<p>ತುಮಕೂರು: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 22ನೇ ಕಾರ್ಗಿಲ್ ವಿಜಯದ ನೆನೆಪಿಗಾಗಿ ನಿವೃತ್ತ ಯೋಧರನ್ನು ಎಬಿವಿಪಿಯಿಂದ ಸನ್ಮಾನಿಸಲಾಯಿತು.</p>.<p>ನಿವೃತ್ತ ಯೋಧರಾದ ನಂಜುಂಡಯ್ಯ<br />ಮಾತನಾಡಿ, ‘ಕಾರ್ಗಿಲ್ ಯುದ್ಧ ಭೂಮಿ<br />ಯಲ್ಲಿ ಭಾರತವು ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿ 22 ವರ್ಷಗಳಾದವು. ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರು ಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ, ತ್ಯಾಗವನ್ನು ಯುವಪೀಳಿಗೆ ನೆನೆಯುವಂತಾಗಬೇಕು’ ಎಂದರು.</p>.<p>ಈಗಿನ ಯುವಕರು ಸೇನೆ ಸೇರಲು ಮುಂದೆ ಬರಬೇಕು. ಸೇನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಪ್ರಾಣವನ್ನು ಮುಡುಪಾಗಿಟ್ಟು ದೇಶ ಕಾಯುವ ಯೋಧರಿಗೆ ನಮ್ಮ ಜನರು ಋಣಿಯಾಗಿರಬೇಕು ಎಂದು ಹೇಳಿದರು.</p>.<p>ಕಾಲೇಜು ಪ್ರಾಂಶುಪಾಲರಾದ ಲೀಲಾವತಿ, ‘ಕಾರ್ಗಿಲ್ ಯುದ್ಧದಲ್ಲಿ ಸೈನಿಕರ ದೇಶ ಪ್ರೇಮದಿಂದಾಗಿ ಭಾರತ ಜ<br />ಯಗಳಿಸಿತು. ಯುದ್ಧದಲ್ಲಿ 520 ಸೈನಿಕರ ಬಲಿದಾನವಾಯಿತು. ದೇಶಕ್ಕಾಗಿ ಸರ್ವಸ್ವ<br />ವನ್ನು ಅರ್ಪಿಸಿದ ಯೋಧರ ಆದರ್ಶ<br />ಗಳು ಬದುಕಿನ ಬೆಳಕಾಗಬೇಕು’ ಎಂದರು.<br />ನಿವೃತ್ತ ಯೋಧರಾದ ಮುದ್ದಲಿಂಗೇಶ, ನಾಗರಾಜಯ್ಯ, ನಂಜುಂಡಯ್ಯ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಸುಬ್ಬಯ್ಯ, ಶರ್ಮಾ, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ನಗರ ಸಂಘಟನಾ ಕಾರ್ಯದರ್ಶಿ ಶಿವಕುಮಾರ, ನಗರ ಕಾರ್ಯದರ್ಶಿ ಪ್ರತಾಪಸಿಂಹ, ಪದಾಧಿಕಾರಿಗಳಾದ ಪ್ರಮುಖ್, ಅರ್ಪಿತಾ, ಪೃಥ್ವೀರಾಜ್, ಚೈತ್ರಾ, ಸುಷ್ಮಾ, ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತುಮಕೂರು: ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ 22ನೇ ಕಾರ್ಗಿಲ್ ವಿಜಯದ ನೆನೆಪಿಗಾಗಿ ನಿವೃತ್ತ ಯೋಧರನ್ನು ಎಬಿವಿಪಿಯಿಂದ ಸನ್ಮಾನಿಸಲಾಯಿತು.</p>.<p>ನಿವೃತ್ತ ಯೋಧರಾದ ನಂಜುಂಡಯ್ಯ<br />ಮಾತನಾಡಿ, ‘ಕಾರ್ಗಿಲ್ ಯುದ್ಧ ಭೂಮಿ<br />ಯಲ್ಲಿ ಭಾರತವು ಪಾಕಿಸ್ತಾನವನ್ನು ಬಗ್ಗುಬಡಿದು ದಿಗ್ವಿಜಯ ಸಾಧಿಸಿ 22 ವರ್ಷಗಳಾದವು. ಮನೆ, ಕುಟುಂಬ ಸದಸ್ಯರಿಂದ ದೂರವಾಗಿದ್ದುಕೊಂಡು ದೇಶ ರಕ್ಷಣೆಗೆ ಲಕ್ಷಾಂತರ ಯೋಧರು ಗಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ, ತ್ಯಾಗವನ್ನು ಯುವಪೀಳಿಗೆ ನೆನೆಯುವಂತಾಗಬೇಕು’ ಎಂದರು.</p>.<p>ಈಗಿನ ಯುವಕರು ಸೇನೆ ಸೇರಲು ಮುಂದೆ ಬರಬೇಕು. ಸೇನೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಪ್ರಾಣವನ್ನು ಮುಡುಪಾಗಿಟ್ಟು ದೇಶ ಕಾಯುವ ಯೋಧರಿಗೆ ನಮ್ಮ ಜನರು ಋಣಿಯಾಗಿರಬೇಕು ಎಂದು ಹೇಳಿದರು.</p>.<p>ಕಾಲೇಜು ಪ್ರಾಂಶುಪಾಲರಾದ ಲೀಲಾವತಿ, ‘ಕಾರ್ಗಿಲ್ ಯುದ್ಧದಲ್ಲಿ ಸೈನಿಕರ ದೇಶ ಪ್ರೇಮದಿಂದಾಗಿ ಭಾರತ ಜ<br />ಯಗಳಿಸಿತು. ಯುದ್ಧದಲ್ಲಿ 520 ಸೈನಿಕರ ಬಲಿದಾನವಾಯಿತು. ದೇಶಕ್ಕಾಗಿ ಸರ್ವಸ್ವ<br />ವನ್ನು ಅರ್ಪಿಸಿದ ಯೋಧರ ಆದರ್ಶ<br />ಗಳು ಬದುಕಿನ ಬೆಳಕಾಗಬೇಕು’ ಎಂದರು.<br />ನಿವೃತ್ತ ಯೋಧರಾದ ಮುದ್ದಲಿಂಗೇಶ, ನಾಗರಾಜಯ್ಯ, ನಂಜುಂಡಯ್ಯ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಸುಬ್ಬಯ್ಯ, ಶರ್ಮಾ, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ನಗರ ಸಂಘಟನಾ ಕಾರ್ಯದರ್ಶಿ ಶಿವಕುಮಾರ, ನಗರ ಕಾರ್ಯದರ್ಶಿ ಪ್ರತಾಪಸಿಂಹ, ಪದಾಧಿಕಾರಿಗಳಾದ ಪ್ರಮುಖ್, ಅರ್ಪಿತಾ, ಪೃಥ್ವೀರಾಜ್, ಚೈತ್ರಾ, ಸುಷ್ಮಾ, ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>