<p><strong>ತುಮಕೂರು: </strong>ಇಂದು ಸುಲಭವಾಗಿ ಯಾರನ್ನೂ ಪ್ರಶ್ನಿಸುವಂತಿಲ್ಲ. ಆಳುವವರು ತಪ್ಪು ಮಾಡಿದರೂ ಆರೋಗ್ಯಕರ ವಿಮರ್ಶೆ ಮಾಡುವಂತಿಲ್ಲ. ಎಲ್ಲವನ್ನೂ ಸುಮ್ಮನೆ ಒಪ್ಪಿಕೊಳ್ಳಬೇಕಿದೆ. ಪ್ರಶ್ನೆ ಮಾಡುವವರ ಮೇಲೆ ಹಲ್ಲೆಗಳು ಆಗುತ್ತಿವೆ ಎಂದು ಚಿಂತಕ ಜಿ.ವಿ.ಆನಂದಮೂರ್ತಿ ಅವರು ಆತಂಕ ವ್ಯಕ್ತಪಡಿಸಿದರು.</p>.<p>ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಗರಿಕೆ ಮನೆ ಕುಟುಂಬದವರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಕನಕ ಚಿಂತನ ಮಾಲೆ: ಎಸ್.ಕೃಷ್ಣಪ್ಪ ಅವರ ಕನಕದಾಸರು ಮತ್ತು ಪಶುಪಾಲನಾ ಪರಂಪರೆ ಸಂಶೋಧನಾ ಕೃತಿ ಕುರಿತ ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕನಕರ ಕಾಲದಲ್ಲಿಯೂ ಪ್ರಶ್ನಿಸಲು ಅಡೆತಡೆಗಳು ಇದ್ದವು. ಆದರೆ ಹಲ್ಲೆಗಳು ಆಗುತ್ತಿರಲಿಲ್ಲ. ಇಂದಿನಂತೆ ಗುಂಡಿಕ್ಕುವ ಪ್ರವೃತ್ತಿ ಇರಲಿಲ್ಲ ಎಂದರು.</p>.<p>ಭಿನ್ನಮತ, ಬಹುಸಂಸ್ಕೃತಿಯೇ ನಮ್ಮ ಸಮಾಜವನ್ನು ಪೊರೆಯುವ ಮುಖ್ಯ ಅಂಶಗಳು. ಇವುಗಳಿಗೆ ದಕ್ಕೆ ಬಂದಾಗ ಪ್ರಶ್ನಿಸುವವರನ್ನು ದೇಶ ಬಿಟ್ಟು ಹೋಗಲು ಹೇಳಲಾಗುತ್ತಿದೆ ಎಂದು ವಿಷಾದಿಸಿದರು.</p>.<p>ಕನಕರನ್ನು ಹರಿದಾಸರ ಪಂಥಕ್ಕೆ ಸೇರಿಸಲಾಗಿದೆ. ಹರಿದಾಸರು ದೈವತ್ವ, ಭಕ್ತಿ ಪ್ರಧಾನ, ದೇವಾಲಯ, ಜಾತಿ ಸಂಸ್ಕೃತಿ ಒಪ್ಪಿದವರು. ಆದರೆ, ಕನಕರ ಮಾರ್ಗವೇ ಬೇರೆಯಾಗಿತ್ತು. ಅವರು ಹರಿದಾಸರು ಪ್ರತಿನಿಧಿಸುವ ಸಂಸ್ಕೃತಿಯನ್ನು ಪ್ರಶ್ನಿಸಿದರು ಎಂದು ತಿಳಿಸಿದರು.</p>.<p>ಕನಕರು ‘ರಾಮಧಾನ್ಯ ಚರಿತೆ’ ಕೃತಿ ಮೂಲಕ ಶೂದ್ರ ಮತ್ತು ಶೂದ್ರರಲ್ಲದ ಸಮುದಾಯಗಳ ನಡುವಿನ ಆಹಾರ ಪದ್ಧತಿಯ ತರತಮವನ್ನು ಹೇಳಿದ್ದಾರೆ. ಶೂದ್ರರ ಆಹಾರ ಪದ್ಧತಿಯೂ ಕೀಳಲ್ಲ ಎಂದು ಸಮರ್ಥಿಸಿದವರು ಕನಕರು ಎಂದು ಹೇಳಿದರು.</p>.<p>ಕನಕರು ಏನನ್ನು ಪ್ರಶ್ನಿಸಿದರು ಎಂಬುದನ್ನು ಇಂದು ಮರೆಮಾಚಿ, ಅವರು ರಚಿಸಿದ ಸ್ತುತಿ ಕೀರ್ತನೆಗಳನ್ನು ಮಾತ್ರ ಎತ್ತಿ ಹಿಡಿಯಲಾಗುತ್ತಿದೆ ಎಂದು ಬೇಸರಿಸಿದರು.</p>.<p>ಕನಕ ಮತ್ತು ಕುವೆಂಪು ಪುರಾಣಗಳನ್ನು ಪುನರ್ ರಚನೆ ಮಾಡಿದರು. ಹರಿದಾಸಪಂಥವು ತೊಡಿಸಿದ್ದ ಕಣ್ಪಟ್ಟಿಯನ್ನು ಕಳಚಿ ಪುರಾಣಗಳನ್ನು ಓದುವುದನ್ನು ಕಲಿಸಿದರು. ಈ ಇಬ್ಬರೂ ಶೂದ್ರ ಸಮುದಾಯದಿಂದಲೇ ಬಂದವರು ಎಂದು ತಿಳಿಸಿದರು.</p>.<p>ಲೇಖಕ ಸುರೇಶ ನಾಗಲಮಡಿಕೆ ಪುಸ್ತಕದ ಕುರಿತು ಮಾತನಾಡುತ್ತ, ಕೃತಿ ಸತ್ಯಾಂಶಗಳನ್ನು ಶೋಧಿಸುವ, ಕನಕರನ್ನು ಬಹುಮುಖ ಆಯಾಮಗಳಲ್ಲಿ ಅಧ್ಯಯನ ಮಾಡುವ ಮಾದರಿಯಲ್ಲಿದೆ. ಜನಪದರ ಮಹಾಕಾವ್ಯಗಳಾದ ಮಂಟೇಸ್ವಾಮಿ, ಮಾದಪ್ಪ, ಹಾಲುಮತ, ಜುಂಜಪ್ಪರ ಮೌಖಿಕ ಪರಂಪರೆಯ ಹಿನ್ನಲೆಯಲ್ಲಿ ಕನಕರನ್ನು ಜೋಡಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ ಎಂದರು.</p>.<p>ಲೇಖಕ ಕೆ.ಪಿ.ನಾಗರಾಜ್, ಕನಕರ ಕಾಲಕ್ಕೆ ನಾಲ್ಕು ದಿಕ್ಕುಗಳಲ್ಲೂ ಪಶುಪಾಲನೆಯು ಜ್ವಲಂತ ಪರಂಪರೆಯಾಗಿತ್ತು. ಆ ಪರಂಪರೆಯಲ್ಲಿ ಅನುಕಂಪವಿತ್ತು, ಜೀವ ಕಾರುಣ್ಯವಿತ್ತು, ಪಶುದಯೆ ಇತ್ತು. ಅದರ ಹಿನ್ನಲೆಯಲ್ಲಿ ರಚಿತವಾದ ಈ ಕೃತಿ ಅಧ್ಯಯನಶೀಲವಾಗಿದೆ ಎಂದು ಪ್ರಶಂಸಿದರು.</p>.<p><strong>ಕೀರ್ತನೆಗಳಿಗೆ ತಲೆದೂಗಿದ ಸಭಿಕರು</strong></p>.<p>ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ವಾನ್ ಲಕ್ಷ್ಮಣ್ದಾಸ್ ಹಾಗೂ ಎಂಪ್ರೆಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕನಕದಾಸರ ರಚನೆಗಳನ್ನು ಮಧುರವಾಗಿ ಹಾಡಿದರು.</p>.<p>ಭಜಿಸಿ ಬದುಕೆಲೆ ಮಾನವ...., ಗುರುವಿನ ಮುಖದಿಂದ ಗುರುವ ಕಂಡವರಿಲ್ಲ..., ಕುಲ ಕುಲ ಎನ್ನುತ್ತಿಹರು..., ಕುಲ ಕುಲವೆಂದು ಹೊಡದಾಡದಿರಿ..., ಪರರ ಹಿತಕ್ಕೆ ಇಲ್ಲದವನ ಶರೀರ ಏತಕ್ಕೆ.... ಎಂಬ ಸಾಲುಗಳುಳ್ಳ ಕೀರ್ತನೆಗಳನ್ನು ಸಂಗೀತಗಾರರು ಸುಸ್ವರದಲ್ಲಿ ಪ್ರಸ್ತುತಪಡಿಸಿದಾಗ ಸಭಿಕರೆಲ್ಲರೂ ತಲೆದೂಗಿದರು.</p>.<p>ಈ ಸಂಗೀತ ಕಛೇರಿಗೆ ಹಾರ್ಮೋನಿಯಂನಲ್ಲಿ ಶಿವಲಿಂಗಶೆಟ್ಟಿ, ತಬಲದಲ್ಲಿ ಶ್ರೀಧರ್ ಅವರು ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಇಂದು ಸುಲಭವಾಗಿ ಯಾರನ್ನೂ ಪ್ರಶ್ನಿಸುವಂತಿಲ್ಲ. ಆಳುವವರು ತಪ್ಪು ಮಾಡಿದರೂ ಆರೋಗ್ಯಕರ ವಿಮರ್ಶೆ ಮಾಡುವಂತಿಲ್ಲ. ಎಲ್ಲವನ್ನೂ ಸುಮ್ಮನೆ ಒಪ್ಪಿಕೊಳ್ಳಬೇಕಿದೆ. ಪ್ರಶ್ನೆ ಮಾಡುವವರ ಮೇಲೆ ಹಲ್ಲೆಗಳು ಆಗುತ್ತಿವೆ ಎಂದು ಚಿಂತಕ ಜಿ.ವಿ.ಆನಂದಮೂರ್ತಿ ಅವರು ಆತಂಕ ವ್ಯಕ್ತಪಡಿಸಿದರು.</p>.<p>ರಾಷ್ಟ್ರೀಯ ಸಂತ ಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಎಂಪ್ರೆಸ್ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಗರಿಕೆ ಮನೆ ಕುಟುಂಬದವರ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ‘ಕನಕ ಚಿಂತನ ಮಾಲೆ: ಎಸ್.ಕೃಷ್ಣಪ್ಪ ಅವರ ಕನಕದಾಸರು ಮತ್ತು ಪಶುಪಾಲನಾ ಪರಂಪರೆ ಸಂಶೋಧನಾ ಕೃತಿ ಕುರಿತ ಅವಲೋಕನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಕನಕರ ಕಾಲದಲ್ಲಿಯೂ ಪ್ರಶ್ನಿಸಲು ಅಡೆತಡೆಗಳು ಇದ್ದವು. ಆದರೆ ಹಲ್ಲೆಗಳು ಆಗುತ್ತಿರಲಿಲ್ಲ. ಇಂದಿನಂತೆ ಗುಂಡಿಕ್ಕುವ ಪ್ರವೃತ್ತಿ ಇರಲಿಲ್ಲ ಎಂದರು.</p>.<p>ಭಿನ್ನಮತ, ಬಹುಸಂಸ್ಕೃತಿಯೇ ನಮ್ಮ ಸಮಾಜವನ್ನು ಪೊರೆಯುವ ಮುಖ್ಯ ಅಂಶಗಳು. ಇವುಗಳಿಗೆ ದಕ್ಕೆ ಬಂದಾಗ ಪ್ರಶ್ನಿಸುವವರನ್ನು ದೇಶ ಬಿಟ್ಟು ಹೋಗಲು ಹೇಳಲಾಗುತ್ತಿದೆ ಎಂದು ವಿಷಾದಿಸಿದರು.</p>.<p>ಕನಕರನ್ನು ಹರಿದಾಸರ ಪಂಥಕ್ಕೆ ಸೇರಿಸಲಾಗಿದೆ. ಹರಿದಾಸರು ದೈವತ್ವ, ಭಕ್ತಿ ಪ್ರಧಾನ, ದೇವಾಲಯ, ಜಾತಿ ಸಂಸ್ಕೃತಿ ಒಪ್ಪಿದವರು. ಆದರೆ, ಕನಕರ ಮಾರ್ಗವೇ ಬೇರೆಯಾಗಿತ್ತು. ಅವರು ಹರಿದಾಸರು ಪ್ರತಿನಿಧಿಸುವ ಸಂಸ್ಕೃತಿಯನ್ನು ಪ್ರಶ್ನಿಸಿದರು ಎಂದು ತಿಳಿಸಿದರು.</p>.<p>ಕನಕರು ‘ರಾಮಧಾನ್ಯ ಚರಿತೆ’ ಕೃತಿ ಮೂಲಕ ಶೂದ್ರ ಮತ್ತು ಶೂದ್ರರಲ್ಲದ ಸಮುದಾಯಗಳ ನಡುವಿನ ಆಹಾರ ಪದ್ಧತಿಯ ತರತಮವನ್ನು ಹೇಳಿದ್ದಾರೆ. ಶೂದ್ರರ ಆಹಾರ ಪದ್ಧತಿಯೂ ಕೀಳಲ್ಲ ಎಂದು ಸಮರ್ಥಿಸಿದವರು ಕನಕರು ಎಂದು ಹೇಳಿದರು.</p>.<p>ಕನಕರು ಏನನ್ನು ಪ್ರಶ್ನಿಸಿದರು ಎಂಬುದನ್ನು ಇಂದು ಮರೆಮಾಚಿ, ಅವರು ರಚಿಸಿದ ಸ್ತುತಿ ಕೀರ್ತನೆಗಳನ್ನು ಮಾತ್ರ ಎತ್ತಿ ಹಿಡಿಯಲಾಗುತ್ತಿದೆ ಎಂದು ಬೇಸರಿಸಿದರು.</p>.<p>ಕನಕ ಮತ್ತು ಕುವೆಂಪು ಪುರಾಣಗಳನ್ನು ಪುನರ್ ರಚನೆ ಮಾಡಿದರು. ಹರಿದಾಸಪಂಥವು ತೊಡಿಸಿದ್ದ ಕಣ್ಪಟ್ಟಿಯನ್ನು ಕಳಚಿ ಪುರಾಣಗಳನ್ನು ಓದುವುದನ್ನು ಕಲಿಸಿದರು. ಈ ಇಬ್ಬರೂ ಶೂದ್ರ ಸಮುದಾಯದಿಂದಲೇ ಬಂದವರು ಎಂದು ತಿಳಿಸಿದರು.</p>.<p>ಲೇಖಕ ಸುರೇಶ ನಾಗಲಮಡಿಕೆ ಪುಸ್ತಕದ ಕುರಿತು ಮಾತನಾಡುತ್ತ, ಕೃತಿ ಸತ್ಯಾಂಶಗಳನ್ನು ಶೋಧಿಸುವ, ಕನಕರನ್ನು ಬಹುಮುಖ ಆಯಾಮಗಳಲ್ಲಿ ಅಧ್ಯಯನ ಮಾಡುವ ಮಾದರಿಯಲ್ಲಿದೆ. ಜನಪದರ ಮಹಾಕಾವ್ಯಗಳಾದ ಮಂಟೇಸ್ವಾಮಿ, ಮಾದಪ್ಪ, ಹಾಲುಮತ, ಜುಂಜಪ್ಪರ ಮೌಖಿಕ ಪರಂಪರೆಯ ಹಿನ್ನಲೆಯಲ್ಲಿ ಕನಕರನ್ನು ಜೋಡಿಸುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ ಎಂದರು.</p>.<p>ಲೇಖಕ ಕೆ.ಪಿ.ನಾಗರಾಜ್, ಕನಕರ ಕಾಲಕ್ಕೆ ನಾಲ್ಕು ದಿಕ್ಕುಗಳಲ್ಲೂ ಪಶುಪಾಲನೆಯು ಜ್ವಲಂತ ಪರಂಪರೆಯಾಗಿತ್ತು. ಆ ಪರಂಪರೆಯಲ್ಲಿ ಅನುಕಂಪವಿತ್ತು, ಜೀವ ಕಾರುಣ್ಯವಿತ್ತು, ಪಶುದಯೆ ಇತ್ತು. ಅದರ ಹಿನ್ನಲೆಯಲ್ಲಿ ರಚಿತವಾದ ಈ ಕೃತಿ ಅಧ್ಯಯನಶೀಲವಾಗಿದೆ ಎಂದು ಪ್ರಶಂಸಿದರು.</p>.<p><strong>ಕೀರ್ತನೆಗಳಿಗೆ ತಲೆದೂಗಿದ ಸಭಿಕರು</strong></p>.<p>ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ವಿದ್ವಾನ್ ಲಕ್ಷ್ಮಣ್ದಾಸ್ ಹಾಗೂ ಎಂಪ್ರೆಸ್ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಕನಕದಾಸರ ರಚನೆಗಳನ್ನು ಮಧುರವಾಗಿ ಹಾಡಿದರು.</p>.<p>ಭಜಿಸಿ ಬದುಕೆಲೆ ಮಾನವ...., ಗುರುವಿನ ಮುಖದಿಂದ ಗುರುವ ಕಂಡವರಿಲ್ಲ..., ಕುಲ ಕುಲ ಎನ್ನುತ್ತಿಹರು..., ಕುಲ ಕುಲವೆಂದು ಹೊಡದಾಡದಿರಿ..., ಪರರ ಹಿತಕ್ಕೆ ಇಲ್ಲದವನ ಶರೀರ ಏತಕ್ಕೆ.... ಎಂಬ ಸಾಲುಗಳುಳ್ಳ ಕೀರ್ತನೆಗಳನ್ನು ಸಂಗೀತಗಾರರು ಸುಸ್ವರದಲ್ಲಿ ಪ್ರಸ್ತುತಪಡಿಸಿದಾಗ ಸಭಿಕರೆಲ್ಲರೂ ತಲೆದೂಗಿದರು.</p>.<p>ಈ ಸಂಗೀತ ಕಛೇರಿಗೆ ಹಾರ್ಮೋನಿಯಂನಲ್ಲಿ ಶಿವಲಿಂಗಶೆಟ್ಟಿ, ತಬಲದಲ್ಲಿ ಶ್ರೀಧರ್ ಅವರು ಸಾಥ್ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>