<p><strong>ತುಮಕೂರು</strong>: ಈ ವಾರವೂ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯನ್ನು ಮುಂದುವರಿಸಿದ್ದು, ಕೆ.ಜಿ.ಗೆ₹10ರ ವರೆಗೂ ಹೆಚ್ಚಳವಾಗಿದೆ. ಕೆಲವಾರಗಳಿಂದ ಬೆಲೆ ದುಬಾರಿಯಾಗಿದ್ದು, ಮತ್ತೆ ಏರಿಕೆಯತ್ತಲೇ ಸಾಗಿದೆ.</p>.<p>ಸಂಕ್ರಾಂತಿ, ಇತರ ಹಬ್ಬಗಳು ಬರುತ್ತಿದ್ದು, ಕಡಲೆ ಬೀಜದ ಧಾರಣೆ ಹೆಚ್ಚಳವಾಗಿದ್ದು, ಕೆ.ಜಿ.ಗೆ ₹10ರಿಂದ ₹15ದುಬಾರಿಯಾಗಿದೆ. ಆದರೆ ಬೇಳೆಗಳ ಬೆಲೆ ಕೊಂಚ ಕಡಿಮೆಯಾಗಿದೆ. ಧನುರ್ಮಾಸ ಕಳೆದು ಶುಭ ಕಾರ್ಯಗಳುಆರಂಭವಾದರೆ ಬೆಲೆ ಏರಿಕೆಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.</p>.<p>ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ಕ್ಯಾರೆಟ್ ಬೆಲೆ ಇಳಿದಿದ್ದು, ಪ್ರಸ್ತುತ ಕೆ.ಜಿ ₹15–20ಕ್ಕೆ ಮಾರಾಟವಾಗುತ್ತಿದೆ. ಬೀನ್ಸ್ ಬೆಲೆ ಕೆ.ಜಿ.ಗೆ ₹30–35 ಇದೆ. ಈರುಳ್ಳಿ ಬೆಲೆ ಇಳಿಕೆಯತ್ತ ಸಾಗಿದೆ. ಉಳಿದ ತರಕಾರಿಗಳ ಬೆಲೆ ಕೆ.ಜಿ.ಗೆ ₹10ರಿಂದ 15ರ ನಡುವೆ ಇದೆ. ಒಟ್ಟಾರೆ ತರಕಾರಿಗಳ ಧಾರಣೆ ಬಹುತೇಕ ಸ್ಥಿರವಾಗಿದೆ.</p>.<p class="Subhead"><strong>ಹಣ್ಣಿನ ಬೆಲೆ:</strong> ಹಣ್ಣುಗಳ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಕಲ್ಲಂಗಡಿ, ಏಲಕ್ಕಿ ಬಾಳೆ ಹಣ್ಣಿನ ಬೆಲೆ ತುಸು ತಗ್ಗಿದೆ. ಉಳಿದಂತೆ ಯಥಾಸ್ಥಿತಿ ಮುಂದುವರಿದಿದೆ.</p>.<p>ಕೋಳಿ ಬೆಲೆಯೂ ಬಹುತೇಕ ಸ್ಥಿರವಾಗಿದೆ. ಬ್ರಾಯ್ಲರ್ ಕೆ.ಜಿ ₹130, ರೆಡಿ ಚಿಕನ್ ₹200, ಮೊಟ್ಟೆಕೋಳಿ ಕೆ.ಜಿ ₹120ಕ್ಕೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.</p>.<p class="Subhead"><strong>ಮೀನು ದುಬಾರಿ: </strong>ಮೀನಿನ ಬೆಲೆ ಕಡಿಮೆಯಾಗುತ್ತಿಲ್ಲ. ಕಳೆದ ಮೂರು ವಾರಗಳಿಂದ ಏರಿಕೆಯತ್ತಲೇ ಮುಖ ಮಾಡಿದ್ದು, ಬೂತಾಯಿ, ಬೊಳಿಂಜಿರ್ ತಳಿ ಮೀನು ಬರುತ್ತಿಲ್ಲ. ಬಂಗುಡೆ ಕೆ.ಜಿ ₹230, ಅಂಜಲ್ ಕೆ.ಜಿ ₹700,ಬಿಳಿ ಮಾಂಜಿ ₹790, ಕಪ್ಪುಮಾಂಜಿ ₹550, ಸೀಗಡಿ ₹450ಕ್ಕೆ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು</strong>: ಈ ವಾರವೂ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆಯನ್ನು ಮುಂದುವರಿಸಿದ್ದು, ಕೆ.ಜಿ.ಗೆ₹10ರ ವರೆಗೂ ಹೆಚ್ಚಳವಾಗಿದೆ. ಕೆಲವಾರಗಳಿಂದ ಬೆಲೆ ದುಬಾರಿಯಾಗಿದ್ದು, ಮತ್ತೆ ಏರಿಕೆಯತ್ತಲೇ ಸಾಗಿದೆ.</p>.<p>ಸಂಕ್ರಾಂತಿ, ಇತರ ಹಬ್ಬಗಳು ಬರುತ್ತಿದ್ದು, ಕಡಲೆ ಬೀಜದ ಧಾರಣೆ ಹೆಚ್ಚಳವಾಗಿದ್ದು, ಕೆ.ಜಿ.ಗೆ ₹10ರಿಂದ ₹15ದುಬಾರಿಯಾಗಿದೆ. ಆದರೆ ಬೇಳೆಗಳ ಬೆಲೆ ಕೊಂಚ ಕಡಿಮೆಯಾಗಿದೆ. ಧನುರ್ಮಾಸ ಕಳೆದು ಶುಭ ಕಾರ್ಯಗಳುಆರಂಭವಾದರೆ ಬೆಲೆ ಏರಿಕೆಯಾಗಬಹುದು ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.</p>.<p>ತರಕಾರಿ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗದಿದ್ದರೂ ಕ್ಯಾರೆಟ್ ಬೆಲೆ ಇಳಿದಿದ್ದು, ಪ್ರಸ್ತುತ ಕೆ.ಜಿ ₹15–20ಕ್ಕೆ ಮಾರಾಟವಾಗುತ್ತಿದೆ. ಬೀನ್ಸ್ ಬೆಲೆ ಕೆ.ಜಿ.ಗೆ ₹30–35 ಇದೆ. ಈರುಳ್ಳಿ ಬೆಲೆ ಇಳಿಕೆಯತ್ತ ಸಾಗಿದೆ. ಉಳಿದ ತರಕಾರಿಗಳ ಬೆಲೆ ಕೆ.ಜಿ.ಗೆ ₹10ರಿಂದ 15ರ ನಡುವೆ ಇದೆ. ಒಟ್ಟಾರೆ ತರಕಾರಿಗಳ ಧಾರಣೆ ಬಹುತೇಕ ಸ್ಥಿರವಾಗಿದೆ.</p>.<p class="Subhead"><strong>ಹಣ್ಣಿನ ಬೆಲೆ:</strong> ಹಣ್ಣುಗಳ ಧಾರಣೆಯಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬಂದಿಲ್ಲ. ಕಲ್ಲಂಗಡಿ, ಏಲಕ್ಕಿ ಬಾಳೆ ಹಣ್ಣಿನ ಬೆಲೆ ತುಸು ತಗ್ಗಿದೆ. ಉಳಿದಂತೆ ಯಥಾಸ್ಥಿತಿ ಮುಂದುವರಿದಿದೆ.</p>.<p>ಕೋಳಿ ಬೆಲೆಯೂ ಬಹುತೇಕ ಸ್ಥಿರವಾಗಿದೆ. ಬ್ರಾಯ್ಲರ್ ಕೆ.ಜಿ ₹130, ರೆಡಿ ಚಿಕನ್ ₹200, ಮೊಟ್ಟೆಕೋಳಿ ಕೆ.ಜಿ ₹120ಕ್ಕೆ ಅಂಗಡಿಗಳಲ್ಲಿ ಮಾರಾಟವಾಗುತ್ತಿದೆ.</p>.<p class="Subhead"><strong>ಮೀನು ದುಬಾರಿ: </strong>ಮೀನಿನ ಬೆಲೆ ಕಡಿಮೆಯಾಗುತ್ತಿಲ್ಲ. ಕಳೆದ ಮೂರು ವಾರಗಳಿಂದ ಏರಿಕೆಯತ್ತಲೇ ಮುಖ ಮಾಡಿದ್ದು, ಬೂತಾಯಿ, ಬೊಳಿಂಜಿರ್ ತಳಿ ಮೀನು ಬರುತ್ತಿಲ್ಲ. ಬಂಗುಡೆ ಕೆ.ಜಿ ₹230, ಅಂಜಲ್ ಕೆ.ಜಿ ₹700,ಬಿಳಿ ಮಾಂಜಿ ₹790, ಕಪ್ಪುಮಾಂಜಿ ₹550, ಸೀಗಡಿ ₹450ಕ್ಕೆ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>