ಆಗಸ್ಟ್ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದರಿಂದ ರಾಗಿ ಬಿತ್ತನೆಗೆ ಹೆಚ್ಚು ನೆರವಾಗಿದೆ. ಆದರೆ ಸೆಪ್ಟೆಂಬರ್ನಲ್ಲಿ ಮತ್ತೆ ಮಳೆ ಕೈಕೊಟ್ಟಿರುವುದು ಆತಂಕದ ಕರಿಮೋಡ ಕವಿಯುವಂತೆ ಮಾಡಿದೆ. ಈ ತಿಂಗಳ ಮೊದಲ ವಾರ ಅಲ್ಲಲ್ಲಿ ಚದುರಿದಂತೆ ಅತ್ಯಲ್ಪ ಪ್ರಮಾಣದಲ್ಲಿ ಮಳೆಯಾಗಿದೆ. ಅತಿ ಹೆಚ್ಚು ರಾಗಿ ಬೆಳೆಯುವ ಕುಣಿಗಲ್ ತುರುವೇಕೆರೆ ತಿಪಟೂರು ಭಾಗದಲ್ಲಿ ಮಳೆಯ ಸುಳಿವೇ ಇಲ್ಲವಾಗಿದೆ. ಮೇಲು ಗೊಬ್ಬರ ಹಾಕಿ ಇತರೆ ಕೃಷಿ ಚಟುವಟಿಕೆಗೆ ಮಳೆ ಅಗತ್ಯವಿದೆ. ಒಂದು ವಾರದಿಂದ ವರುಣನ ಸುಳಿವೇ ಕಾಣುತ್ತಿಲ್ಲ. ಮುಂದಿನ ಕೆಲವು ದಿನಗಳ ಕಾಲ ಒಣಹವೆ ಮುಂದುವರಿದರೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಮೋಡ ಮುಸುಕಿದ ವಾತಾವರಣವಿದ್ದು ತಾಪಮಾನ ಏರಿಕೆಯಾಗಿಲ್ಲ. ಹಾಗಾಗಿ ಬೆಳೆ ಸದ್ಯಕ್ಕೆ ಒಣಗಿದಂತೆ ಕಾಣುತ್ತಿಲ್ಲ. ಆದರೆ ಬೆಳವಣಿಗೆಗೆ ತೇವಾಂಶ ಬೇಕಾಗಿದೆ.