ಕಾಲೇಜು ಪ್ರಾಂಶುಪಾಲರಾದ ಲೀಲಾವತಿ, ‘ಕಾರ್ಗಿಲ್ ಯುದ್ಧದಲ್ಲಿ ಸೈನಿಕರ ದೇಶ ಪ್ರೇಮದಿಂದಾಗಿ ಭಾರತ ಜ
ಯಗಳಿಸಿತು. ಯುದ್ಧದಲ್ಲಿ 520 ಸೈನಿಕರ ಬಲಿದಾನವಾಯಿತು. ದೇಶಕ್ಕಾಗಿ ಸರ್ವಸ್ವ
ವನ್ನು ಅರ್ಪಿಸಿದ ಯೋಧರ ಆದರ್ಶ
ಗಳು ಬದುಕಿನ ಬೆಳಕಾಗಬೇಕು’ ಎಂದರು.
ನಿವೃತ್ತ ಯೋಧರಾದ ಮುದ್ದಲಿಂಗೇಶ, ನಾಗರಾಜಯ್ಯ, ನಂಜುಂಡಯ್ಯ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕರಾದ ಸುಬ್ಬಯ್ಯ, ಶರ್ಮಾ, ಎಬಿವಿಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಪ್ಪು ಪಾಟೀಲ, ನಗರ ಸಂಘಟನಾ ಕಾರ್ಯದರ್ಶಿ ಶಿವಕುಮಾರ, ನಗರ ಕಾರ್ಯದರ್ಶಿ ಪ್ರತಾಪಸಿಂಹ, ಪದಾಧಿಕಾರಿಗಳಾದ ಪ್ರಮುಖ್, ಅರ್ಪಿತಾ, ಪೃಥ್ವೀರಾಜ್, ಚೈತ್ರಾ, ಸುಷ್ಮಾ, ಉಪಸ್ಥಿತರಿದ್ದರು.