ಕೊಡಿಗೇನಹಳ್ಳಿ ( ಮಧುಗಿರಿ ತಾ):ಬುಧವಾರ ಸಂಜೆ ಬೀಸಿದ ಬಾರಿ ಗಾಳಿಗೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಮೈದನಹೊಸಹಳ್ಳಿ ಗ್ರಾಮದ ಎಂ. ವಿಶ್ವನಾಥರೆಡ್ಡಿ ಅವರು 6 ಎಕರೆಯಲ್ಲಿ ಬೆಳೆದಿದ್ದ ಬಾಳೆ ತೋಟ ನಾಶವಾಗಿದೆ.
ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದರು. 15 ರಿಂದ 18 ಕೆಜಿ ತೂಗುವ ಗೊನೆಗಳು ಬಿಟ್ಟಿದ್ದವು. ಸುಮಾರು 15 ರಿಂದ 16 ಲಕ್ಷದ ಲಾಭದ ನಿರೀಕ್ಷೆಯಲ್ಲಿದ್ದರು.ಇನ್ನೇನು ತಿಂಗಳಲ್ಲಿ ಕಟಾವು ಮಾಡಬೇಕಿತ್ತು.
ನಮಗೆ ದಿಕ್ಕು ಕಾಣದಾಗಿದೆ. ಈ ಸಂದರ್ಭದಲ್ಲಿ ಸರ್ಕಾರ ನಮ್ಮ ಕಷ್ಟಕ್ಕೆ ಕೈಹಿಡಿಯದಿದ್ದರೆ ಬದುಕು ಬೀದಿಪಾಲಾಗಲಿದೆ ಎಂದು ರೈತ ಎಂ. ವಿಶ್ವನಾಥರೆಡ್ಡಿ ‘ಪ್ರಜಾವಾಣಿ’ಯೊಂದಿಗೆ ಅಳಲು ತೋಡಿಕೊಂಡರು.