ಲಕ್ಷ ಮತಗಳಿಂದಗೆಲುವು: ಶಾಸಕ ಗೌರಿಶಂಕರ್</a></strong></p>.<p><strong>*</strong><a href="https://www.prajavani.net/stories/stateregional/congress-leaders-ramesh-639706.html" target="_blank"><strong>ಎಸ್. ಎಂ. ಕೃಷ್ಣ ನಿವಾಸದಲ್ಲಿ ಅಶೋಕ್, ಜಾರಕಿಹೊಳಿ, ಸುಧಾಕರ್ ಭೇಟಿ: ಸಮಾಲೋಚನೆ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರ ರಾಜಕೀಯ ಜೀವನ ಆರಂಭವಾಗಿದ್ದೇ ಕಾಂಗ್ರೆಸ್ ಪಕ್ಷದಿಂದ. ಅವರು ನಿಷ್ಠಾವಂತ ಕಾಂಗ್ರೆಸ್ಸಿಗರು ಎಂದು ಜಿಲ್ಲಾ ಪಂಚಾಯಿತಿ ಹಾಗೂ ಕೆಪಿಸಿಸಿ ಸದಸ್ಯ ಕೆಂಚಮಾರಯ್ಯ ನುಡಿದಿದ್ದಾರೆ.</p>.<p>ಪರಮೇಶ್ವರ ಅವರ ತೇಜೋವಧೆ ಮಾಡುವ ಉದ್ದೇಶದಿಂದ ಕೆಲವರು ನಗರದ ವಿವಿಧ ಕಡೆಗಳಲ್ಲಿ ಪರಮೇಶ್ವರ ಹಠಾವೋ ಕಾಂಗ್ರೆಸ್ ಬಚಾವೋ ಎಂದು ಬಿತ್ತಿಪತ್ರಗಳನ್ನು ಅಂಟಿಸಿದ್ದಾರೆ ಎಂದು ತಿಳಿಸಿದ್ದಾರೆ.</p>.<p>‘ಪರಮೇಶ್ವರ ಅವರ ಬಗ್ಗೆ ಜೀರೊ ಟ್ರಾಫಿಕ್ ಮಂತ್ರಿ ಎಂದು ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿರುವುದು ಅಸ್ಪೃಶ್ಯ ಸಮಾಜಕ್ಕೆ ಮಾಡಿರುವ ಅಕ್ಷಮ್ಯವಾದ ಅವಮಾನ. ಇದನ್ನು ಸಮಾಜದ ಮುಖಂಡನಾಗಿ ನಾನು ಖಂಡಿಸುತ್ತೇನೆ’ ಎಂದಿದ್ದಾರೆ.</p>.<p>ರಾಜಕಾರಣದ 70 ವರ್ಷದಲ್ಲಿಯೇ ಜಿಲ್ಲೆಯ ದಲಿತ ಸಮಾಜಕ್ಕೆ ಉನ್ನತ ಹುದ್ದೆ ದೊರೆತಿದೆ. ಈ ಹಿಂದಿನ ಹಲವು ಉಪಮುಖ್ಯಮಂತ್ರಿಗಳು ಶಿಷ್ಟಾಚಾರದ ಪ್ರಕಾರವಾಗಿಯೇ ನಡೆದುಕೊಂಡಿದ್ದಾರೆ. ಆದರೆ ಪರಮೇಶ್ವರ ಅವರನ್ನು ಮಾತ್ರ ಈ ವಿಚಾರದಲ್ಲಿ ಗುರಿ ಮಾಡಲಾಗಿದೆ. ಈ ಸಮಾಜಕ್ಕೆ ದೊರೆತಿರುವ ಉನ್ನತ ಹುದ್ದೆಯ ಬಗ್ಗೆ ಎಷ್ಟು ಅಸಹನೆ ಇದೆ ಎನ್ನುವುದನ್ನು ಇದು ಎತ್ತಿ ತೋರುತ್ತದೆ ಎಂದು ತೀಕ್ಷ್ಮವಾಗಿ ನುಡಿದಿದ್ದಾರೆ.</p>.<p>ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಇದ್ದೇ ಬಿಜೆಪಿ ಬೆಂಬಲಿಸಿದವರನ್ನು ಮತ್ತು ದೇವೇಗೌಡರ ಸ್ಪರ್ಧೆಯ ಆರಂಭದಲ್ಲಿಯೇ ವ್ಯಂಗ್ಯವಾಡಿದವರನ್ನು ಮೊದಲು ಪಕ್ಷದಿಂದ ಹೊರಹಾಕಬೇಕು. ಜಿಲ್ಲೆಯಲ್ಲಿ ಅಂತಹವರನ್ನು ಪಕ್ಷದಿಂದ ಹಠಾವೋ ಮಾಡಿದರೆ ಮಾತ್ರ ಕಾಂಗ್ರೆಸ್ ಬಚಾವ್ ಆಗಲಿದೆ ಎಂದು ಹೇಳಿದ್ದಾರೆ.</p>.<p><strong>ಇವನ್ನೂ ಓದಿ...</strong></p>.<p><strong>*<a href="https://www.prajavani.net/639722.html" target="_blank">ಸುಮಲತಾ ಕೆಆರ್ಎಸ್ ನೀರು ಬಿಡಿಸಿಕೊಡಲಿ: ರವೀಂದ್ರ ಶ್ರೀಕಂಠಯ್ಯ ವ್ಯಂಗ್ಯ</a></strong></p>.<p><strong>*<a href="https://www.prajavani.net/stories/stateregional/congress-leaders-ramesh-639706.html" target="_blank">ಬಿಜೆಪಿಗೆ ವಿಷಯಾಧಾರಿತ ಬೆಂಬಲ ನೀಡಲು ಅವಕಾಶವಿದೆ: ಸುಮಲತಾ</a></strong></p>.<p><strong>*<a href="https://www.prajavani.net/stories/stateregional/tumkur-lok-sabha-639720.html" target="_blank">ಮೈತ್ರಿ ಇಲ್ಲದಿದ್ದರೆ ದೇವೇಗೌಡರಿಗೆ 2 ಲಕ್ಷ ಮತಗಳಿಂದಗೆಲುವು: ಶಾಸಕ ಗೌರಿಶಂಕರ್</a></strong></p>.<p><strong>*</strong><a href="https://www.prajavani.net/stories/stateregional/congress-leaders-ramesh-639706.html" target="_blank"><strong>ಎಸ್. ಎಂ. ಕೃಷ್ಣ ನಿವಾಸದಲ್ಲಿ ಅಶೋಕ್, ಜಾರಕಿಹೊಳಿ, ಸುಧಾಕರ್ ಭೇಟಿ: ಸಮಾಲೋಚನೆ</strong></a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>