ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಿದ್ದು, ಅಲ್ಲಿ ಮುಂಗಾರು ಬೆಳೆಗಳಾದ ರಾಗಿ, ಜೋಳ, ಸಾಸಿವೆ, ಅವರೆ, ಹರಳು, ತೊಗರಿ, ಹುಚ್ಚೆಳ್ಳು, ಸಜ್ಜೆ ಬಿತ್ತನೆ ಮಾಡಿದ್ದಾರೆ. ರಾಗಿ ಪೈರು ಚೆನ್ನಾಗಿ ಮೊಳಕೆಯೊಡೆದಿದೆ. ಈ ವೇಳೆ ಮಳೆ ಕೈಕೊಟ್ಟಿದ್ದಕ್ಕೆ ರೈತರು ಕುಂಟೆ ಒಡೆಯುವ ಮೂಲಕ ರಾಗಿ ಪೈರು ಒಣಗದಂತೆ ನೋಡಿಕೊಂಡಿದ್ದಾರೆ.