ತುಮಕೂರು:ಸ್ಮಾರ್ಟ್ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿವೆ ಎಂದು ಆರೋಪಿಸಿ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಸೊಗಡು ಶಿವಣ್ಣ ಶನಿವಾರ ಗುತ್ತಿಗೆದಾರರೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ.
ನಗರದಲ್ಲಿ ಸ್ವಾತಂತ್ರ್ಯಚೌಕ ಹಾಗೂ ಮಂಡಿಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಅಧ್ವಾನದಿಂದ ಕೂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸ್ವಾತಂತ್ರ್ಯ ಚೌಕದಿಂದ ಮಂಡಿಪೇಟೆಗೆ ತೆರಳುವಾಗ ರಸ್ತೆ ಅಧ್ವಾನವಾಗಿದೆ. ಸ್ಮಾರ್ಟ್ಸಿಟಿ ಯೋಜನೆಯ ಗುತ್ತಿಗೆಯನ್ನು ಆಂಧ್ರದವರಿಗೆ ನೀಡಿದ್ದಾರಂತೆ. ಅಧ್ವಾನದ ಬಗ್ಗೆ ಅಲ್ಲಿದ್ದ ಗುತ್ತಿಗೆದಾರನನ್ನು ಪ್ರಶ್ನಿಸಿದಾಗ ಅಸಂಬದ್ಧವಾಗಿ ಉತ್ತರಿಸಿದ. ಆಗ ಸಿಟ್ಟಿನಿಂದ ಏಟು ಕೊಟ್ಟೆ’ ಎಂದು ಸೊಗಡು ಶಿವಣ್ಣ ಸ್ಪಷ್ಟಪಡಿಸಿದ್ದಾರೆ.