ಕಟಾವು ಮಾಡುವ ಕೂಲಿ, ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಅನಂತಪುರ ಇತ್ಯಾದಿ ಪ್ರದೇಶಗಳ ಮಾರುಕಟ್ಟೆಗೆ ಸಾಗಿಸಲು ವಾಹನ ವೆಚ್ಚ ರೈತರಿಗೆ ಹೊರೆಯಾಗುತ್ತಿದೆ. ಈಗಾಗಲೇ ಲಕ್ಷಾಂತರ ರೂಪಾಯಿ ಖರ್ಚುಮಾಡಿ ಸಾಕಾಗಿದೆ. ಮತ್ತೆ ಕೈ ಸುಟ್ಟುಕೊಳ್ಳಲು ಶಕ್ತಿಯಿಲ್ಲ ಹೀಗಾಗಿ ಟೊಮೊಟೊ ಬೆಳೆಯನ್ನು ಕಟಾವು ಮಾಡದೆ ಹೊಲದಲ್ಲಿ ಬಿಡಲಾಗಿದೆ ಎಂದು ರೈತ ವೆಂಕಟೇಶ್ ಸಮಸ್ಯೆ ಹೇಳಿಕೊಂಡರು.