<p><strong>ತುರುವೇಕೆರೆ: </strong>ತಾಲ್ಲೂಕಿನಾದ್ಯಂತ ಮಳೆ ಕೊರತೆಯ ನಡುವೆಯೂ ಶೇ 54ರಷ್ಟು ಬಿತ್ತನೆಯಾಗಿದೆ.</p>.<p>ರಾಗಿ ಮತ್ತು ತೆಂಗು ತಾಲ್ಲೂಕಿನ ಪ್ರಮುಖ ಬೆಳೆಗಳು. ಅದರಲ್ಲೂ ರಾಗಿ ಈ ಭಾಗದ ಜನರ ಆಹಾರ ಬೆಳೆ. ಜೊತೆಗೆ ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿಸುತ್ತಿರುವುದರಿಂದ ರೈತರು ರಾಗಿ ಬೆಳೆ ಬೆಳೆಯಲು ಒಲವು ತೋರುತ್ತಿದ್ದಾರೆ.</p>.<p>ಆಗಸ್ಟ್ ಮೊದಲ ವಾರದಲ್ಲಿ ಮುಂಗಾರು ಬಿತ್ತನೆ ವೇಳೆಗೆ ಸಮರ್ಪಕ ಮಳೆಯಿಲ್ಲದೆ ರಾಗಿ ಬಿತ್ತನೆ ಅವಧಿ ಮುಗಿದು ಬಿಡುತ್ತದೆ ಎಂಬ ಆತಂಕ ತಾಲ್ಲೂಕಿನ ರೈತರಲ್ಲಿ ಮನೆ ಮಾಡಿತ್ತು. ಜುಲೈ ತಿಂಗಳಲ್ಲಿ ತಾಲ್ಲೂಕಿನ ಕೆಲವೆಡೆ ಸೋನೆ ಮಳೆಯಾಗಿದ್ದು, ಬಿಟ್ಟರೆ<br />ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಹಾಗಾಗಿ ರೈತರು ಕಡಿಮೆ ಅವಧಿಗೆ ಕಟಾವಿಗೆ ಬರುವ ಎಂ.ಎಲ್ 356 ರಾಗಿ ಬಿತ್ತನೆಗೆ ಮುಂದಾಗಿದ್ದಾರೆ.</p>.<p>ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದ್ದು, ಅಲ್ಲಿ ಮುಂಗಾರು ಬೆಳೆಗಳಾದ ರಾಗಿ, ಜೋಳ, ಸಾಸಿವೆ, ಅವರೆ, ಹರಳು, ತೊಗರಿ, ಹುಚ್ಚೆಳ್ಳು, ಸಜ್ಜೆ ಬಿತ್ತನೆ ಮಾಡಿದ್ದಾರೆ. ರಾಗಿ ಪೈರು ಚೆನ್ನಾಗಿ ಮೊಳಕೆಯೊಡೆದಿದೆ. ಈ ವೇಳೆ ಮಳೆ ಕೈಕೊಟ್ಟಿದ್ದಕ್ಕೆ ರೈತರು ಕುಂಟೆ ಒಡೆಯುವ ಮೂಲಕ ರಾಗಿ ಪೈರು ಒಣಗದಂತೆ ನೋಡಿಕೊಂಡಿದ್ದಾರೆ.</p>.<p>ತಾಲ್ಲೂಕಿನ ಹಲವು ಭಾಗದಲ್ಲಿ ಸೋಮವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಹದ ಮಾಡಿಕೊಂಡಿರುವ ಭೂಮಿ ತೇವಾಂಶದಿಂದ ಕೂಡಿದ್ದು, ಬಿತ್ತನೆಗೆ ಹಿನ್ನಡೆಯಾಗಿದೆ.</p>.<p>ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ರಾಗಿ ಬಿತ್ತನೆ ಗುರಿ 5,960 ಹೆಕ್ಟೇರ್. ಸದ್ಯಕ್ಕೆ 395 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ದಂಡಿನಶಿವರ ಹೋಬಳಿಯಲ್ಲಿ 950 ಹೆಕ್ಟೇರ್, ಮಾಯಸಂದ್ರ ಹೋಬಳಿಯಲ್ಲಿ 3,289, ದಬ್ಬೇಘಟ್ಟ ಹೋಬಳಿಯಲ್ಲಿ 2,950 ಹೆಕ್ಟೇರ್ನಲ್ಲಿ ರಾಗಿ ಬಿತ್ತನೆಯಾಗಿದೆ.</p>.<p>ಜುಲೈನಿಂದ ಆಗಸ್ಟ್ 2ನೇ ವಾರದವರೆಗೆ ಕಸಬಾ ಹೋಬಳಿ 371 ಮಿ.ಮೀ, ದಬ್ಬೇಘಟ್ಟ 323.6 ಮಿ.ಮೀ, ದಂಡಿನಶಿವರ 410 ಮಿ.ಮೀ, ಮಾಯಸಂದ್ರ ಹೋಬಳಿಯಲ್ಲಿ 429.3 ಮಿ.ಮೀ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವೇಕೆರೆ: </strong>ತಾಲ್ಲೂಕಿನಾದ್ಯಂತ ಮಳೆ ಕೊರತೆಯ ನಡುವೆಯೂ ಶೇ 54ರಷ್ಟು ಬಿತ್ತನೆಯಾಗಿದೆ.</p>.<p>ರಾಗಿ ಮತ್ತು ತೆಂಗು ತಾಲ್ಲೂಕಿನ ಪ್ರಮುಖ ಬೆಳೆಗಳು. ಅದರಲ್ಲೂ ರಾಗಿ ಈ ಭಾಗದ ಜನರ ಆಹಾರ ಬೆಳೆ. ಜೊತೆಗೆ ರಾಗಿಯನ್ನು ಬೆಂಬಲ ಬೆಲೆಯಡಿ ಖರೀದಿಸುತ್ತಿರುವುದರಿಂದ ರೈತರು ರಾಗಿ ಬೆಳೆ ಬೆಳೆಯಲು ಒಲವು ತೋರುತ್ತಿದ್ದಾರೆ.</p>.<p>ಆಗಸ್ಟ್ ಮೊದಲ ವಾರದಲ್ಲಿ ಮುಂಗಾರು ಬಿತ್ತನೆ ವೇಳೆಗೆ ಸಮರ್ಪಕ ಮಳೆಯಿಲ್ಲದೆ ರಾಗಿ ಬಿತ್ತನೆ ಅವಧಿ ಮುಗಿದು ಬಿಡುತ್ತದೆ ಎಂಬ ಆತಂಕ ತಾಲ್ಲೂಕಿನ ರೈತರಲ್ಲಿ ಮನೆ ಮಾಡಿತ್ತು. ಜುಲೈ ತಿಂಗಳಲ್ಲಿ ತಾಲ್ಲೂಕಿನ ಕೆಲವೆಡೆ ಸೋನೆ ಮಳೆಯಾಗಿದ್ದು, ಬಿಟ್ಟರೆ<br />ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಲಿಲ್ಲ. ಹಾಗಾಗಿ ರೈತರು ಕಡಿಮೆ ಅವಧಿಗೆ ಕಟಾವಿಗೆ ಬರುವ ಎಂ.ಎಲ್ 356 ರಾಗಿ ಬಿತ್ತನೆಗೆ ಮುಂದಾಗಿದ್ದಾರೆ.</p>.<p>ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದ್ದು, ಅಲ್ಲಿ ಮುಂಗಾರು ಬೆಳೆಗಳಾದ ರಾಗಿ, ಜೋಳ, ಸಾಸಿವೆ, ಅವರೆ, ಹರಳು, ತೊಗರಿ, ಹುಚ್ಚೆಳ್ಳು, ಸಜ್ಜೆ ಬಿತ್ತನೆ ಮಾಡಿದ್ದಾರೆ. ರಾಗಿ ಪೈರು ಚೆನ್ನಾಗಿ ಮೊಳಕೆಯೊಡೆದಿದೆ. ಈ ವೇಳೆ ಮಳೆ ಕೈಕೊಟ್ಟಿದ್ದಕ್ಕೆ ರೈತರು ಕುಂಟೆ ಒಡೆಯುವ ಮೂಲಕ ರಾಗಿ ಪೈರು ಒಣಗದಂತೆ ನೋಡಿಕೊಂಡಿದ್ದಾರೆ.</p>.<p>ತಾಲ್ಲೂಕಿನ ಹಲವು ಭಾಗದಲ್ಲಿ ಸೋಮವಾರದಿಂದ ಉತ್ತಮ ಮಳೆಯಾಗುತ್ತಿದ್ದು, ರೈತರು ಹದ ಮಾಡಿಕೊಂಡಿರುವ ಭೂಮಿ ತೇವಾಂಶದಿಂದ ಕೂಡಿದ್ದು, ಬಿತ್ತನೆಗೆ ಹಿನ್ನಡೆಯಾಗಿದೆ.</p>.<p>ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ರಾಗಿ ಬಿತ್ತನೆ ಗುರಿ 5,960 ಹೆಕ್ಟೇರ್. ಸದ್ಯಕ್ಕೆ 395 ಹೆಕ್ಟೇರ್ನಲ್ಲಿ ಬಿತ್ತನೆಯಾಗಿದೆ. ದಂಡಿನಶಿವರ ಹೋಬಳಿಯಲ್ಲಿ 950 ಹೆಕ್ಟೇರ್, ಮಾಯಸಂದ್ರ ಹೋಬಳಿಯಲ್ಲಿ 3,289, ದಬ್ಬೇಘಟ್ಟ ಹೋಬಳಿಯಲ್ಲಿ 2,950 ಹೆಕ್ಟೇರ್ನಲ್ಲಿ ರಾಗಿ ಬಿತ್ತನೆಯಾಗಿದೆ.</p>.<p>ಜುಲೈನಿಂದ ಆಗಸ್ಟ್ 2ನೇ ವಾರದವರೆಗೆ ಕಸಬಾ ಹೋಬಳಿ 371 ಮಿ.ಮೀ, ದಬ್ಬೇಘಟ್ಟ 323.6 ಮಿ.ಮೀ, ದಂಡಿನಶಿವರ 410 ಮಿ.ಮೀ, ಮಾಯಸಂದ್ರ ಹೋಬಳಿಯಲ್ಲಿ 429.3 ಮಿ.ಮೀ ಮಳೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>