ಆರೋಪಿಗಳ ಪತ್ತೆ ತಂಡ ರಚಿಸಲಾಗಿತ್ತು. ಹೊಸ ಬಡಾವಣೆ ಪೊಲೀಸ್ ಠಾಣೆ ಪಿಎಸ್ಐ ಎಚ್.ಡಿ.ವಿದ್ಯಾಶ್ರೀ, ಸಿಬ್ಬಂದಿಯಾದ ನೀಲಕಂಠಯ್ಯ, ಕುಮಾರಸ್ವಾಮಿ, ಮಂಜುನಾಥ, ಲೋಕೇಶ್, ನಿಜಾಮುದ್ದೀನ್ ಶಾ, ಈಶ್ವರ ಅರಕೆರಿ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ತಿಳಿಸಿದ್ದಾರೆ.