<p><strong>ಚಿಕ್ಕನಾಯಕನಹಳ್ಳಿ</strong>: ತಾಲ್ಲೂಕಿನಲ್ಲಿ ಗ್ರೇಡ್ -2 ತಹಶೀಲ್ದಾರ್ ಸಹಿ ನಕಲು ಮಾಡಿ ನಕಲಿ ಮರಣ ಪ್ರಮಾಣ ಪತ್ರ ನೀಡಿದ ಆರೋಪದಲ್ಲಿ ‘ಡಿ’ ದರ್ಜೆ ನೌಕರ ಶಿವಕುಮಾರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಆದೇಶಿಸಿದ್ದಾರೆ.</p>.<p>ಲಂಚಮುಕ್ತ ವೇದಿಕೆಯ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ನೀಡಿರುವ ಪ್ರಮಾಣ ಪತ್ರ ನಕಲು ಎಂದು ಆರೋಪ ಮಾಡಿತ್ತು. ಈ ಸಂಬಂಧ ಏಪ್ರಿಲ್ 22ರಂದು ತಹಶೀಲ್ದಾರ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.</p>.<p>ಹುಳಿಯಾರು ಹೋಬಳಿ ತಮ್ಮಡಿಹಳ್ಳಿ ಮತ್ತು ಗೊಲ್ಲರಟ್ಟಿ ಗ್ರಾಮಗಳಿಂದ ಮರಣ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದ ರಾಜಯ್ಯ ಹಾಗೂ ಬಸವರಾಜು ಅವರನ್ನು ಕಚೇರಿಗೆ ಕರೆಯಿಸಿ ಗ್ರೇಡ್ 1 ತಹಶೀಲ್ದಾರ್, ಗ್ರೇಡ್– 2 ಹಾಗೂ ಶಿರಸ್ತೇದಾರ ಅವರ ಸಮ್ಮುಖದಲ್ಲಿ ವಿಡಿಯೊ ಸಹಿತ ಹೇಳಿಕೆ ಪಡೆದುಕೊಳ್ಳಲಾಯಿತು.</p>.<p>ತಾಲ್ಲೂಕು ಡಿ.ದರ್ಜೆ ನೌಕರ ಶಿವಕುಮಾರ್ ನಕಲಿ ಮರಣ ದೃಢೀಕರಣ ಪತ್ರಕ್ಕೆ ₹2,000 ಲಂಚ ಪಡೆದಿದ್ದಲ್ಲದೆ, ಗ್ರೇಡ್–2 ತಹಶೀಲ್ದಾರ್ ಸಹಿ ನಕಲು ಮಾಡಿರುವುದು ಸಾಬೀತಾಗಿದೆ. ಈ ಸಂಬಂಧ ನೌಕರನ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕನಾಯಕನಹಳ್ಳಿ</strong>: ತಾಲ್ಲೂಕಿನಲ್ಲಿ ಗ್ರೇಡ್ -2 ತಹಶೀಲ್ದಾರ್ ಸಹಿ ನಕಲು ಮಾಡಿ ನಕಲಿ ಮರಣ ಪ್ರಮಾಣ ಪತ್ರ ನೀಡಿದ ಆರೋಪದಲ್ಲಿ ‘ಡಿ’ ದರ್ಜೆ ನೌಕರ ಶಿವಕುಮಾರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಆದೇಶಿಸಿದ್ದಾರೆ.</p>.<p>ಲಂಚಮುಕ್ತ ವೇದಿಕೆಯ ವಾಟ್ಸ್ಆ್ಯಪ್ ಗ್ರೂಪಿನಲ್ಲಿ ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಚೇರಿಯಲ್ಲಿ ನೀಡಿರುವ ಪ್ರಮಾಣ ಪತ್ರ ನಕಲು ಎಂದು ಆರೋಪ ಮಾಡಿತ್ತು. ಈ ಸಂಬಂಧ ಏಪ್ರಿಲ್ 22ರಂದು ತಹಶೀಲ್ದಾರ್ಗೆ ಪರಿಶೀಲನೆ ನಡೆಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದರು.</p>.<p>ಹುಳಿಯಾರು ಹೋಬಳಿ ತಮ್ಮಡಿಹಳ್ಳಿ ಮತ್ತು ಗೊಲ್ಲರಟ್ಟಿ ಗ್ರಾಮಗಳಿಂದ ಮರಣ ಪ್ರಮಾಣ ಪತ್ರಗಳನ್ನು ಪಡೆದುಕೊಂಡಿದ್ದ ರಾಜಯ್ಯ ಹಾಗೂ ಬಸವರಾಜು ಅವರನ್ನು ಕಚೇರಿಗೆ ಕರೆಯಿಸಿ ಗ್ರೇಡ್ 1 ತಹಶೀಲ್ದಾರ್, ಗ್ರೇಡ್– 2 ಹಾಗೂ ಶಿರಸ್ತೇದಾರ ಅವರ ಸಮ್ಮುಖದಲ್ಲಿ ವಿಡಿಯೊ ಸಹಿತ ಹೇಳಿಕೆ ಪಡೆದುಕೊಳ್ಳಲಾಯಿತು.</p>.<p>ತಾಲ್ಲೂಕು ಡಿ.ದರ್ಜೆ ನೌಕರ ಶಿವಕುಮಾರ್ ನಕಲಿ ಮರಣ ದೃಢೀಕರಣ ಪತ್ರಕ್ಕೆ ₹2,000 ಲಂಚ ಪಡೆದಿದ್ದಲ್ಲದೆ, ಗ್ರೇಡ್–2 ತಹಶೀಲ್ದಾರ್ ಸಹಿ ನಕಲು ಮಾಡಿರುವುದು ಸಾಬೀತಾಗಿದೆ. ಈ ಸಂಬಂಧ ನೌಕರನ ವಿರುದ್ಧ ಶಿಸ್ತು ಕ್ರಮ ಕೈಗೊಂಡು ಇಲಾಖಾ ವಿಚಾರಣೆ ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>