‘ಸಮಸ್ಯೆ ಇದೆ ಸರ್. ಕಳೆದ ವರ್ಷದ ಟ್ಯಾಂಕರ್ ಮೂಲಕ ನೀರು ಪಡೆದೆವು’ ಎಂದು ಗ್ರಾಮಸ್ಥರು ತಿಳಿಸಿದಾಗ, ‘ನೀರಿನ ಸಮಸ್ಯೆ ಇದೆ ಎಂದು ನನ್ನ ಬಳಿ ಒಂದು ಮಾತು ಕೇಳಿದ್ದೀರಾ. ನನ್ನ ಬಳಿ ಒಬ್ಬನೂ ಬಂದಿಲ್ಲ. ಇಡೀ ಜಿಲ್ಲೆಯಲ್ಲಿಯೇ ಕೆಟ್ಟ ಪಂಚಾಯಿತಿ ಮಾಡಿದ್ದೀರಾ. ನರೇಗಾ ಯೋಜನೆಯಲ್ಲಿ ನೋಂದಣಿಯೇ ಇಲ್ಲ. ಒಳ್ಳೆಯ ಕೆಲಸ ಮಾಡುವುದು ಬಿಟ್ಟು ಹೀಗೆ ಕೆಟ್ಟ ಕೆಲಸ ಮಾಡುತ್ತೀರಿ ಎಂದು ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.