ಮೈಸೂರಿನಲ್ಲಾದರೆ ಶ್ರೀಮಂತ ಕುಟುಂಬದ ಯುವತಿ. ಇಲ್ಲಾದರೆ ಬಡ ರೈತ ಮಹಿಳೆ. ವಿದ್ಯಾರ್ಥಿನಿಗೆ ಸ್ಪಂದಿಸಿದಷ್ಟು, ರೈತ ಮಹಿಳೆಗೆ ಸ್ಪಂದನೆ ಸಿಗಲಿಲ್ಲ. ಅಲ್ಲಿ ಆರೋಪಿಗಳ ಬಂಧನಕ್ಕೆ ಒತ್ತಡ ಹೆಚ್ಚಿದ್ದರೆ, ಇಲ್ಲಿ ಕೇಳುವವರೇ ಇಲ್ಲ. ವಿದ್ಯಾರ್ಥಿಗಳು ಸುತ್ತಾಟಕ್ಕೆ ಹೋಗಿದ್ದರೆ, ಇಲ್ಲಿ ಜಾನುವಾರು ಮೇಯಿಸಲು ಹೋಗಿದ್ದರು. ಇತ್ತೀಚಿನ ಪರಿಸ್ಥಿತಿಯನ್ನು ಗಮನಿಸಿದರೆ ಬೆಟ್ಟ ಪ್ರದೇಶ, ಜಮೀನುಗಳಿಗೆ ಒಬ್ಬಂಟಿಯಾಗಿ ಮಹಿಳೆಯರು ಕೆಲಸ, ಕಾರ್ಯಗಳಿಗೆ ಹೋಗುವುದೇ ಕಷ್ಟಕರ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಭದ್ರತೆ ಇಲ್ಲವಾಗಿದೆ. ಪೊಲೀಸರ ಭಯವೂ ಕಾಣುತ್ತಿಲ್ಲ.