‘ನನ್ನ ಜಮೀನನ್ನು ಕಾನೂನು ರೀತಿಯಲ್ಲಿ ಅಳತೆ ಮಾಡಿ ಗಡಿ ಕಲ್ಲು ಹಾಕಿಕೊಟ್ಟರೆ ಸಮಸ್ಯೆ ಬಗೆಹರಿಯುವುದು. ಆದರೆ ಭೂಮಾಪಕರು ಇದಕ್ಕೆ ಸ್ಪಂದಿಸದೆ ನನ್ನನ್ನು ಸುಮ್ಮನೆ ಕಚೇರಿಗೆ ಅಲೆಸುತ್ತಿದ್ದಾರೆ. ನಾನು ಮಂತ್ರಿಗಳಿಂದ ಪತ್ರ ತಂದುಕೊಟ್ಟರೂ ಭೂಮಾಪಕರು ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ. ತಾಲ್ಲೂಕು ತಹಶೀಲ್ದಾರ್ ಹೇಳಿದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇವರ ಭ್ರಷ್ಟಾಚಾರಕ್ಕೆ ಬೇಸತ್ತು ನಾನು ಧರಣಿ ಕುಳಿತಿದ್ದೇನೆ. ನನಗೆ ನ್ಯಾಯ ಸಿಗಲೇಬೇಕು’ ಎಂದು ಒತ್ತಾಯಿಸಿದರು.