<p><strong>ಗುಬ್ಬಿ</strong>: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಮಳೆ, ಗಾಳಿಗೆ ತಾಲ್ಲೂಕಿನ ಹಲವೆಡೆ ತೆಂಗು, ಅಡಿಕೆ ಹಾಗೂ ರಸ್ತೆ ಬದಿಯ ಮರಗಳು ಮುರಿದುಬಿದ್ದಿವೆ.</p>.<p>ಪಟ್ಟಣದ ಬಿದ್ದಾಂಜನೇಯ ದೇವಾಲಯದ ಸಮೀಪ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಮರವೊಂದು ಮಳೆ ಗಾಳಿಗೆ ಮುರಿದು ಬಿದ್ದಿದ್ದರೂ ಬೆಸ್ಕಾಂ ಇಲಾಖೆ ಗಮನಹರಿಸದೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.</p>.<p>ಇದರಿಂದಾಗಿ ಹಲವೆಡೆ ವಿದ್ಯುತ್ ಇಲ್ಲವಾಗಿ ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತಾಗಿತ್ತು. ಹೆದ್ದಾರಿಗೆ ಹೊಂದಿಕೊಂಡಂತೆ ಇರುವುದರಿಂದ ಸಾಕಷ್ಟು ಅನಾಹುತ ಆಗುವ ಸಂಭವವಿದೆ. ಆದರೂ ಅಧಿಕಾರಿಗಳು ಮುರಿದು ಬಿದ್ದಿರುವ ಮರವನ್ನು ಏಕೆ ತೆರವುಗೊಳಿಸಿಲ್ಲ ಎನ್ನುವುದು ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಅರಣ್ಯ ಮತ್ತು ಬೆಸ್ಕಾಂ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಒಣಗಿರುವ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಆದರೂ ಎರಡೂ ಇಲಾಖೆಯವರು ಒಬ್ಬರ ಮೇಲೊಬ್ಬರು ಬೆರಳು ತೋರುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರೈತ ಸಂಘದ ಕಾರ್ಯದರ್ಶಿ ಲೋಕೇಶ್.</p>.<p>ಪೂರ್ವ ಮುಂಗಾರು ಮಾರುತ ಪ್ರಾರಂಭವಾಗುತ್ತಿರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಮರ ಬಿದ್ದ ತಕ್ಷಣ ತೆರವುಗೊಳಿಸಲು ಮುಂದಾಗಬೇಕಿದೆ. ಅನಾಹುತ ಸಂಭವಿಸಿದಾಗ ಓಡಿಬರುವ ಅಧಿಕಾರಿಗಳು ಅನಾಹುತವಾಗದಂತೆ ತಡೆಯುವ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ವಕೀಲ ಶಶಿಧರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಬ್ಬಿ</strong>: ತಾಲ್ಲೂಕಿನಲ್ಲಿ ಶುಕ್ರವಾರ ಸಂಜೆ ಮಳೆ, ಗಾಳಿಗೆ ತಾಲ್ಲೂಕಿನ ಹಲವೆಡೆ ತೆಂಗು, ಅಡಿಕೆ ಹಾಗೂ ರಸ್ತೆ ಬದಿಯ ಮರಗಳು ಮುರಿದುಬಿದ್ದಿವೆ.</p>.<p>ಪಟ್ಟಣದ ಬಿದ್ದಾಂಜನೇಯ ದೇವಾಲಯದ ಸಮೀಪ ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಮರವೊಂದು ಮಳೆ ಗಾಳಿಗೆ ಮುರಿದು ಬಿದ್ದಿದ್ದರೂ ಬೆಸ್ಕಾಂ ಇಲಾಖೆ ಗಮನಹರಿಸದೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿತ್ತು.</p>.<p>ಇದರಿಂದಾಗಿ ಹಲವೆಡೆ ವಿದ್ಯುತ್ ಇಲ್ಲವಾಗಿ ಕುಡಿಯುವ ನೀರಿಗೂ ತೊಂದರೆ ಅನುಭವಿಸುವಂತಾಗಿತ್ತು. ಹೆದ್ದಾರಿಗೆ ಹೊಂದಿಕೊಂಡಂತೆ ಇರುವುದರಿಂದ ಸಾಕಷ್ಟು ಅನಾಹುತ ಆಗುವ ಸಂಭವವಿದೆ. ಆದರೂ ಅಧಿಕಾರಿಗಳು ಮುರಿದು ಬಿದ್ದಿರುವ ಮರವನ್ನು ಏಕೆ ತೆರವುಗೊಳಿಸಿಲ್ಲ ಎನ್ನುವುದು ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.</p>.<p>ಅರಣ್ಯ ಮತ್ತು ಬೆಸ್ಕಾಂ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಒಣಗಿರುವ ಹಾಗೂ ಬೀಳುವ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಆದರೂ ಎರಡೂ ಇಲಾಖೆಯವರು ಒಬ್ಬರ ಮೇಲೊಬ್ಬರು ಬೆರಳು ತೋರುತ್ತಾ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ ರೈತ ಸಂಘದ ಕಾರ್ಯದರ್ಶಿ ಲೋಕೇಶ್.</p>.<p>ಪೂರ್ವ ಮುಂಗಾರು ಮಾರುತ ಪ್ರಾರಂಭವಾಗುತ್ತಿರುವುದರಿಂದ ಅಧಿಕಾರಿಗಳು ಎಚ್ಚೆತ್ತುಕೊಂಡು ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸಬೇಕು. ಮರ ಬಿದ್ದ ತಕ್ಷಣ ತೆರವುಗೊಳಿಸಲು ಮುಂದಾಗಬೇಕಿದೆ. ಅನಾಹುತ ಸಂಭವಿಸಿದಾಗ ಓಡಿಬರುವ ಅಧಿಕಾರಿಗಳು ಅನಾಹುತವಾಗದಂತೆ ತಡೆಯುವ ಮುನ್ನೆಚ್ಚರಿಕೆ ವಹಿಸಬೇಕು ಎನ್ನುತ್ತಾರೆ ವಕೀಲ ಶಶಿಧರ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>