ಕಳೆದ ವರ್ಷ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರಿಗೆ ಕಳೆದ ರಾತ್ರಿ ಸುರಿದ ಮಳೆ ಚೈತನ್ಯ ತುಂಬಿದ್ದು, ನೀರಿಲ್ಲದೆ ಒಣಗಿದ್ದ ತಾಲ್ಲೂಕಿನ ಸಣ್ಣ ಪುಟ್ಟ ಕೆರೆಗಳು ಸೇರಿದಂತೆ ಜಂಪೇನಹಳ್ಳಿ ಕೆರೆ ಒಂದೇ ರಾತ್ರಿಯಲ್ಲಿ ನೀರಿನಿಂದ ಮೈದುಂಬಿವೆ. ಕಳೆದ ವರ್ಷ ಮಳೆಗಾಲದ ಆರಂಭದಿಂದಲೂ ಸಣ್ಣ ಕಟ್ಟೆ ತುಂಬುವಷ್ಟು ಕೂಡ ಮಳೆಯಾಗಿರಲಿಲ್ಲ.