ಇಷ್ಟಕ್ಕೆ ಸುಮ್ಮನಾಗದ ಪಾಷಾ ಮತ್ತೆ ₹3 ಲಕ್ಷ ತರುವಂತೆ ಹಿಂಸೆ ನೀಡಿದ್ದ. ಹಿಂಸೆ ತಾಳಲಾರದೆ ಆಶಾ 2018ರ ಸೆಪ್ಟೆಂಬರ್ 21ರಂದು ತಮ್ಮ ಮನೆಯ ಹತ್ತಿರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸ್ ಇನ್ಸ್ಪೆಕ್ಟರ್ ಕೆ.ಎಸ್. ನಾಗರಾಜು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಎಸ್. ಮಲ್ಲಿಕಾರ್ಜುನಸ್ವಾಮಿ ವಿಚಾರಣೆ ನಡೆಸಿದರು. ಸರ್ಕಾರದ ಪರವಾಗಿ ವಕೀಲರಾದ ಕವಿತಾ ವಾದ ಮಂಡಿಸಿದ್ದರು.