<p><strong>ತುಮಕೂರು: </strong>‘ಅಯೋಧ್ಯೆಯ ರಾಮಮಂದಿರ ಭಾವೈಕ್ಯದ ಮಂದಿರವಾಗಿ ಬೆಳಗಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.</p>.<p>ನಗರದ ಎನ್.ಆರ್.ಕಾಲೊನಿಯ ಪರಿಶಿಷ್ಟ ಸಮುದಾಯದ ಮನೆಗಳಲ್ಲಿ ಭಾನುವಾರ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಿದರು. ನಂತರ ಅಂಬೇಡ್ಕರ್ ನಗರದ<br />ಎಲ್ಲಮ್ಮ ದೇವಸ್ಥಾನದಲ್ಲಿ ಮಾತನಾಡಿದರು.</p>.<p>ರಾಮಮಂದಿರ ನಿರ್ಮಿಸಲು ಅನೇಕರು ಮುಂದೆ ಬಂದರು. ಆದರೆ ಒಬ್ಬರಿಂದ ನಿರ್ಮಾಣವಾದರೆ ಅದರಿಂದ ಅವರಿಗೆ ಮಾತ್ರ ಹೆಸರು ಬರುತ್ತದೆ. ಹೀಗಾಗಿ ದೇಶದ ಎಲ್ಲರ ಪಾಲು ಇರಬೇಕು ಎಂಬ ಉದ್ದೇಶದಿಂದ ನಿಧಿ ಸಮರ್ಪಣಾ ಅಭಿಯಾನ ಕೈಗೊಂಡಿದ್ದೇವೆ ಎಂದರು.</p>.<p>‘₹ 10 ಕೋಟಿ ನೀಡಿದರೆ ಎಷ್ಟು ಸಂತೋಷದಿಂದ ಸ್ವೀಕರಿಸುತ್ತೇವೆಯೋ ₹10 ಕೊಟ್ಟರೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತೇವೆ. ಎಷ್ಟು ನೀಡುತ್ತೀರಿ ಎಂಬುದು ಮುಖ್ಯವಲ್ಲ’ ಎಂದು ಹೇಳಿದರು.</p>.<p>ಸ್ವಾಮೀಜಿಯನ್ನು ಕಾಲೊನಿ ಜನರು ಪುಷ್ಪವೃಷ್ಟಿಗರೆದು ಸ್ವಾಗತಿಸಿದರು. ಮನೆಗಳ ಎದುರು ರಂಗೋಲಿ ಹಾಕಿದ್ದರು. ಇಡೀ ಕಾಲೊನಿಯಲ್ಲಿ ಸಡಗರ ಮನೆ ಮಾಡಿತ್ತು. ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ದೇಣಿಗೆ ನೀಡಿದ ಜನರು, ಸ್ವಾಮೀಜಿ ಅವರ ಪಾದಪೂಜೆ ಮಾಡಿದರು.</p>.<p>ಮೊದಲಿಗೆ ಸರಸ್ವತಿ ಗೋವಿಂದರಾಜು ಅವರ ಮನೆಗೆ ಸ್ವಾಮೀಜಿ ಭೇಟಿ ನೀಡಿದರು. ನಂತರ ಹನುಮ, ನರಸಿಂಹ, ಉಮಾದೇವಿ, ಶರಾವತಿ, ಮಂಜುನಾಥ್, ದಯಾನಂದ್, ಕಿರಣ್ ಕುಮಾರ್, ದೇವರಾಜು ಮನೆಗಳಿಗೆ ಹೋಗಿ ರಾಮಮಂದಿರಕ್ಕೆ ಕಾಣಿಕೆ ಪಡೆದರು.</p>.<p>ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ, ಗಂಗಹನುಮಯ್ಯ, ಡಾ.ಎಂ.ಆರ್.ಹುಲಿನಾಯ್ಕರ್, ಹಿಂದೂ ಜಾಗರಣ ವೇದಿಕೆ ಮುಖಂಡ ಜಿ.ಎಸ್.ಬಸವರಾಜ್, ಆರ್ಎಸ್ಎಸ್ ಮುಖಂಡ ನಾಗೇಂದ್ರ ಪ್ರಸಾದ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್.ಆರ್. ನಾಗರಾಜ್ರಾವ್, ವಿಶ್ವಹಿಂದೂ ಪರಿಷತ್ ಸಂಚಾಲಕ ಜಿ.ಕೆ.ಶ್ರೀನಿವಾಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>‘ಅಯೋಧ್ಯೆಯ ರಾಮಮಂದಿರ ಭಾವೈಕ್ಯದ ಮಂದಿರವಾಗಿ ಬೆಳಗಬೇಕು’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.</p>.<p>ನಗರದ ಎನ್.ಆರ್.ಕಾಲೊನಿಯ ಪರಿಶಿಷ್ಟ ಸಮುದಾಯದ ಮನೆಗಳಲ್ಲಿ ಭಾನುವಾರ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ಸಂಗ್ರಹಿಸಿದರು. ನಂತರ ಅಂಬೇಡ್ಕರ್ ನಗರದ<br />ಎಲ್ಲಮ್ಮ ದೇವಸ್ಥಾನದಲ್ಲಿ ಮಾತನಾಡಿದರು.</p>.<p>ರಾಮಮಂದಿರ ನಿರ್ಮಿಸಲು ಅನೇಕರು ಮುಂದೆ ಬಂದರು. ಆದರೆ ಒಬ್ಬರಿಂದ ನಿರ್ಮಾಣವಾದರೆ ಅದರಿಂದ ಅವರಿಗೆ ಮಾತ್ರ ಹೆಸರು ಬರುತ್ತದೆ. ಹೀಗಾಗಿ ದೇಶದ ಎಲ್ಲರ ಪಾಲು ಇರಬೇಕು ಎಂಬ ಉದ್ದೇಶದಿಂದ ನಿಧಿ ಸಮರ್ಪಣಾ ಅಭಿಯಾನ ಕೈಗೊಂಡಿದ್ದೇವೆ ಎಂದರು.</p>.<p>‘₹ 10 ಕೋಟಿ ನೀಡಿದರೆ ಎಷ್ಟು ಸಂತೋಷದಿಂದ ಸ್ವೀಕರಿಸುತ್ತೇವೆಯೋ ₹10 ಕೊಟ್ಟರೂ ಅಷ್ಟೇ ಪ್ರೀತಿಯಿಂದ ಸ್ವೀಕರಿಸುತ್ತೇವೆ. ಎಷ್ಟು ನೀಡುತ್ತೀರಿ ಎಂಬುದು ಮುಖ್ಯವಲ್ಲ’ ಎಂದು ಹೇಳಿದರು.</p>.<p>ಸ್ವಾಮೀಜಿಯನ್ನು ಕಾಲೊನಿ ಜನರು ಪುಷ್ಪವೃಷ್ಟಿಗರೆದು ಸ್ವಾಗತಿಸಿದರು. ಮನೆಗಳ ಎದುರು ರಂಗೋಲಿ ಹಾಕಿದ್ದರು. ಇಡೀ ಕಾಲೊನಿಯಲ್ಲಿ ಸಡಗರ ಮನೆ ಮಾಡಿತ್ತು. ಮನೆಗಳಿಗೆ ತೆರಳಿದ ಸಂದರ್ಭದಲ್ಲಿ ದೇಣಿಗೆ ನೀಡಿದ ಜನರು, ಸ್ವಾಮೀಜಿ ಅವರ ಪಾದಪೂಜೆ ಮಾಡಿದರು.</p>.<p>ಮೊದಲಿಗೆ ಸರಸ್ವತಿ ಗೋವಿಂದರಾಜು ಅವರ ಮನೆಗೆ ಸ್ವಾಮೀಜಿ ಭೇಟಿ ನೀಡಿದರು. ನಂತರ ಹನುಮ, ನರಸಿಂಹ, ಉಮಾದೇವಿ, ಶರಾವತಿ, ಮಂಜುನಾಥ್, ದಯಾನಂದ್, ಕಿರಣ್ ಕುಮಾರ್, ದೇವರಾಜು ಮನೆಗಳಿಗೆ ಹೋಗಿ ರಾಮಮಂದಿರಕ್ಕೆ ಕಾಣಿಕೆ ಪಡೆದರು.</p>.<p>ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಮುಖಂಡರಾದ ಸೊಗಡು ಶಿವಣ್ಣ, ಗಂಗಹನುಮಯ್ಯ, ಡಾ.ಎಂ.ಆರ್.ಹುಲಿನಾಯ್ಕರ್, ಹಿಂದೂ ಜಾಗರಣ ವೇದಿಕೆ ಮುಖಂಡ ಜಿ.ಎಸ್.ಬಸವರಾಜ್, ಆರ್ಎಸ್ಎಸ್ ಮುಖಂಡ ನಾಗೇಂದ್ರ ಪ್ರಸಾದ್, ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಎನ್.ಆರ್. ನಾಗರಾಜ್ರಾವ್, ವಿಶ್ವಹಿಂದೂ ಪರಿಷತ್ ಸಂಚಾಲಕ ಜಿ.ಕೆ.ಶ್ರೀನಿವಾಸ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>