ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಮಕೂರು: ಬರ ನಿರ್ವಹಣೆಗೆ ಸಹಾಯವಾಣಿ

Published 7 ಮೇ 2024, 13:38 IST
Last Updated 7 ಮೇ 2024, 13:38 IST
ಅಕ್ಷರ ಗಾತ್ರ

ತುಮಕೂರು: ‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ ತೀವ್ರ ಬರದಿಂದ ಜನರು ತತ್ತರಿಸಿದ್ದ ಸಮಯದಲ್ಲಿ ಸಹಾಯವಾಣಿ ತೆರೆದು ಸ್ಪಂದಿಸದ ಜಿಲ್ಲಾ ಆಡಳಿತ, ಈಗ ಮಳೆಗಾಲ ಆರಂಭವಾಗುವ ಹೊತ್ತಿನಲ್ಲಿ ಸಹಾಯವಾಣಿ ತೆರೆದಿದೆ.

ಜಿಲ್ಲೆಯ 10 ತಾಲ್ಲೂಕು ಕೇಂದ್ರ ಹಾಗೂ 3 ಉಪವಿಭಾಗಾಧಿಕಾರಿ ಕಚೇರಿಗಳಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ರೈತರ ಬೆಳೆ ನಷ್ಟ ಪರಿಹಾರ, ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ಮೇವಿನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ದೂರು ಸಲ್ಲಿಸಬಹುದಾಗಿದೆ.

ಸಹಾಯವಾಣಿ ಕೇಂದ್ರ: ತುಮಕೂರು ಜಿಲ್ಲೆ 8162278718, ಚಿಕ್ಕನಾಯಕನಹಳ್ಳಿ ತಾಲೂಕು 08133-267242, ಗುಬ್ಬಿ 08131-222234, ಕೊರಟಗೆರೆ 08138-232153, ಕುಣಿಗಲ್ 08132-220239, ಮಧುಗಿರಿ 08137-200500, ಪಾವಗಡ 08136-244242, ಶಿರಾ 08135-200842, ತಿಪಟೂರು 08134-251039, ತುಮಕೂರು 0816-2278496, ತುರುವೇಕೆರೆ 08139-287325.

ತುಮಕೂರು ಉಪವಿಭಾಗಾಧಿಕಾರಿ ಕಚೇರಿ 0816-2278493, ತಿಪಟೂರು ಉಪವಿಭಾಗಾಧಿಕಾರಿ ಕಚೇರಿ (08134-251085), ಮಧುಗಿರಿ ಉಪವಿಭಾಗಾಧಿಕಾರಿ ಕಚೇರಿ (08137-200822).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT